ಮೆಗಾಸ್ಟಾರ್ ಅಮಿತಾಬ್ ಬಚ್ಚನ್ 
ಬಾಲಿವುಡ್

ದೆಹಲಿ ಶಿಕ್ಷಕಿಗೆ ಇರಿತ: ಸಮಾಜ ಬದಲಾಗಬೇಕಿದೆ ಎಂದ ಬಿಗ್ ಬಿ

21 ವರ್ಷದ ನವದೆಹಲಿಯ ಶಿಕ್ಷಕಿಯನ್ನು ಇರಿದು ಕೊಂದ ಪ್ರಕರಣವನ್ನು 'ಭಯಾನಕ' ಎಂದಿರುವ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ಸಮಾಜ ಒಳ್ಳೆಯ ರೀತಿಯಲ್ಲಿ ಬದಲಾಗಬೇಕು ಎಂದು ಬುಧವಾರ

ಕೋಲ್ಕತ್ತಾ: 21 ವರ್ಷದ ನವದೆಹಲಿಯ ಶಿಕ್ಷಕಿಯನ್ನು ಇರಿದು ಕೊಂದ ಪ್ರಕರಣವನ್ನು 'ಭಯಾನಕ' ಎಂದಿರುವ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ಸಮಾಜ ಒಳ್ಳೆಯ ರೀತಿಯಲ್ಲಿ ಬದಲಾಗಬೇಕು ಎಂದು ಬುಧವಾರ ಹೇಳಿದ್ದಾರೆ. 
"ನಾನು ಆ ವಿಡಿಯೋ ನೋಡಿದ್ದೇನೆ... ಇದು ಕೆಟ್ಟ ಘಟನೆ. ಸಮಾಜ ಬದಲಾಗಬೇಕಿದೆ. ನಾವು ಪ್ರಯತ್ನ ಮುಂದುವರೆಸಬೇಕು. ಎಲ್ಲರು 'ಇದು ನನ್ನ ಕೆಲಸವಲ್ಲ ಮತ್ತು ನನಗೆ ಇದರಲ್ಲಿ ಆಸಕ್ತಿಯಿಲ್ಲ' ಎಂದು ಕೈಚೆಲ್ಲುತ್ತಾರೆ" ಎಂದು ಬಿಗ್ ಬಿ ಗಮನಿಸಿದ್ದಾರೆ.
"ಸಾಕಷ್ಟು ಜನ ಮತ್ತೊಬ್ಬರಿಗೆ ಸಹಾಯ ಮಾಡಲು ಹೆದರುತ್ತಾರೆ ಏಕೆಂದರೆ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತನಾಗುವ ಭಯಕ್ಕೆ. ಆದುದರಿಂದ ಅವರು ತೊಡಗಿಸಿಕೊಳ್ಳುವುದಿಲ್ಲ" ಎಂದು ಬಚ್ಚನ್ ತಮ್ಮ ಸಿನೆಮಾ 'ಪಿಂಕ್' ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ. 
ಉತ್ತರ ದೆಹಲಿಯ ಬುರಾರಿ ಪ್ರದೇಶದಲ್ಲಿ ಕರುಣಾ ಎಂಬ ನಾವೆಲ್ ರೀಚಸ್ ಶಾಲೆಯ ಶಿಕ್ಷಕಿಯನ್ನು 22 ಬಾರಿ ಇರಿದು ಅವನ ಭಗ್ನ ಪ್ರೇಮಿ ಕೊಲೆ ಮಾಡಿದ್ದ. 
ಸಮಾಜ ನಿಧಾನವಾಗಿ ಬದಲಾಗುತ್ತಿದ್ದು, ಕಾನೂನು ಕೂಡ ಒಳ್ಳೆಯ ರೀತಿಯಲ್ಲಿ ಬದಲಾಗುತ್ತಿದೆ ಎಂದು ಅಮಿತಾಬ್ ಗುರುತಿಸಿದ್ದಾರೆ. 
"ಆದರೆ ಇವೆಲ್ಲವೂ ಬದಲಾಗುತ್ತಿವೆ. ಕಾನೂನು ಕೂಡ ಬದಲಾಗುತ್ತಿದೆ" ಎಂದು ಅಮಿತಾಬ್ ಹೇಳಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT