ನಟಿ ಕಂಗನಾ ರಣಾವತ್ 
ಬಾಲಿವುಡ್

ಬಿ-ಗ್ರೇಡ್ ಸಿನೆಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ನಾನೊಬ್ಬಳೇ: ಕಂಗನಾ ರಣಾವತ್

ಒಂದರ ಹಿಂದೆ ಒಂದು ಹಿಟ್ ಸಿನೆಮಾಗಳನ್ನು ನೀಡಿದ ನಟಿ ಕಂಗನಾ ರಣಾವತ್ ಅವರನ್ನು ಬಾಲಿವುಡ್ 'ಕ್ವೀನ್' ಎಂದೇ ಕರೆಯಲಾಗುತ್ತದೆ. ಯಾವುದೇ ಒತ್ತಡದಿಂದ ನನಗೆ ಯಶಸ್ಸು ಒಲಿದದ್ದಲ್ಲ

ನವದೆಹಲಿ: ಒಂದರ ಹಿಂದೆ ಒಂದು ಹಿಟ್ ಸಿನೆಮಾಗಳನ್ನು ನೀಡಿದ ನಟಿ ಕಂಗನಾ ರಣಾವತ್ ಅವರನ್ನು ಬಾಲಿವುಡ್ 'ಕ್ವೀನ್' ಎಂದೇ ಕರೆಯಲಾಗುತ್ತದೆ. ಯಾವುದೇ ಒತ್ತಡದಿಂದ ನನಗೆ ಯಶಸ್ಸು ಒಲಿದದ್ದಲ್ಲ ಎನ್ನುವ ನಟಿ, ನಟಿಯಾಗಿ ಸೋಲುಗಳು ಯಾವತ್ತೂ ವಿಶ್ವಾಸಾರ್ಹತೆಗೆ ಧಕ್ಕೆ ತರುವುದಿಲ್ಲ ಎನ್ನುತ್ತಾರೆ. 
ಹಾಗೆಯೇ ಯಾವುದೇ ಒಂದು ಯೋಜನೆ ಚಿತ್ರರಂಗದಲ್ಲಿ ತಮ್ಮ ಸ್ಥಾನಮಾನ ಏರಿಸುತ್ತದೆ ಎಂಬ ಮಾತ್ರಕ್ಕೆ ನಾನು ಆಯ್ಕೆ ಮಾಡಿಕೊಳ್ಳುವುದಿಲ್ಲ ಎಂದು ಕೂಡ ಅವರು ತಿಳಿಸುತ್ತಾರೆ. 
"ನಾನು ಈ ಕೆಲಸವನ್ನು ಮಾಡಲೇಬೇಕು ಅಥವಾ ಈ ಎತ್ತರ ಏರಲೇಬೇಕು ಎಂಬುವ ಯಾವುದೇ ಗುರಿಗಳನ್ನು ಹಾಕಿಕೊಂಡಿಲ್ಲ. ಅಂತಹ ಒತ್ತಡವನ್ನು ನಾನು ಸೃಷ್ಟಿಸಿಕೊಳ್ಳುವುದಿಲ್ಲ. ನನ್ನ ದಾರಿಯಲ್ಲಿ ನಾನು ನಡೆಯುತ್ತೇನೆ. ಬಹುಷಃ ಬಿ-ಗ್ರೇಡ್ ಸಿನೆಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ನಾನೊಬ್ಬಳೇ" ಎನ್ನುತ್ತಾರೆ ಕಂಗನಾ. 
"ಯಾವುದೇ ಒಂದು ಯೋಜನೆ ನಟಿಯನ್ನು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. ನೀವು ಹಲವಾರು ಫ್ಲಾಪ್ ಚಿತ್ರಗಳನ್ನು ನೀಡಿಯೂ ಬಹಳ ಬೇಡಿಕೆಯ ನಟಿಯಾಗಬಹುದು ಮತ್ತು ಅದು ನನ್ನ ಕಥೆಯೇ" ಎಂದು ಕೂಡ ನಟಿ ತಿಳಿಸುತ್ತಾರೆ. 
ಮನಾಲಿ ಹತ್ತಿರದ ಗ್ರಾಮದಿಂದ ಬಾಲಿವುಡ್ ಗೆ ಪ್ರವೇಶ ಪಡೆದ ಕಂಗನಾ ಈಗ ಅದೇ ಚಿತ್ರರಂಗದ ಅತಿ ಹೆಚ್ಚು ಜನಪ್ರಿಯ ನಟಿಯಾಗಿ ಬೆಳೆದಿದ್ದಾರೆ. 'ಗ್ಯಾಂಗ್ಸ್ಟರ್', 'ವೊ ಲಂಹೆ' ಲೈಫ್ ಇನ್ ಎ ಮೆಟ್ರೋ', 'ತಾನು ವೆಡ್ಸ್ ಮನು ರಿಟರ್ನ್ಸ್', 'ಕ್ವೀನ್' 'ಫ್ಯಾಷನ್' ಸಿನೆಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ.
ಈಗ ಕಂಗನಾ ಸದ್ಯಕ್ಕೆ ಹಂಸಲ್ ಮೆಹತಾ ಅವರ 'ಸಿಮ್ರಾನ್' ಸಿನೆಮಾದಲ್ಲಿ ನಿರತರಾಗಿದ್ದಾರೆ. ಈ ಸಿನೆಮಾದಲ್ಲಿ ವಿಚ್ಚೇಧನ ಪಡೆದ 30 ವರ್ಷದ ಯುವತಿಯ ಪಾತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ. 
"ಯಾವ ಸಿನೆಮಾದಲ್ಲಿ ನಟಿಸುತ್ತೀರಿ ಎಂಬುದಕ್ಕಿಂತ ಅವುಗಳನ್ನು ಹೇಗೆ ನಟಿಸುತ್ತೀರಿ ಎಂಬುದು ಬಹಳ ಮುಖ್ಯ" ಎನ್ನುತ್ತಾರೆ ಕಂಗನಾ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

SCROLL FOR NEXT