ಶಾರೂಖ್ ಖಾನ್ 
ಬಾಲಿವುಡ್

ಧೈರ್ಯವಿಲ್ಲದಿದ್ದರೆ ವೈಭವವೂ ಇರುವುದಿಲ್ಲ ಎಂಬುದಕ್ಕೆ ಬಾಹುಬಲಿ-2 ಉದಾಹರಣೆ: ಶಾರೂಖ್ ಖಾನ್

ಧೈರ್ಯವಿಲ್ಲದಿದ್ದರೆ ವೈಭವವೂ ಇರುವುದಿಲ್ಲ ಎಂಬುದಕ್ಕೆ ಬಾಹುಬಲಿ-2 ಅತ್ಯುತ್ತಮ ಉದಾಹರಣೆ ಎಂದು ಬಾಲಿವುಡ್ ನಟ ಶಾರೂಖ್ ಖಾನ್ ಹೇಳಿದ್ದಾರೆ.

ನವದೆಹಲಿ: ಧೈರ್ಯವಿಲ್ಲದಿದ್ದರೆ ವೈಭವವೂ ಇರುವುದಿಲ್ಲ ಎಂಬುದಕ್ಕೆ ಬಾಹುಬಲಿ-2 ಅತ್ಯುತ್ತಮ ಉದಾಹರಣೆ ಎಂದು ಬಾಲಿವುಡ್ ನಟ ಶಾರೂಖ್ ಖಾನ್ ಹೇಳಿದ್ದಾರೆ. 
ಐಎಎನ್ಎಸ್ ಗೆ ನೀಡಿರುವ ಇ-ಮೇಲ್ ಸಂದರ್ಶನದಲ್ಲಿ ಬಾಹುಬಲಿ ಚಿತ್ರದ ಬಗ್ಗೆ ಮಾತನಾಡಿರುವ ಶಾರೂಖ್ ಖಾನ್, ನಾನು ಬಾಹುಬಲಿ ಮೊದಲ ಭಾಗವನ್ನು ನೋಡಿದ್ದೇನೆ, ಆದರೆ 2 ನೇ ಭಾಗವನ್ನು ನೋಡಿಲ್ಲ. ಆದರೆ ಬಾಹುಬಲಿ ಅತ್ಯಂತ ಸ್ಪೂರ್ತಿದಾಯಕ ಚಿತ್ರವಾಗಿದೆ ಎಂದಿದ್ದಾರೆ. 
ಭಾರತೀಯ ಸಿನಿಮದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕು, ತಂತ್ರಜ್ಞಾನದ ವ್ಯಾಪ್ತಿ ಕಡಿಮೆ ಇದ್ದಾಗಲೂ ಭಾರತೀಯ ಚಿತ್ರ ರಂಗ ಅತ್ಯುತ್ತಮ ಸಿನಿಮಾಗಳನ್ನು ನೀಡಿದೆ. ಕೇವಲ ವೀಕ್ಷಕರ ಸಂಖ್ಯೆಯಷ್ಟೇ ಅಲ್ಲದೇ ದೊಡ್ಡ ಸಿನಿಮಾ ಮಾಡಿ ಅದರ ವ್ಯಾಪ್ತಿಯನ್ನು ಹೆಚ್ಚಿಸಬೇಕೆಂದರೆ ಅದಕ್ಕೆ ಅತಿ ಹೆಚ್ಚು ಧೈರ್ಯ ಬೇಕಾಗುತ್ತದೆ. ಧೈರ್ಯವಿಲ್ಲದಿದ್ದರೆ ಸಿನಿಮಾದ ವೈಭವವೂ ಇರುವುದಿಲ್ಲ ಎಂಬುದಕ್ಕೆ ಬಾಹುಬಲಿ-2 ಉದಾಹರಣೆಯಾಗಿದ್ದು, ರಾಜಮೌಳಿ ಸಿನಿಮಾಗಳು ಸ್ಪೂರ್ತಿದಾಯಕವಾಗಿರುತ್ತದೆ ಎಂದು ಶಾರೂಖ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT