ಫರ್ಹಾನ್ ಅಖ್ತರ್ 
ಬಾಲಿವುಡ್

ಚಿತ್ರೋದ್ಯಮದಲ್ಲಿ ಒಗ್ಗಟ್ಟಿನ ಕೊರತೆ ಇದೆ: ಪದ್ಮಾವತಿ ವಿವಾದ ಕುರಿತು ಫರ್ಹಾನ್ ಅಖ್ತರ್

ದುರದೃಷ್ಟವಶಾತ್, ನಮ್ಮನ್ನು ನಾವೇ ದೂಷಿಸಬೇಕಾಗಿದೆ. ನಾವು ಕೇವಲ ಬೆರೆಯವರ ಕಡೆ ಬೆಟ್ಟು ಮಾಡಬಾರದು ಎಂದು ಬಾಲಿವುಡ್ ನಟ....

ಮುಂಬೈ: ದುರದೃಷ್ಟವಶಾತ್, ನಮ್ಮನ್ನು ನಾವೇ ದೂಷಿಸಬೇಕಾಗಿದೆ. ನಾವು ಕೇವಲ ಬೆರೆಯವರ ಕಡೆ ಬೆಟ್ಟು ಮಾಡಬಾರದು ಎಂದು ಬಾಲಿವುಡ್ ನಟ ಫರ್ಹಾನ್ ಅಖ್ತರ್ ಅವರು ಬುಧವಾರ ಹೇಳಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಫರ್ಹಾನ್ ಅಖ್ತರ್ ಅವರು, ಚಿತ್ರೋದ್ಯಮದಲ್ಲಿ ಸಾಕಷ್ಟು ಒಗ್ಗಟ್ಟಿನ ಕೊರತೆ ಇದೆ ಎಂದು ಹೇಳುವ ಮೂಲಕ ಪದ್ಮಾವತಿ ಚಿತ್ರದ ವಿವಾದ ಹಾಗೂ ಇತರೆ ಎರಡು ಪ್ರಾದೇಶಿಕ ಚಿತ್ರಗಳನ್ನು ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ(ಐಎಫ್ಎಫ್ ಐ)ದಿಂದ ಕೈಬಿಟ್ಟಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರೋದ್ಯಮ ಒಂದು ಸಣ್ಣ ಉದ್ಯಮವಾಗಿದ್ದು, ಇಲ್ಲಿ ಪ್ರತಿಯೊಬ್ಬರು ತಮ್ಮ ಚಿತ್ರ ಬಿಡುಗಡೆ ಮಾಡುವ ಮುನ್ನ ಸಾಕಷ್ಟು ಹೆದರುತ್ತಾರೆ. ಆದರೆ ಇರುವ ಕೆಲವೇ ಜನರಲ್ಲೂ ಒಗ್ಗಟ್ಟು ಮೂಡಿಸುವ ಅಗತ್ಯವಿದೆ. ಈ ಮೂಲಕ ತಾವು ಬಯಸುವ ರೀತಿಯಲ್ಲಿ ಚಿತ್ರವನ್ನು ನಿರ್ಮಿಸಬೇಕು ಎಂದು ಫರ್ಹಾನ್ ಹೇಳಿದ್ದಾರೆ.
ಸಂಜಯ್ ಲೀಲಾ ಭನ್ಸಾಲಿ ಅವರ ಪದ್ಮಾವತಿ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಮರಾಠಿ ಚಿತ್ರ 'ನುಡೆ' ಮತ್ತು ಮಲೆಯಾಳಂ ಚಿತ್ರ 'ಎಸ್ ದುರ್ಗ'ವನ್ನು ಅಂತರಾಷ್ಟ್ರೀಯ ಚಿತ್ರೋತ್ವದಿಂದ ಕೈಬಿಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

SCROLL FOR NEXT