ನವದೆಹಲಿ: ಮಾಜಿ ಕ್ರಿಕೆಟ್ ಆಟಗಾರ ನವಜೋತ್ ಸಿಂಗ್ ಸಿಧು ಹಿಂದಿಯ ಜನಪ್ರಿಯ ಹಾಸ್ಯ ಕಾರ್ಯಕ್ರಮ "ಕಪಿಲ್ ಶರ್ಮಾ ಶೋ'ನಲ್ಲಿ ವಿಶೇಷ ತೀರ್ಪುಗಾರನಾಗಿ ಪ್ರಮುಖ ಆಕರ್ಷಣೆಯಾಗಿದ್ದರು.
ಆದರೆ ಇನ್ನು ಮುಂದೆ ಅವರು ಕಾಣಿಸಿಕೊಳ್ಳುವುದಿಲ್ಲವಂತೆ. ತಮ್ಮ ರಾಜಕೀಯ ವೃತ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಹಾಸ್ಯ ಕಾರ್ಯಕ್ರಮದಿಂದ ನಿರ್ಗಮಿಸುತ್ತಾರಂತೆ.
ಹೀಗೆಂದು ಸಿಧು ಅವರ ಪತ್ನಿ ನವಜೋತ್ ಕೌರ್ ಖಚಿತಪಡಿಸಿದ್ದಾರೆ. ಪಂಜಾಬ್ ಚುನಾವಣಾ ರಾಜಕಾರಣದಲ್ಲಿ ಸಂಪೂರ್ಣ ವಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಸಲುವಾಗಿ ಸಿಧು ಅವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಸೆಪ್ಟೆಂಬರ್ 30ರವರೆಗಿನ ಶೋವನ್ನು ಈಗಾಗಲೇ ಅವರು ರೆಕಾರ್ಡ್ ಮಾಡಿದ್ದು ಶೋ ತಂಡಕ್ಕೆ ವಿದಾಯ ಹೇಳಿದ್ದಾರೆ ಎಂದು ತಿಳಿಸಿದರು.
ಸಿಧು ಇತ್ತೀಚೆಗೆ ಬಿಜೆಪಿ ತೊರೆದು ತಮ್ಮದೇ ಪಕ್ಷ ಅವಾಜ್-ಎ-ಪಂಜಾಬ್ ಮೋರ್ಚಾ ರಚಿಸಿದ್ದರು.