ಉತ್ತಮ ವಿಲನ್ ಚಿತ್ರದ ಸ್ಟಿಲ್ 
ಬಾಲಿವುಡ್

ಅಂತೂ ಬಿಡುಗಡೆಯಾದ ಉತ್ತಮ ವಿಲನ್!

ಕನ್ನಡಿಗ ರಮೇಶ್ ಅರವಿಂದ್ ನಿರ್ದೇಶನದ ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ಚಿತ್ರ `ಉತ್ತಮ ವಿಲನ್' ಕೊನೆಗೂ ತೆರೆಕಂಡಿದೆ. ಕಳೆದೊಂದು...

ಚೆನ್ನೈ: ಕನ್ನಡಿಗ ರಮೇಶ್ ಅರವಿಂದ್ ನಿರ್ದೇಶನದ ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ಚಿತ್ರ `ಉತ್ತಮ ವಿಲನ್' ಕೊನೆಗೂ ತೆರೆಕಂಡಿದೆ. ಕಳೆದೊಂದು ತಿಂಗಳಿಂದ ಒಂದಿಲ್ಲೊಂದು ವಿವಾದದಿಂದ ಸುದ್ದಿಯಾಗುತ್ತಿದ್ದ ಬಹುಕೋಟಿ ವೆಚ್ಚದ ಈ ಚಿತ್ರ ಶುಕ್ರವಾರ ಬಿಡುಗಡೆಯಾಗ ಬೇಕಿತ್ತು.ಆದರೆ ಫೈನಾನ್ಷಿಯರ್ ಮತ್ತು ನಿರ್ಮಾಪಕರ ಆರ್ಥಿಕ ವಿವಾದದಿಂದಾಗಿ ಪ್ರದರ್ಶನ ರದ್ದಾಗಿತ್ತು.

ಆದರೆ ತಮಿಳು ನಿರ್ಮಾಪಕರ ಪಕರ ಸಂಘ, ದಕ್ಷಿಣ ಭಾರತ ಕಲಾವಿದರ ಸಂಘ ಹಾಗೂ ನಿರ್ದೇಶಕರ ಸಂಘ ನಡೆಸಿದ 25ಗಂಟೆಗಳ ನಿರಂತರ ಮಾತುಕತೆ ಫಲಪ್ರದವಾದ ನಂತರ ಪ್ರದರ್ಶನಕ್ಕೆ ಅನುಮತಿ ದೊರೆತಿದೆ. 2 ವರ್ಷಗಳ ನಂತರ ಕಮಲ್ ಹಾಸನ್ ಸಿನಿಮಾ ತೆರೆಕಾಣುತ್ತಿದ್ದು, ಶುಕ್ರವಾರ ನಿರಾಶರಾಗಿದ್ದ ಅಭಿಮಾನಿಗಳು ಈಗ ಸಮಾಧಾನಗೊಂಡಿದ್ದಾರೆ.

ಕಮಲ್‍ರ ಹಿಂದಿ ನ ಚಿತ್ರ ವಿಶ್ವರೂಪಂ ಮುಸ್ಲಿಂ ಸಂಘಟನೆಗಳ ಕ್ರೋಧಕ್ಕೀಡಾಗಿದ್ದರೆ, ಈ ಚಿತ್ರ ವಿಶ್ವ ಹಿಂದೂ ಪರಿಷತ್‍ನವರ ಕಣ್ಣು ಕೆಂಪಗಾಗಿಸಿತ್ತು. 400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಆಗುತ್ತಿರುವ ಅಡೆತಡೆಗಳಿಗೆ ರಾಜಕೀಯ ಷಡ್ಯಂತ್ರ ಕಾರಣ ಎಂಬ ಮಾತನ್ನು ಸಂಧಾನ ನಡೆಸಿರುವ ಎಸ್‍ಐಎಎ ಅಧ್ಯಕ್ಷ ಶರತ್‍ಕುಮಾರ್ ಅಲ್ಲಗಳೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT