ರಾಖಿ ಸಾವಂತ್ - ದೀಪಕ್ ಕಲಾಲ್ 
ಬಾಲಿವುಡ್

ರಾಖಿ ಸಾವಂತ್‌ ಮದುವೆಗೆ ಬೆತ್ತಲೆ ಬರುವವರಿಗೆ ಮಾತ್ರ ಪ್ರವೇಶವಂತೆ!

ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಬಾಲಿವುಡ್ ನಟಿ ರಾಖಿ ಸಾವಂತ್ ಇತ್ತೀಚಿಗಷ್ಟೇ ತಾನು ಮದುವೆಯಾಗುವುದಾಗಿ

ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಬಾಲಿವುಡ್ ನಟಿ ರಾಖಿ ಸಾವಂತ್ ಇತ್ತೀಚಿಗಷ್ಟೇ ತಾನು ಮದುವೆಯಾಗುವುದಾಗಿ, ಅದೂ ಬೆತ್ತಲೆಯಾಗಿ ಮದುವೆಯಾಗುವುದಾಗಿ ಘೋಷಿಸುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಈಗ ತನ್ನ ಮದುವೆಗೆ ಬೆತ್ತಲೆಯಾಗಿ ಬರುವವರಿಗೆ ಮಾತ್ರ ಪ್ರವೇಶ ಎಂದು ಹೇಳಿದ್ದಾರೆ.
ಕಳೆದ ಶನಿವಾರ ಜೈಪುರದಲ್ಲಿ ಅಮೆರಿಕದ ಗಾಯಕ ನಿಕ್ ಜೋನಸ್ ಅವರೊಂದಿಗೆ  ವಿವಾಹವಾದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಉದ್ದೇಶಿಸಿ ರಾಖಿ ವೀಡಿಯೋವೊಂದನ್ನು ಚಿತ್ರೀಕರಿಸಿದ್ದು, ಅದರಲ್ಲಿ ತಮ್ಮ ಭಾವಿ ಪತಿ ದೀಪಕ್ ಕಲಾಲ್ ಅವರು ನಿಕ್ ಜೋನಸ್ ಗಿಂತ ಉತ್ತಮ ಎಂದು ಹೇಳಿಕೊಂಡಿದ್ದಾರೆ. 
ಇದೇ ವೇಳೆ ತನ್ನ ಮದುವೆ ಬಗ್ಗೆಯೂ ಮಾತನಾಡಿರುವ ವಿವಾದಿತ ಬೆಡಗಿ, ನನ್ನ ಮದುವೆ ಥೀಮ್ ಏನೆಂದರೆ ಮದುವೆಯಲ್ಲಿ ಪಾಲ್ಗೊಳ್ಳುವವರೆಲ್ಲರೂ ಬೆತ್ತಲೆಯಾಗಿರಬೇಕು. ಹೀಗಾಗಿ ನಾನೀಗ ಬೆತ್ತಲೆಯಾಗಿಯೇ ಈ ಮಾತುಗಳನ್ನಾಡುತ್ತಿದ್ದೇನೆ. ನನ್ನ ಮದುವೆಯಲ್ಲಿ ಬಟ್ಟೆ ತೊಟ್ಟು ಬರಲು ಅವಕಾಶವಿಲ್ಲ ಎಂದಿದ್ದಾಳೆ.
ಹಾಯ್ ಪ್ರಿಯಾಂಕಾ,  ನಾನು ಕೂಡ ಮದುವೆಯಾಗುತ್ತಿದ್ದೇನೆ. ನನ್ನ ವರ ದೀಪಕ್ ಕೂಡ ತುಂಬಾ ಚಿಕ್ಕ ವಯಸ್ಸಿನ ವರ. ನಿನ್ನ ವರ ನಿಕ್ ಜೋನ್ಸ್‌ಗಿಂತ ಈತನೇ ಚಿಕ್ಕವನು. ನನಗೂ ನಿನಗೂ ಸ್ಪರ್ಧೆ ಇದೆ ಪ್ರಿಯಾಂಕಾ. ನೀನು ಅಮೆರಿಕದಲ್ಲಿದ್ದು ಭಾರತದಲ್ಲಿ ಮದುವೆಯಾಗುತ್ತಿರುವೆ. ನಾನು ಭಾರತದಲ್ಲಿದ್ದುಕೊಂಡು ಅಮೆರಿಕದಲ್ಲಿ ಮದುವೆಯಾಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ನನ್ನ ಮದುವೆಗೆ ಶಾರುಖ್, ಸಲ್ಮಾನ್, ಅಮೀರ್‌, ಸವ್ಯಸಾಚಿ ಸೇರಿದಂತೆ ಎಲ್ಲ ಸೆಲೆಬ್ರಿಟಿಗಳು ಬರುತ್ತಿದ್ದಾರೆ. ಅವರೆಲ್ಲ ನನ್ನ ಮದುವೆಯಲ್ಲಿ ಪಾಲ್ಗೊಳ್ಳಲು ಬಹಳ ಎಕ್ಸೈಟ್ ಆಗಿದ್ದಾರೆ. ನನ್ನ ಮದುವೆ ಥೀಮ್ ಏನೆಂದರೆ ಮದುವೆಯಲ್ಲಿ ಪಾಲ್ಗೊಳ್ಳುವವರೆಲ್ಲರೂ ಬೆತ್ತಲೆಯಾಗಿರಬೇಕು. ಹೀಗಾಗಿ ನಾನೀಗ ಬೆತ್ತಲೆಯಾಗಿಯೇ ಮಾತಾಡುತ್ತಿದ್ದೇನೆ. ನನ್ನ ಮದುವೆಯಲ್ಲಿ ಬಟ್ಟೆ ತೊಟ್ಟು ಬರುವವರಿಗೆ ಅವಕಾಶವಿಲ್ಲ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಡಿಸೆಂಬರ್ 31ರಂದು ದೀಪಕ್ ಕಲಾಲ್ ಜತೆ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವುದಾಗಿ ರಾಖಿ ಸಾವಂತ್ ಘೋಷಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT