ರಣವೀರ್ ಸಿಂಗ್-ದೀಪಿಕಾ ಪಡುಕೋಣೆ 
ಬಾಲಿವುಡ್

ದೀಪಿಕಾ ನನ್ನ ಜೀವನದಲ್ಲಿ ಸಿಕ್ಕಿರುವುದು ಅದೃಷ್ಟ:ರಣವೀರ್ ಸಿಂಗ್

ತಮ್ಮ ಜೀವನದಲ್ಲಿ ನಟಿ ದೀಪಿಕಾ ಪಡುಕೋಣೆ ಸಿಕ್ಕಿರುವುದು ಅದೃಷ್ಟ ಎಂದು ಬಾಲಿವುಡ್ ನಟ ರಣವೀರ್ ...

ನವದೆಹಲಿ: ತಮ್ಮ ಜೀವನದಲ್ಲಿ ನಟಿ ದೀಪಿಕಾ ಪಡುಕೋಣೆ ಸಿಕ್ಕಿರುವುದು ಅದೃಷ್ಟ ಎಂದು ಬಾಲಿವುಡ್ ನಟ ರಣವೀರ್ ಸಿಂಗ್ ಹೇಳಿದ್ದಾರೆ.

ನ್ಯೂಸ್ 18 ರೈಸಿಂಗ್ ಇಂಡಿಯಾ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ರಣವೀರ್ ಸಿಂಗ್ ಅವರನ್ನು ನಟಿ ದೀಪಿಕಾ ಜೊತೆಗಿನ ಸಂಬಂಧ ಮತ್ತು ಮದುವೆ ಆಲೋಚನೆಗಳ ಬಗ್ಗೆ ಪ್ರಶ್ನಿಸಲಾಯಿತು.

ಆಗ ಉತ್ತರಿಸಿದ ರಣವೀರ್ ಸಿಂಗ್ ತಾವು ಮತ್ತು ದೀಪಿಕಾ ಪರಸ್ಪರ ಉತ್ತಮ ಬಾಂಧವ್ಯ ಹೊಂದಿದ್ದು ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡುತ್ತೇವೆ, ಪ್ರೀತಿಸುತ್ತೇವೆ ಮತ್ತು ಪರಸ್ಪರ ಹೊಗಳಿಕೊಳ್ಳುತ್ತೇವೆ ಎಂದರು.

ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ, ಸದ್ಯದಲ್ಲಿಯೇ ಮದುವೆಯಾಗಲಿದ್ದಾರೆ ಎಂಬ ಮಾತುಗಳು ಕಳೆದ ಕೆಲ ವರ್ಷಗಳಿಂದ ಕೇಳಿ ಬರುತ್ತಿದೆ. ಈ ಬಗ್ಗೆ ರಣವೀರ್ ಸಿಂಗ್ ದೀಪಿಕಾ ಜೊತೆಗಿನ ಸಂಬಂಧವನ್ನು ನಿರಾಕರಿಸಲೂ ಇಲ್ಲ, ಒಪ್ಪಿಕೊಳ್ಳಲೂ ಇಲ್ಲ. ಪರಸ್ಪರ ಶ್ಲಾಘನೆಯ ಸಂಬಂಧದಲ್ಲಿ ಆಕೆಗೆ ನಟಿಯಾಗಿ ನಾನು ಹೆಚ್ಚು ಅಂಕಗಳನ್ನು ನೀಡುತ್ತೇನೆ. ಆದರೆ ಅವಳು ನನಗೆ ನೀಡುವುದಿಲ್ಲ ಎಂದರು.

ನೀನು ಅತಿಯಾಗಿ ನಟನೆ ಮಾಡುತ್ತಿ ಎನ್ನುತ್ತಾಳೆ ಎಂದು ಪರಿಹಾಸ್ಯವಾಗಿ ಹೇಳಿದ ರಣವೀರ್ ಸಿಂಗ್, ದೀಪಿಕಾ ಅದ್ಭುತ ನಟಿ, ಕಲಾವಿದೆಯಾಗಿ ಆಕೆಯಿಂದ ಕಲಿತುಕೊಳ್ಳುವುದು ಸಾಕಷ್ಟಿದೆ ಎನ್ನುತ್ತಾರೆ.

ದೀಪಿಕಾ ನಾನು ಉತ್ತಮ ಮನುಷ್ಯನನ್ನಾಗಿ ರೂಪಿಸಿಕೊಳ್ಳುವಲ್ಲಿ ಸಾಕಷ್ಟು ಸಹಾಯ ಮಾಡಿದ್ದಾಳೆ ಎಂದು ಹೇಳುವ ರಣವೀರ್ ಸಿಂಗ್ ತನ್ನ ಜೀವನದಲ್ಲಿ ಆಕೆ ಬಂದಿರುವುದು ಅದೃಷ್ಟ ಎಂದಿದ್ದಾರೆ.

ರಣವೀರ್ ಸಿಂಗ್ ನಿಜ ಜೀವನದಲ್ಲಿ ಅತ್ಯಂತ ಚಮತ್ಕಾರಿ ಮತ್ತು ಅಬ್ಬರದ ವ್ಯಕ್ತಿತ್ವದವರೇ ಎಂದು ಕೇಳಿದಾಗ 2013ರಲ್ಲಿ ನನ್ನ ಜೀವನದಲ್ಲಿ ಮಹತ್ತರ ಬದಲಾವಣೆಗಳಾದವು. ಅದಕ್ಕೆ ಮುಂಚೆ ನಾನಲ್ಲದ ವ್ಯಕ್ತಿತ್ವದಂತೆ ಇರಲು ಪ್ರಯತ್ನಿಸುತ್ತಿದ್ದೆ. ಆದರೆ ನಂತರ ನನ್ನಿಷ್ಟದಂತೆ ಜೀವಿಸುತ್ತಿದ್ದೇನೆ. ನನ್ನಿಷ್ಟದಂತೆ ಉಡುಪು ಧರಿಸುತ್ತೇನೆ ಎಂದರು.

ದೀಪಿಕಾ ಮತ್ತು ರಣವೀರ್ ಸಿಂಗ್ ಸಂಜಯ್ ಲೀಲಾ ಬನ್ಸಾಲಿ ಅವರ ಬಾಜಿರಾವ್ ಮಸ್ತಾನಿ, ಗೊಲಿಯೊಂಕಿ ರಾಸ್ ಲೀಲಾ ರಾಮ್ ಲೀಲಾ ಮತ್ತು ಪದ್ಮಾವತ್ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT