ಸಲ್ಮಾನ್ ಕ್ಷಮೆ ಕೇಳಿದ ಅರಿಜಿತ್ ಸಿಂಗ್ (ಸಂಗ್ರಹ ಚಿತ್ರ) 
ಬಾಲಿವುಡ್

ಸಲ್ಮಾನ್ ಖಾನ್ ಕ್ಷಮೆ ಕೇಳಿ ಬಳಿಕ ಡಿಲೀಟ್ ಮಾಡಿದ ಗಾಯಕ ಅರಿಜಿತ್ ಸಿಂಗ್

ಸುಲ್ತಾನ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ವೇಳೆ ನಟ ಸಲ್ಮಾನ್ ಖಾನ್ ಗೆ ಅಪಮಾನ ಮಾಡಿದ ಹಿನ್ನಲೆಯಲ್ಲಿ ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿದ್ದಾರೆ..

ಮುಂಬೈ: ಸುಲ್ತಾನ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ವೇಳೆ ನಟ ಸಲ್ಮಾನ್ ಖಾನ್ ಗೆ ಅಪಮಾನ ಮಾಡಿದ ಹಿನ್ನಲೆಯಲ್ಲಿ ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿದ್ದಾರೆ.

ಕೆಲ ದಿನಗಳ ಹಿಂದೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಲ್ಮಾನ್ ಖಾನ್​ಗೆ ತಮ್ಮ ಗಾಯನದ ಮೂಲಕ ಮುಜುಗರ ಉಂಟು ಮಾಡಿದ್ದ ಬಾಲಿವುಡ್ ಗಾಯಕ ಅರಿಜಿತ್  ಸಿಂಗ್ ಈಗ ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಲ್ಲು ಮಿಯಾ ಬಳಿ ಕ್ಷಮೆ ಕೇಳಿದ್ದಾರೆ. ಆದರೆ ಸಲ್ಮಾನ್ ಅಭಿಮಾನಿಗಳಿಂದ ವ್ಯಾಪಕ ಟೀಕಾತ್ಮಕ ಪ್ರತಿಕ್ರಿಯೆಗಳು ಬರುತ್ತಿದ್ದಂತೆಯೇ ತಮ್ಮ ಪೋಸ್ಟ್ ಅನ್ನು ಕಿತ್ತು ಹಾಕಿದ್ದಾರೆ.

ತಮ್ಮ ಕ್ಷಮಾಪಣಾ ಪೋಸ್ಟ್ ನಲ್ಲಿ ತಮ್ಮನ್ನು ತಾವು ಸಲ್ಮಾನ್ ಅಭಿಮಾನಿ ಎಂದು ಕರೆದುಕೊಂಡಿರುವ ಅರಿಜಿತ್ ಸಿಂಗ್, ತಾವು ಆ ದಿನ ಬೇಕೆಂದು ಮಾಡಿದ ಪ್ರಮಾದ ಅಲ್ಲ, ಅದು ಕೆಟ್ಟ ಘಳಿಗೆಯ ಘಟನೆಯಾಗಿದೆ. ಆ ಘಟನೆ ಬಳಿಕ ನಾನು ನಿಮ್ಮನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನ ಪಟ್ಟೆ. ಆದರೆ ಸಾಧ್ಯವಾಗಲಿಲ್ಲ. ಹೀಗಾಗಿ ಬೇರೆ ದಾರಿ ಇಲ್ಲದೇ ಇದೀಗ ನಾನು ಈ ಕ್ಷಮಾಪಣಾ ಪೋಸ್ಟ್ ಹಾಕಿದ್ದೇನೆ ಎಂದು ಅರಿಜಿತ್ ಸಿಂಗ್ ಹೇಳಿದ್ದಾರೆ.

ಕಳೆದ ಮಂಗಳವಾರ ಸಲ್ಮಾನ್ ಖಾನ್​ರ ಮುಂಬರುವ ಚಿತ್ರ ಸುಲ್ತಾನ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದರು. ಚಿತ್ರದಲ್ಲಿ ಗಾಯಕ ಅರಿಜಿತ್ ಸಿಂಗ್ ಕೂಡ ಹಾಡು ಹೇಳಿದ್ದಾರೆ. ಆದರೆ ಸಲ್ನಾನ್ ಗೆ ಅಪಮಾನ ಮಾಡಿದ ಹಿನ್ನಲೆಯಲ್ಲಿ ತಮ್ಮ ಗಾಯನದ ಹಾಡನ್ನು ಚಿತ್ರದಿಂದ ಎಲ್ಲಿ ತೆಗೆದು ಹಾಕುತ್ತಾರೆಯೋ ಎಂದು ಶಂಕಿಸಿರುವ ಅರಿಜಿತ್ ಸಿಂಗ್ ಹಾಡನ್ನು ಚಿತ್ರದಿಂದ ತೆಗೆಯದಂತೆ ಮೇಲಿಂದ ಮೇಲೆ ಸಲ್ಮಾನ್ ಖಾನ್​ಗೆ ಸಂದೇಶಗಳನ್ನು ಕಳಿಸುತ್ತಿದ್ದಾರೆ.

ಜತೆಗೆ ತಾವು ಆ ದಿನ ಬೇಕೆಂದು ಮಾಡಿದ ಪ್ರಮಾದ ಅಲ್ಲ, ಅದು ಕೆಟ್ಟ ಘಳಿಗೆಯ ಘಟನೆ ಎಂದು ಭಾಯಿ ಜಾನ್​ಗೆ ಮನವರಿಕೆ ಮಾಡಿಕೊಡಲು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆ ಸಂದೇಶ ರವಾನಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತಿ ಹೆಚ್ಚು!

ಭಾರತ-ಶ್ರೀಲಂಕಾ 2ನೇ ಟೆಸ್ಟ್ ಡ್ರಾದಲ್ಲಿ ಅಂತ್ಯ; WTC ಪಾಯಿಂಟ್ಸ್‌ ಟೇಬಲ್‌ನಲ್ಲಿ ಟೀಂ ಇಂಡಿಯಾಗೆ ಭಾರೀ ಹೊಡೆತ!

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಶಿವಕುಮಾರ್

CSK ಯಲ್ಲಿ ಶೇ. 25 ರಷ್ಟು ಪಾಲು ಕೇಳಿದ್ದಾರೆಯೇ ಧೋನಿ? 3,820 ಕೋಟಿ ರೂ ಕ್ಲೈಮ್ ಹಿಂದಿರುವ ಸತ್ಯವೇನು?