ಪ್ರಿಯಾಂಕಾ ಛೋಪ್ರಾ ವಿರುದ್ಧ ಹಿಂದೂ ಪರ ಸಂಘಟನೆಗಳ ಪ್ರತಿಭಟನೆ 
ಬಾಲಿವುಡ್

ಅಮೆರಿಕನ್ ಟಿವಿ ಸರಣಿ' 'ಕ್ವಾಂಟಿಕೊ' ವಿವಾದ: ಪ್ರಿಯಾಂಕಾ ಛೋಪ್ರಾ ವಿರುದ್ಧ ಹಿಂದೂ ಪರ ಸಂಘಟನೆಗಳ ಪ್ರತಿಭಟನೆ

ಬಾಲಿವುಡ್ ತಾರೆ ಪ್ರಿಯಾಂಕಾ ಛೋಪ್ರ ನಟಿಸಿದ್ದ ಅಮೆರಿಕನ್ ಟಿವಿ ಕಾರ್ಯಕ್ರಮ ಸರಣಿ ಕ್ವಾಂಟಿಕೊ ದಲ್ಲಿ ಭಾರತೀಯ ರಾಷ್ಟ್ರೀಯವಾದಿಗಳನ್ನು ಕಳಪೆಯಾಗಿ ತೋರಿಸಲಾಗಿದೆ.

ನವದೆಹಲಿ: ಬಾಲಿವುಡ್ ತಾರೆ ಪ್ರಿಯಾಂಕಾ ಛೋಪ್ರ  ನಟಿಸಿದ್ದ ಅಮೆರಿಕನ್ ಟಿವಿ ಕಾರ್ಯಕ್ರಮ ಸರಣಿ ಕ್ವಾಂಟಿಕೊ ದಲ್ಲಿ ಭಾರತೀಯ ರಾಷ್ಟ್ರೀಯವಾದಿಗಳನ್ನು ಕಳಪೆಯಾಗಿ ತೋರಿಸಲಾಗಿದೆ. ಎನ್ನುವ ಕಾರಣಕ್ಕೆ ನಟಿ ಪ್ರಿಯಾಂಕಾ  ಅವರ ವಿರುದ್ಧ ಹಿಂದುತ್ವವಾದಿಗಳ ಗುಂಪು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದೆ.
ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೋಲೀಸ್ ಠಾಣೆಯೆದುರು ಶನಿವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ನಟಿಯ ಪೋಸ್ಟರ್ಸ್, ಭಾವಚಿತ್ರಗಳನ್ನು ಸುಟ್ಟು ಹಾಕಿದ್ದಾರೆ.ಹಾಗೆಯೇ ಪ್ರಿಯಾಂಕಾ ವಿರುದ್ಧ ಘೋಷಣೆ ಕೂಗಿದ್ದಾರೆ.
ಕ್ವಾಂಟಿಕೊ ಸರಣಿಯ ಎಪಿಸೋಡ್ ಒಂದರಲ್ಲಿ ಸಿಐಎ ಆಪರೇಟಿವ್ ಅಲೆಕ್ಸ್ ಪ್ಯಾರಿಸ್ ನ ಪಾತ್ರಧಾರಿಯಾಗಿದ್ದ ಛೋಪ್ರಾ ಅವರನ್ನೊಳಗೊಂಡ ಕಾರ್ಯಕ್ರಮದಲ್ಲಿ ಭಾರತೀಯ ರಾಷ್ಟ್ರೀಯವಾದಿಯೊಬ್ಬರು ಮ್ಯಾನ್ ಹಟನ್ ನಲ್ಲಿ ನಡೆದ ಬಾಂಬ್ ದಾಳಿಯ ಹಿಂದಿದ್ದಾರೆ ಆದರೆ ಅವರು ಪಾಕಿಸ್ತಾನವನ್ನು ಇದಕ್ಕೆ ಕಾರಣವೆನ್ನುತ್ತಿದ್ದಾರೆ ಎನ್ನುವ ರೀತಿ ತೋರಿಸಲಾಗಿತ್ತು
"ತಮ್ಮ ನಟನೆಗಾಗಿ ನಟಿ ಪ್ರಿಯಾಂಕಾ ಛೋಪ್ರಾ ಇಡೀ ರಾಷ್ಟ್ರದ ಕ್ಷಮೆ ಯಾಚಿಸಬೇಕು" ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಿಂದು ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಹೇಳಿದ್ದಾರೆ.
"ಪ್ರಿಯಾಂಕಾ  ಭಾರತದಿಂದ ಮಿಸ್ ವರ್ಲ್ಡ್ ಆಗಿದ್ದರು. ಈಗ ಅವರು ದೇಶಕ್ಕೆ ಒಳ್ಳೆಯದನ್ನು ಮಾಡುತ್ತಿಲ್ಲ" ಎಂದು ಗುಪ್ತಾ  ದೂರಿದ್ದಾರೆ. 
ಜೂನ್ 1ರಂದು ಈ ಸರಣಿಯು ಮಾದ್ಯಮದಲ್ಲಿ ಪ್ರಸಾರ ಕಂಡಿದ್ದು ಈ ಸಂಬಂಧ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿವಾದಾತ್ಮಕ ಕಥಾವಸ್ತು ಹೊಂದಿರುವ ಈ ಸರಣಿಯಲ್ಲಿ ಕಾಣಿಸಿಕೊಳ್ಳಲು ಪ್ರಿಯಾಂಕಾ ಛೋಪ್ರಾ ಹೇಗೆ ಒಪ್ಪಿಗೆ ಸೂಚಿಸಿದ್ದರೆಂದು ಅವರ ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಏತನ್ಮಧ್ಯೆ ಎಬಿಸಿ ಸ್ಟುಡಿಯೋಸ್ ಹಾಗೂ ಟಿವಿ ಸರಣಿಯ ನಿರ್ಮಾಪಕರು ಕೂಡ ಶುಕ್ರವಾರದಂದು ಘಟನೆ ಸಂಬಂಧ ಕ್ಷಮೆ ಯಾಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT