ಬದ್ಲಾಪುರ್ ಸಿನೆಮಾದಲ್ಲಿ ವರುಣ್ ಧವನ್ 
ಬಾಲಿವುಡ್

'ಬದ್ಲಾಪುರ್' ನನ್ನ ಅತಿ ಕಡಿಮೆ ಬಜೆಟ್ ಚಲನಚಿತ್ರ: ವರುಣ್ ಧವನ್

ತಮ್ಮ ಮುಂಬರುತ್ತಿರುವ ಸಿನೆಮಾ 'ಬದ್ಲಾಪುರ್' ಸಿನೆಮಾ ತಮ್ಮ ಅತಿ ಕಡಿಮೆ ಬಜೆಟ್ ನ ಚಲನಚಿತ್ರ ಎಂದಿದ್ದಾರೆ

ಮುಂಬೈ: ತಮ್ಮ ಮುಂಬರುತ್ತಿರುವ ಸಿನೆಮಾ 'ಬದ್ಲಾಪುರ್' ಸಿನೆಮಾ ತಮ್ಮ ಅತಿ ಕಡಿಮೆ ಬಜೆಟ್ ನ ಚಲನಚಿತ್ರ ಎಂದಿದ್ದಾರೆ ನಟ ವರುಣ್ ಧವನ್.

"ಮಾಧ್ಯಮದ ಪ್ರತಿಕ್ರಿಯೆ ನೋಡಿ ನನಗೆ ಆಶ್ಚರ್ಯವಾಗಿದೆ. ಮಾಧ್ಯಮ ಸಿನೆಮಾವನ್ನು ಬಹಳಷ್ಟು ಬೆಂಬಲಿಸಿದೆ. ಇದು ೨೫ ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಲನಚಿತ್ರ. ನನ್ನ ಚಿತ್ರಗಳಲ್ಲಿ ಅತಿ ಕಡಿಮೆ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರ, ಈ ಚಲನಚಿತ್ರಕ್ಕೆ ಮೀಡಿಯಾ ಬಹಳಷ್ಟು ಬೆಂಬಲ ನೀಡಿದೆ" ಎಂದಿದ್ದಾರೆ ವರುಣ್. ಈ ಹಿಂದೆ ದೊಡ್ಡ ಬ್ಯಾನರ್ ಚಿತ್ರಗಳಾದ 'ಸ್ಟೂಡೆಂಟ್ ಆಫ್ ಇಯರ್' ಮತ್ತು 'ಹಮ್ಟಿ ಶರ್ಮಾ ಕಿ ದುಲ್ಹನಿಯಾ' ಚಿತ್ರಗಳಲ್ಲಿ ವರುಣ್ ನಟಿಸಿದ್ದರು.

ಶ್ರೀರಾಮ್ ರಾಘವನ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಯಾಮಿ ಗೌತಮ್ ಮತ್ತು ಹೂಮಾ ಕುರೇಷಿ ಕೂಡ ನಟಿಸಿದ್ದಾರೆ.

'ಚಾಕಲೇಟ್ ಬಾಯ್' ಛಾಯೆಯಲ್ಲೇ ನಟಿಸುತ್ತಿದ್ದ ವರುಣ್ ಫೆಬ್ರವರಿ ೨೦ ರಂದು ಬಿಡುಗಡೆಯಾಗುತ್ತಿರುವ ಈ ಸಿನೆಮಾದ ಹೊಸ ರೀತಿಯ ಪಾತ್ರಕ್ಕೆ ಒಗ್ಗಿಕೊಳ್ಳುವುದು ಕಷ್ಟದ ಕೆಲಸವಾಗಿತ್ತು ಎನ್ನುತ್ತಾರೆ.

"ಈ ಸಿನೆಮಾಗೆ ಬಹಳಷ್ಟು ಸಿದ್ಧತೆ ಬೇಕಾಗಿತ್ತು. ಶ್ರೀರಾಮ್ ಎಲ್ಲವನ್ನೂ ಉತ್ತಮ ರೀತಿಯಲ್ಲಿ ಯೋಜಿಸಿದ್ದರು. ಇಗತ್ಪುರಿಯಲ್ಲಿ ಚಿತ್ರೀಕರಣ ಮಾಡಿದೆವು. ನಾನು ನಿಜ ಜೀವನದಲ್ಲಿ ಈ ರೀತಿಯ ಮನುಷ್ಯನಲ್ಲ, ಆದುದರಿಂದ ಈ ಪಾತ್ರಕ್ಕೆ ಹೊಂದಿಕೊಳ್ಳುವುದು ಬಹಳ ಕಷ್ಟವಾಯಿತು, ಆದರೆ ಶ್ರೀರಾಮ್ ನನಗೆ ಬಹಳ ಸಹಾಯ ಮಾಡಿದರು" ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT