ಶಾರೂಖ್ ಖಾನ್ 
ಬಾಲಿವುಡ್

ಧೈರ್ಯವಿಲ್ಲದಿದ್ದರೆ ವೈಭವವೂ ಇರುವುದಿಲ್ಲ ಎಂಬುದಕ್ಕೆ ಬಾಹುಬಲಿ-2 ಉದಾಹರಣೆ: ಶಾರೂಖ್ ಖಾನ್

ಧೈರ್ಯವಿಲ್ಲದಿದ್ದರೆ ವೈಭವವೂ ಇರುವುದಿಲ್ಲ ಎಂಬುದಕ್ಕೆ ಬಾಹುಬಲಿ-2 ಅತ್ಯುತ್ತಮ ಉದಾಹರಣೆ ಎಂದು ಬಾಲಿವುಡ್ ನಟ ಶಾರೂಖ್ ಖಾನ್ ಹೇಳಿದ್ದಾರೆ.

ನವದೆಹಲಿ: ಧೈರ್ಯವಿಲ್ಲದಿದ್ದರೆ ವೈಭವವೂ ಇರುವುದಿಲ್ಲ ಎಂಬುದಕ್ಕೆ ಬಾಹುಬಲಿ-2 ಅತ್ಯುತ್ತಮ ಉದಾಹರಣೆ ಎಂದು ಬಾಲಿವುಡ್ ನಟ ಶಾರೂಖ್ ಖಾನ್ ಹೇಳಿದ್ದಾರೆ. 
ಐಎಎನ್ಎಸ್ ಗೆ ನೀಡಿರುವ ಇ-ಮೇಲ್ ಸಂದರ್ಶನದಲ್ಲಿ ಬಾಹುಬಲಿ ಚಿತ್ರದ ಬಗ್ಗೆ ಮಾತನಾಡಿರುವ ಶಾರೂಖ್ ಖಾನ್, ನಾನು ಬಾಹುಬಲಿ ಮೊದಲ ಭಾಗವನ್ನು ನೋಡಿದ್ದೇನೆ, ಆದರೆ 2 ನೇ ಭಾಗವನ್ನು ನೋಡಿಲ್ಲ. ಆದರೆ ಬಾಹುಬಲಿ ಅತ್ಯಂತ ಸ್ಪೂರ್ತಿದಾಯಕ ಚಿತ್ರವಾಗಿದೆ ಎಂದಿದ್ದಾರೆ. 
ಭಾರತೀಯ ಸಿನಿಮದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕು, ತಂತ್ರಜ್ಞಾನದ ವ್ಯಾಪ್ತಿ ಕಡಿಮೆ ಇದ್ದಾಗಲೂ ಭಾರತೀಯ ಚಿತ್ರ ರಂಗ ಅತ್ಯುತ್ತಮ ಸಿನಿಮಾಗಳನ್ನು ನೀಡಿದೆ. ಕೇವಲ ವೀಕ್ಷಕರ ಸಂಖ್ಯೆಯಷ್ಟೇ ಅಲ್ಲದೇ ದೊಡ್ಡ ಸಿನಿಮಾ ಮಾಡಿ ಅದರ ವ್ಯಾಪ್ತಿಯನ್ನು ಹೆಚ್ಚಿಸಬೇಕೆಂದರೆ ಅದಕ್ಕೆ ಅತಿ ಹೆಚ್ಚು ಧೈರ್ಯ ಬೇಕಾಗುತ್ತದೆ. ಧೈರ್ಯವಿಲ್ಲದಿದ್ದರೆ ಸಿನಿಮಾದ ವೈಭವವೂ ಇರುವುದಿಲ್ಲ ಎಂಬುದಕ್ಕೆ ಬಾಹುಬಲಿ-2 ಉದಾಹರಣೆಯಾಗಿದ್ದು, ರಾಜಮೌಳಿ ಸಿನಿಮಾಗಳು ಸ್ಪೂರ್ತಿದಾಯಕವಾಗಿರುತ್ತದೆ ಎಂದು ಶಾರೂಖ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

SCROLL FOR NEXT