ಮುಂಬೈ: ಮಹಾಭಾರತ ಮಹಾಕಾವ್ಯವನ್ನು ಸಿನಿಮಾ ರೂಪದಲ್ಲಿ ನಿರ್ಮಿಸಲು ನಿರ್ಧರಿಸಿದ್ದ ಖ್ಯಾತ ನಟ ಅಮಿರ್ ಖಾನ್ ಅದನ್ನೀಗ 8 ಭಾಗದಲ್ಲಿ ವೆಬ್ ಅವತರಿಣಿಕೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.
ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿಯವರೂ ರೂ.100 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಈ ಸರಣಿಯಲ್ಲಿ ಶ್ರೀಕೃಷ್ಣನ ಪಾತ್ರದಲ್ಲಿ ಅಮೀರ್ ಖಾನ್ ಅವರು ಅಭಿನಯಿಸಲಿದ್ದಾರೆಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ನಟ ಶಾರುಖ್ ಖಾನ್ ಅವರು ಖಚಿತಪಡಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿರುವ ಶಾರುಖ್ ಅವರು, ಮಹಾಭಾರತ ಚಿತ್ರೀಕರಣದಲ್ಲಿ ಅಮಿರ್ ಖಾನ್ ಅವರು ಬ್ಯುಸಿಯಾಗಿದ್ದಾರೆಂದು ಹೇಳಿದ್ದಾರೆ.
ಮಹಾಭಾರತದಲ್ಲಿ ನೀವು ಯಾವ ಪಾತ್ರದಲ್ಲಿ ಅಭಿನಯಿಸಲು ಇಚ್ಛಿಸುವಿಿರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಮಹಾಭಾರತದಲ್ಲಿ ಈಗಾಗಲೇ ಕೃಷ್ಣನ ಪಾತ್ರಕ್ಕೆ ಅಮಿರ್ ಖಾನ್ ಅವರನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. ಈ ಮೂಲಕ ತಾವು ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಇಷ್ಟ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos