ನಟ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ (ಸಂಗ್ರಹ ಚಿತ್ರ) 
ಬಾಲಿವುಡ್

ಒಟ್ಟಿಗೆ ಕರ್ವ ಚೌತ್ ಆಚರಣೆ; ಮತ್ತೆ ಒಂದಾದ ಅರ್ಬಾಜ್-ಮಲೈಕಾ?

ಇತ್ತೀಚೆಗಷ್ಟೇ ವಿಚ್ಛೇದನಕ್ಕೆ ಮುಂದಾಗುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ ಜೋಡಿ ಮತ್ತೆ ಒಂದಾಗುತ್ತಿದೆ ಎಂಬ ಸುದ್ದಿ ಬಾಲಿವುಡ್ ನಾದ್ಯಂತ ಹಬ್ಬಿದೆ.

ಮುಂಬೈ: ಇತ್ತೀಚೆಗಷ್ಟೇ ವಿಚ್ಛೇದನಕ್ಕೆ ಮುಂದಾಗುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ ಜೋಡಿ ಮತ್ತೆ ಒಂದಾಗುತ್ತಿದೆ ಎಂಬ ಸುದ್ದಿ ಬಾಲಿವುಡ್ ನಾದ್ಯಂತ ಹಬ್ಬಿದೆ.

ಬಾಲಿವುಡ್ ಹಾಟ್ ಜೋಡಿಗಳಲ್ಲಿ ಒಂದಾದ ಅರ್ಬಾಜ್ ಖಾನ್ ಹಾಗೂ ಮಲೈಕಾ ಜೋಡಿ ಒಂದಾಗುತ್ತಿದೆಯೇ..ಹೌದು ಎನ್ನುತ್ತಿದೆ ಬಿ-ಟೌನ್. ವಿಚ್ಛೇದನಕ್ಕೆ ಮುಂದಾಗುವ ಮೂಲಕ ಭಾರಿ ಸುದ್ದಿಗೆ  ಗ್ರಾಸವಾಗಿದ್ದ ಈ ಜೋಡಿ ಇದೀಗ ಸಕಾರಾತ್ಮಕ ಕಾರಣಗಳಿಂದಾಗಿ ಮತ್ತೆ ಸುದ್ದಿ ಮಾಡುತ್ತಿದ್ದು, ಅರ್ಬಾಜ್ ಹಾಗೂ ಮಲೈಕಾ ಒಂದಾಗುತ್ತಿದ್ದಾರಂತೆ. ವಿಚ್ಚೇದನ ಪಡೆಯದಂತೆ ಕುಟುಂಬಸ್ಥರು  ಇವರಿಬ್ಬರ ಮನವೊಲಿಸಿದ್ದು, ಇದೀಗ ಈ ಜೋಡಿ ಮತ್ತೆ ಒಂದಾಗುವ ಕುರಿತು ನಿರ್ಧಾರ ಕೈಗೊಂಡಿದ್ದಾರಂತೆ.

ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗೆ ಈ ಜೋಡಿ ಒಟ್ಟೊಟ್ಟಿಗೆ ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಹಿಂದೆ ಕರ್ವ ಚೌತ್ ನಲ್ಲಿಯೂ ಕೂಡ ಒಟ್ಟಿಗೆ ಹಬ್ಬದ ಆಚರಣೆ ಮಾಡಿದೆ  ಎಂದು ಹೇಳಲಾಗುತ್ತಿದೆ. ಅಂತೆಯೇ ಪರಸ್ಪರ ವಿರಸದ ಬಳಿಕ ಅರ್ಬಾಜ್ ಖಾನ್ ಮನೆಯಿಂದ ಹೊರ ಹೋಗಿದ್ದ ಮಲೈಕಾ ಮತ್ತೆ ತಮ್ಮ ಮಗನೊಂದಿಗೆ ಮನೆಗೆ ವಾಪಸ್ ಆಗಲು  ನಿರ್ಧರಿಸಿದ್ದಾರಂತೆ.

ಇಷ್ಟಕ್ಕೂ ಈ ಜೋಡಿ ಮತ್ತೆ ಒಂದಾಗಲು ಅವರ ಕುಟುಂಬಸ್ಥರೇ ಕಾರಣ ಎಂದೂ ಸುದ್ದಿಗಳು ಹರಿದಾಡುತ್ತಿವೆ. ಮಲೈಕಾ ಸಹೋದರಿ ಅಮೃತಾ ಅರೋರಾ ಅವರು ಮಲೈಕಾರನ್ನು ಸಮಾಧಾನ  ಪಡಿಸಿದ್ದರೆ, ಅರ್ಬಾಜ್ ಖಾನ್ ರನ್ನು ಸಹೋದರ ಸಲ್ಮಾನ್ ಖಾನ್ ಸಂತೈಸಿದ್ದಾರಂತೆ. ಅಲ್ಲದೆ ನಟ ಸಲ್ಮಾನ್ ಖಾನ್ ಮಲೈಕಾರೊಂದಿಗೂ ಮಾತುಕತೆ ನಡೆಸಿದ್ದು, ಬೇರೆ-ಬೇರೆಯಾಗದಂತೆ  ಕಿವಿಮಾತು ಹೇಳಿದ್ದಾರೆ. ಸಲ್ಮಾನ್ ಖಾನ್ ಮಾತಿಗೆ ಬೆಲೆ ನೀಡಿರುವ ಮಲೈಕಾ ಮತ್ತೆ ಅರ್ಬಾಜ್ ಖಾನ್ ರನ್ನು ಸೇರಲು ನಿರ್ಧರಿಸಿದ್ದಾರಂತೆ.

ಒಟ್ಟಾರೆ ಖಾನ್ ಕುಟುಂಬದ ವಿಚ್ಚೇದನ ಪ್ರಹಸನ ಸುಖಾಂತ್ಯ ಕಾಣುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT