'ಮಸಾನ್' ಚಿತ್ರದ ದೃಶ್ಯ 
ಬಾಲಿವುಡ್

'ಮಸಾನ್' ಹಿಂದಿಯ ಅತ್ಯುತ್ತಮ ಚಲನಚಿತ್ರಗಳಲ್ಲೊಂದು: ಜಾವೇದ್ ಅಕ್ತರ್

'ಮಸಾನ್' ಚಿತ್ರ ನೋಡಿ ಮನಸೋತಿರುವ ಖ್ಯಾತ ಕವಿ-ಗೀತರಚನಕಾರ ಜಾವೇದ್ ಅಕ್ತರ್ "ಇದು ಹಿಂದಿ ಸಿನೆಮಾರಂಗದಲ್ಲೇ ಅತ್ಯುತ್ತಮ ಚಲನಚಿತ್ರಗಳಲ್ಲೊಂದು"

ಮುಂಬೈ: 'ಮಸಾನ್' ಚಿತ್ರ ನೋಡಿ ಮನಸೋತಿರುವ ಖ್ಯಾತ ಕವಿ-ಗೀತರಚನಕಾರ ಜಾವೇದ್ ಅಕ್ತರ್ "ಇದು ಹಿಂದಿ ಸಿನೆಮಾರಂಗದಲ್ಲೇ ಅತ್ಯುತ್ತಮ ಚಲನಚಿತ್ರಗಳಲ್ಲೊಂದು" ಎಂದಿದ್ದಾರೆ.

ಶಬನ ಅಜ್ಮಿ, ರಾಜಕುಮಾರ್ ಹಿರಾನಿ, ರಾಜಕುಮಾರ್ ರಾವ್, ಕಲ್ಕಿ ಕೋಚ್ಲಿನ್, ಎಲ್ಲಿ ವಿಕ್ರಮ್, ರಾಧಿಕಾ ಆಪ್ಟೆ ಕೂಡ ಚಲನಚಿತ್ರದ ವಿಶೇಷ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಎಲ್ಲರು ಸಿನೆಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

"ಒಳ್ಳೆಯ ಸಿನೆಮಾ ನೋಡಲಿದ್ದೇನೆ ಎಂಬ ನಿರೀಕ್ಷೆಯೊಂದಿಗೇ ಬಂದಿದ್ದೆ, ಆದರೆ ಸಿನೆಮಾ ನೋಡಿದ ಮೇಲೆ ಮಸೂರೆಗೊಂಡೆ" ಎಂದು ಅಕ್ತರ್ ತಿಳಿಸಿದ್ದಾರೆ.

"ಇದು ಹಿಂದಿ ಸಿನೆಮಾರಂಗದಲ್ಲೇ ಅತ್ಯುತ್ತಮ ಚಲನಚಿತ್ರಗಳಲ್ಲೊಂದು. ಅದ್ಭುತವಾಗಿದೆ. ನಟನೆ, ನಿರ್ದೇಶನ, ಸಿನೆಮ್ಯಾಟೋಗ್ರಫಿ, ಸ್ಕ್ರಿಪ್ಟ್ ಎಲ್ಲವೂ ನಂಬಲಾಗದಷ್ಟು ಚೆನ್ನಾಗಿದೆ. ವಿಶ್ವದ ಯಾವುದೇ ಗುಣಮಟ್ಟದಲ್ಲೂ ಇದು ಅದ್ಭುತ ಸಿನೆಮಾ" ಎಂದು ಮನಸಾರೆ ಹೊಗಳಿದ್ದಾರೆ.

ಈ ಭಾವನಾತ್ಮಕ ಚಲನಚಿತ್ರವನ್ನು ಶಬನ ಆಜ್ಮಿ ಕೂಡ ಅಷ್ಟೇ ಪ್ರಶಂಸಿಸಿದ್ದಾರೆ

"'ಮಾಸಾನ್' ನಿಜವಾಗಿಯೂ ಹಿಂದಿ ಸಿನೆಮಾರಂಗವನ್ನು ಮುಂದಕ್ಕೆ ಕರೆದೊಯ್ದಿದೆ. ಸ್ಕ್ರಿಪ್ಟ್, ನಿರ್ದೇಶನ, ಸಿನೆಮ್ಯಾಟೋಗ್ರಫಿ ಎಲ್ಲವೂ ವರ್ಣನಾತೀತ. ಇಂತಹ ಸಿನೆಮಾಗಳನ್ನು ಮಾಡಿದಾಗ ಹೆಮ್ಮೆಯಾಗುತ್ತದೆ. ಇದು ನೋಡಲೇಬೇಕಾದ ಸಿನೆಮಾ. ಎಲ್ಲರಿಗೂ ಒಳ್ಳೆಯದಾಗಲಿ" ಎಂದು ಹೇಳಿ ಹರಸಿದ್ದಾರೆ.

ನೀರಜ್ ಘಾಯ್ವನ್ ಅವರ ಚೊಚ್ಚಲ ನಿರ್ದೇಶನದ ಈ ಸಿನೆಮಾದಲ್ಲಿ ರಿಚಾ ಚಂದ್ರ, ಸಂಜಯ್ ಮಿಶ್ರ, ಶ್ವೇತಾ ತ್ರಿಪಾಠಿ ಮತ್ತು ವಿಕಿ ಕೌಶಲ್ ನಟಿಸಿದ್ದು ಸಿನೆಮಾ ನಾಳೆ ಶುಕ್ರವಾರ ರಾಷ್ಟ್ರದಾದ್ಯಂತ ಬಿಡುಗಡೆಯಾಗಲಿದೆ. ಕಾನ್ ಚಲನಚಿತ್ರೋತ್ಸವ ೨೦೧೫ರಲ್ಲಿ ಈ ಸಿನೆಮಾ ಎರಡು ಪ್ರಶಸ್ತಿಗಳನ್ನು ಗೆದ್ದಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT