ಇರ್ಫಾನ್ ಖಾನ್ 
ಬಾಲಿವುಡ್

ಕುರ್ಬಾನಿ ಹೆಸರಲ್ಲಿ ಪ್ರಾಣಿ ಬಲಿ ಕೊಡುವುದು ಸರಿಯಲ್ಲ: ನಟ ಇರ್ಪಾನ್ ಖಾನ್ ಹೇಳಿಕೆ

ಕುರ್ಬಾನಿ ಹೆಸರಲ್ಲಿ ಆಡು ಅಥವಾ ಮೇಕೆ ಬಲಿ ಕೊಡುವುದು ಸರಿಯಲ್ಲ, ಕುರ್ಬಾನಿಯ ಅರ್ಥ ಬಲಿದಾನ, ಅದು ದುಡ್ಡುಕೊಟ್ಟು ಖರೀದಿಸಿ ಬಲಿದಾನ ಮಾಡುವುದು ಅಲ್ಲ ..

ಜೈಪುರ : ಕುರ್ಬಾನಿ ಹೆಸರಲ್ಲಿ ಆಡು ಅಥವಾ ಮೇಕೆ ಬಲಿ ಕೊಡುವುದು ಸರಿಯಲ್ಲ, ಕುರ್ಬಾನಿಯ ಅರ್ಥ ಬಲಿದಾನ, ಅದು ದುಡ್ಡುಕೊಟ್ಟು ಖರೀದಿಸಿ ಬಲಿದಾನ ಮಾಡುವುದು ಅಲ್ಲ ಎಂದು ನಟ ಇರ್ಫಾನ್ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ತಮ್ಮ "ಮದರಿ' ಚಿತ್ರದ ಬಗ್ಗೆ ಜೈಪುರದಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಿದ್ದ ಇರ್ಫಾನ್‌ ಖಾನ್‌, ಇಸ್ಲಾಂನಲ್ಲಿರುವ ಬಲಿದಾನ ಮತ್ತು ಉಪವಾಸದ ಕ್ರಮವನ್ನು ಪ್ರಶ್ನಿಸುವ ವಿವಾದ ಸೃಷ್ಟಿಸಿದ್ದಾರೆ.

ಕುರ್ಬಾನಿಯ ಅರ್ಥ ಬಲಿದಾನ; ಅದು ದುಡ್ಡು ಕೊಟ್ಟು ಖರೀದಿಸಿ ಬಲಿದಾನ ನೀಡಲ್ಪಡುವ ಕುರಿ ಅಥವಾ ಮೇಕೆಗೆ ಸಂಬಂಧಿಸಿದ ವಿಷಯ ಅಲ್ಲ; ನಾವು ಯಾವುದನ್ನೋ ತ್ಯಜಿಸುತ್ತೇವೆಯೋ ಅದರೊಂದಿಗೆ ನಮಗೆ ನೇರವಾದ ಭಾವನಾತ್ಮಕ ಸಂಬಂಧ ಇರಬೇಕು. ಬಲಿದಾನದ ಹೆಸರಿನಲ್ಲಿ ಆಡು ಅಥವಾ ಕುರಿಯನ್ನು ಕೊಲ್ಲುವುದು ಕೇವಲ ಪ್ರಾಣಿ ಹಿಂಸೆ ಎಂದು ಹೇಳಿದ್ದಾರೆ.

ಇಂದಿನ ದಿನಗಳಲ್ಲಿ ನಾವು ಧಾರ್ಮಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಸ್ತುತತೆಯನ್ನೇ ಕಳೆದುಕೊಂಡಿದ್ದೇವೆ. ಮತ್ತು ಧಾರ್ಮಿಕ ರೀತಿ,ರಿವಾಜು, ಕಟ್ಟುಕಟ್ಟಳೆ ಇತ್ಯಾದಿಗಳ ಹಿಂದಿನ ಮೂಲ ಅರ್ಥವನ್ನು ಮರೆತುಬಿಟ್ಟಿದ್ದೇವೆ ಎಂದು ಹೇಳಿದರು. ಇಸ್ಲಾಂನಲ್ಲಿರುವ ರಂಜಾನ್ ಉಪವಾಸ ವೃತದ ಬಗ್ಗೆಯೂ ಮಾತನಾಡಿದ ಅವರು, ರಂಜಾನ್  ಸಂದರ್ಭದಲ್ಲಿ ಉಪವಾಸ ಮಾಡುವುದಕ್ಕಿಂತ ಆತ್ಮಾವಲೋಕನ ಮಾಡುವುದು ಸೂಕ್ತ ಎಂದು ಹೇಳಿದ್ದಾರೆ.

ನಾವು ಮುಸ್ಲಿಮರು ಮೊಹರ್ರಂ ನ ಅಣಕು ಮಾಡುತ್ತಿದ್ದೇವೆ. ನಿಜಕ್ಕೂ ಮೊಹರ್ರಂ ಸಂದರ್ಭದಲ್ಲಿ ಮಾಡಬೇಕಿರುವುದು ಶೋಕಾಚರಣೆ. ಆದರೆ ನಾವು ಮಾಡುತ್ತಿರುವುದು ಧಾರ್ಮಿಕ ಮೆರವಣಿಗೆ ಎಂದು ಇರ್ಫಾನ್‌ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT