ಶಾರೂಖ್ ಖಾನ್ 
ಬಾಲಿವುಡ್

ಧೈರ್ಯವಿಲ್ಲದಿದ್ದರೆ ವೈಭವವೂ ಇರುವುದಿಲ್ಲ ಎಂಬುದಕ್ಕೆ ಬಾಹುಬಲಿ-2 ಉದಾಹರಣೆ: ಶಾರೂಖ್ ಖಾನ್

ಧೈರ್ಯವಿಲ್ಲದಿದ್ದರೆ ವೈಭವವೂ ಇರುವುದಿಲ್ಲ ಎಂಬುದಕ್ಕೆ ಬಾಹುಬಲಿ-2 ಅತ್ಯುತ್ತಮ ಉದಾಹರಣೆ ಎಂದು ಬಾಲಿವುಡ್ ನಟ ಶಾರೂಖ್ ಖಾನ್ ಹೇಳಿದ್ದಾರೆ.

ನವದೆಹಲಿ: ಧೈರ್ಯವಿಲ್ಲದಿದ್ದರೆ ವೈಭವವೂ ಇರುವುದಿಲ್ಲ ಎಂಬುದಕ್ಕೆ ಬಾಹುಬಲಿ-2 ಅತ್ಯುತ್ತಮ ಉದಾಹರಣೆ ಎಂದು ಬಾಲಿವುಡ್ ನಟ ಶಾರೂಖ್ ಖಾನ್ ಹೇಳಿದ್ದಾರೆ. 
ಐಎಎನ್ಎಸ್ ಗೆ ನೀಡಿರುವ ಇ-ಮೇಲ್ ಸಂದರ್ಶನದಲ್ಲಿ ಬಾಹುಬಲಿ ಚಿತ್ರದ ಬಗ್ಗೆ ಮಾತನಾಡಿರುವ ಶಾರೂಖ್ ಖಾನ್, ನಾನು ಬಾಹುಬಲಿ ಮೊದಲ ಭಾಗವನ್ನು ನೋಡಿದ್ದೇನೆ, ಆದರೆ 2 ನೇ ಭಾಗವನ್ನು ನೋಡಿಲ್ಲ. ಆದರೆ ಬಾಹುಬಲಿ ಅತ್ಯಂತ ಸ್ಪೂರ್ತಿದಾಯಕ ಚಿತ್ರವಾಗಿದೆ ಎಂದಿದ್ದಾರೆ. 
ಭಾರತೀಯ ಸಿನಿಮದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕು, ತಂತ್ರಜ್ಞಾನದ ವ್ಯಾಪ್ತಿ ಕಡಿಮೆ ಇದ್ದಾಗಲೂ ಭಾರತೀಯ ಚಿತ್ರ ರಂಗ ಅತ್ಯುತ್ತಮ ಸಿನಿಮಾಗಳನ್ನು ನೀಡಿದೆ. ಕೇವಲ ವೀಕ್ಷಕರ ಸಂಖ್ಯೆಯಷ್ಟೇ ಅಲ್ಲದೇ ದೊಡ್ಡ ಸಿನಿಮಾ ಮಾಡಿ ಅದರ ವ್ಯಾಪ್ತಿಯನ್ನು ಹೆಚ್ಚಿಸಬೇಕೆಂದರೆ ಅದಕ್ಕೆ ಅತಿ ಹೆಚ್ಚು ಧೈರ್ಯ ಬೇಕಾಗುತ್ತದೆ. ಧೈರ್ಯವಿಲ್ಲದಿದ್ದರೆ ಸಿನಿಮಾದ ವೈಭವವೂ ಇರುವುದಿಲ್ಲ ಎಂಬುದಕ್ಕೆ ಬಾಹುಬಲಿ-2 ಉದಾಹರಣೆಯಾಗಿದ್ದು, ರಾಜಮೌಳಿ ಸಿನಿಮಾಗಳು ಸ್ಪೂರ್ತಿದಾಯಕವಾಗಿರುತ್ತದೆ ಎಂದು ಶಾರೂಖ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT