ಡಿಂಪಲ್ ಕಪಾಡಿಯಾ 
ಬಾಲಿವುಡ್

ರಾಜೇಶ್ ಖನ್ನಾ ಕಳಪೆ ಅಭಿನಯ: ನಾಸಿರುದ್ದೀನ್ ಶಾ ಟೀಕೆಗೆ ಡಿಂಪಲ್ ಕಪಾಡಿಯಾ ತಿರುಗೇಟು

ದಿವಂಗತ ರಾಜೇಶ್ ಖನ್ನಾ ಬಗ್ಗೆ ನಾಸಿರುದ್ದೀನ್ ಶಾ ಮಾಡಿರುವ ಟೀಕೆ ಸಂಬಂಧ ಪತ್ನಿ ಡಿಂಪಲ್ ಕಪಾಡಿಯಾ ಕೊನೆಗೂ ಮೌನ ಮುರಿದಿದ್ದಾರೆ....

ನವದೆಹಲಿ: ದಿವಂಗತ ರಾಜೇಶ್ ಖನ್ನಾ ಬಗ್ಗೆ ನಾಸಿರುದ್ದೀನ್ ಶಾ ಮಾಡಿರುವ ಟೀಕೆ ಸಂಬಂಧ ಪತ್ನಿ ಡಿಂಪಲ್ ಕಪಾಡಿಯಾ ಕೊನೆಗೂ ಮೌನ ಮುರಿದಿದ್ದಾರೆ.

ದೇಶದಲ್ಲಿನ ಪ್ರತಿಯೊಬ್ಬ ಪ್ರಜೆಗೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ರಾಜೇಶ್ ಖನ್ನಾ ಅವರ ಸಿನಿ ಪಯಣ ಹಾಗೂ ಅವರು ಗಳಿಸಿದ ಆಸ್ತಿಯನ್ನು ಮುಕ್ತವಾಗಿ ರ್ಚಚಿಸಬಹುದಾಗಿದೆ. ಬಾಲಿವುಡ್​ಗೆ ಖನ್ನಾ ನೀಡಿದ ಕೊಡುಗೆ ಅಭಿಮಾನಿಗಳಿಗೆ ತಿಳಿದಿದೆ ಎಂದು ಹೇಳುವ ಮೂಲಕ ಡಿಂಪಲ್ ಕಪಾಡಿಯ ಹಿರಿಯ ನಟ ನಾಸಿರುದ್ದಿನ್ ಶಾ ಅವರಿಗೆ ತಿರುಗೇಟು ನೀಡಿದ್ದಾರೆ.

ನಟ ರಾಜೇಶ್ ಖನ್ನಾ 70 ರ ದಶಕದಲ್ಲಿ ಹಿಂದಿ ಚಿತ್ರರಂಗವನ್ನು ಕಳಪೆ ಮಟ್ಟಕ್ಕೆ ಕೊಂಡೊಯ್ದಿದ್ದರು ಎಂಬ ಹೇಳಿಕೆಗೆ ಪ್ರತಿಕ್ರಯಿಸಿದ ರಾಜೇಶ್ ಖನ್ನಾ ಅವರ ಪತ್ನಿ ಡಿಂಪಲ್ ಕಪಾಡಿಯ, ರಾಜೇಶ್ ಖನ್ನಾ ಅವರು ಏನು ಎನ್ನುವುದನ್ನು ನಾನು ಹೇಳಬೇಕಾಗಿಲ್ಲ. ಅವರ ಲಕ್ಷಾಂತರ ಅಭಿಮಾನಿಗಳು ಈ ವಿಚಾರವಾಗಿ ಸಾಕಷ್ಟು ತಿಳಿದುಕೊಂಡಿದ್ದಾರೆ. ದೇಶದಲ್ಲಿ ಸಮಸ್ತ ಪ್ರಜೆಗಳಿಗೂ ಖನ್ನಾ ಅವರ ಕುರಿತು ಮಾತನಾಡುವ ಹಕ್ಕಿದೆ ಎಂದು ಹೇಳಿದ್ದಾರೆ.

ಟಿ ವಿ ಕಾರ್ಯಕ್ರಮವೊಂದರ ಸಂದರ್ಶನದಲ್ಲಿ ನಾಸೀರುದ್ದಿನ್ ಶಾ ಮಾತನಾಡುತ್ತ, ರಾಜೇಶ್ ಖನ್ನಾ ಒಬ್ಬ ಕಳಪೆ ನಟ, 70 ರ ದಶಕದಲ್ಲಿ ಆತನಿಂದ ಚಿತ್ರೋದ್ಯಮ ಅಧೋಗತಿಗೆ ಇಳಿದಿತ್ತು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಶಾ ಹೇಳಿಕೆಗೆ ರಾಜೇಶ್ ಖನ್ನಾ ಪುತ್ರಿ ಟ್ವಿಂಕಲ್ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ್ದರು.ಬದುಕಿದ್ದಾಗ ಗೌರವ ನೀಡುವುದು ಬೇಡ. ಕಡೇ ಪಕ್ಷ ಸತ್ತ ನಂತರವಾದರೂ ವ್ಯಕ್ತಿಗಳಿಗೆ ಗೌರವ ನೀಡುವುದನ್ನು ಕಲಿಯಿರಿ ಎಂದು ಟ್ವೀಟ್ ಮಾಡಿದ್ದರು. ಅದಾದ ನಂತರ ನಾಸಿರುದ್ದೀನ್ ಶಾ ಕ್ಷಮಾಪಣೆ ಕೋರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಮತ್ತೆ ವೈಭವದತ್ತ ಮರಳಿದ್ದೇವೆ, ಹಿಂದೆಂದಿಗಿಂತ ಶ್ರೀಮಂತ ಮತ್ತು ಬಲಿಷ್ಠರಾಗಿದ್ದೇವೆ': ದೇಶವನ್ನುದ್ದೇಶಿಸಿ Donald Trump ಭಾಷಣ-Video

'ಸಂಪುಟಕ್ಕೆ ಹೊಸ ಪೀಳಿಗೆ, ಹೊಸ ಆಲೋಚನೆ ಇರುವವರು ಸೇರಬೇಕು, ನಾವು ಎಷ್ಟು ದಿನ ಗೂಟ ಹೊಡೆದುಕೊಂಡು ಕೂರಲು ಸಾಧ್ಯ'?: ಡಿ ಕೆ ಶಿವಕುಮಾರ್

ಕೇರಳ- ಕೇರಳಂ: ಯಾವುದೇ ಪ್ರಯೋಜನವಿಲ್ಲ, ಹೆಸರು ಬದಲಿಸುವ ಬದಲು ಹೆಚ್ಚಿನ ಅನುದಾನ ಘೋಷಿಸಿ; ಅಚ್ಚರಿ ಮೂಡಿಸಿದ ಶಶಿ ತರೂರ್ ವಿರೋಧ!

ಕೃಷಿ ಭೂಮಿ ಸೇರಿದಂತೆ ಎಲ್ಲಾ ಸ್ವತ್ತಿಗೂ ಸ್ವಯಂ ಚಾಲಿತ ಮ್ಯುಟೇಷನ್‌: ಕಂದಾಯ ಸಚಿವ ಕೃಷ್ಣಬೈರೇಗೌಡ

ಪಲಾಯನವಾದಿಯಲ್ಲ, ನಾನು ರಾಮನಗರಕ್ಕೆ ಫಿಕ್ಸ್: ಎಲ್ಲಾ ಕಡೆಯಿಂದಲೂ ವಿರೋಧಿಗಳು ನನ್ನ ರೌಂಡಪ್ ಮಾಡ್ತಾರೆ; ನಿಖಿಲ್

SCROLL FOR NEXT