ಹೃತಿಕ್ ರೋಷನ್ 
ಬಾಲಿವುಡ್

#MeToo ಎಫೆಕ್ಟ್: ತಪ್ಪು ಮಾಡಿದ್ರೆ ವಿಕಾಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ - ಹೃತಿಕ್ ರೋಷನ್

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ತಮ್ಮ ಮುಂದಿನ ಚಿತ್ರ 'ಸೂಪರ್ 30' ನಿರ್ದೇಶಕ ವಿಕಾಸ್ ಬಹ್ಲ್ ಅವರು....

ಮುಂಬೈ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ತಮ್ಮ ಮುಂದಿನ ಚಿತ್ರ 'ಸೂಪರ್ 30' ನಿರ್ದೇಶಕ ವಿಕಾಸ್ ಬಹ್ಲ್ ಅವರು ತಪ್ಪು ಮಾಡಿದ್ದರೆ ನಿರ್ಮಾಪಕರು ಕಠಿಣ ನಿಲುವು ತೆಗೆದುಕೊಳ್ಳಬೇಕು ಎಂದು ಬಾಲಿವುಡ್ ನಟ ಹೃತಿಕ್ ರೋಷನ್ ಅವರು ಆಗ್ರಹಿಸಿದ್ದಾರೆ.
ವಿಕಾಸ್ ವಿರುದ್ಧದ ಆರೋಪದ ಬಗ್ಗೆ ತಮ್ಮ ಟ್ವಿಟ್ಟರ್​ನಲ್ಲಿ ಬರೆದುಕೊಂಡಿರುವ ಹೃತಿಕ್ ರೋಷನ್, ಯಾರೇ ತಪ್ಪು ಮಾಡಲಿ, ಆರೋಪ ಸಾಬೀತಾದರೆ, ಅಗತ್ಯ ಪುರಾವೆಗಳಿದ್ದರೆ ಖಂಡಿತವಾಗಿ ಉಗ್ರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಅವಳು ಅಥವಾ ಅವನು ಅನುಚಿತ ವರ್ತನೆ ತೋರಿದವರೊಂದಿಗೆ ಕೆಲಸ ಮಾಡಲು ಸಾಧ್ಯವೇ ಇಲ್ಲ.   ನಾನು ಅಂತವರಿಂದ ದೂರ ಇರಲು ಇಚ್ಚಿಸುತ್ತೇನೆ.   ನಾನು ಸೂಪರ್​ -30 ನಿರ್ಮಾಪಕರಲ್ಲಿ ವಿನಂತಿ ಮಾಡುತ್ತೇನೆ.  ಸ್ಪಷ್ಟವಾದ ವಾಸ್ತವಾಂಶವಿದ್ದರೆ ಹಾಗೂ ಅಗತ್ಯ ಬಿದ್ದರೆ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯಬೇಡಿ .  ಇಂತಹುದನ್ನ ಮುಚ್ಚಿಡದೆ ಗುಡಿಸಿ ಸ್ವಚ್ಛಗೊಳಿಸಬೇಕು. ಆರೋಪ ಸಾಬೀತಾದರೆ ಅಂತಹವರನ್ನ ಅವಶ್ಯವಾಗಿ ಶಿಕ್ಷಿಸಬೇಕು ಮತ್ತು  ಯಾರೂ ಕಿರುಕುಳಕ್ಕೆ ಒಳಗಾಗಿದ್ದಾರೋ ಅಂತಹವರು ಮಾತನಾಡಲು ನಾವು ಬಲ ತುಂಬಬೇಕು ಎಂದು ಹೃತಿಕ ರೋಷನ್ ಟ್ವೀಟ್ ಮಾಡಿದ್ದಾರೆ.
ನಿನ್ನೆಯಷ್ಟೇ ಹೃತಿಕ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದ ಫಿಲ್ಮ್​ ಮೇಕರ್ ಹನ್ಸಲ್ ಮೆಹ್ತಾ ಅವರು, ಬೆಹ್ಲ್ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಅವರೊಂದಿಗೆ ವ್ಯವಹರಿಸಲು ಭಯ ಪಡಬೇಕಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿರುವ ಪ್ರಮುಖ ನಟ ಅವರ ಚಿತ್ರದಲ್ಲಿ ಅಭನಯಿಸುತ್ತಿದ್ದಾರೆ. ಇಲ್ಲಿ ಯಾರು ಬಲಿಷ್ಠ? ಸಂತ್ರಸ್ಥೆ ಅಥವಾ ಆರೋಪಿ? ಎಂದು ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಹೃತಿಕ್ ರೋಷನ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಹಿಂದೆ ಫಾಂಟಮ್‌ ಕಂಪನಿ ಮಾಜಿ ಸಿಬ್ಬಂದಿಯೊಬ್ಬರು ಬಹ್ಲ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು, ಮೀ ಟೂ ಅಭಿಯಾನ ಚುರುಕುಗೊಂಡ ಬಳಿಕ ನಟಿ ಕಂಗನಾ ರಣಾವತ್‌ ಕೂಡ ಅವರ ವಿರುದ್ಧ ಆರೋಪ ಮಾಡಿದ್ದು, ನನ್ನ ಕುತ್ತಿಗೆಯಲ್ಲಿ ಮುಖ ಹುದುಗಿಸಿ, ನನ್ನ ತಲೆಗೂದಲಿನ ವಾಸನೆ ಗ್ರಹಿಸುತ್ತಿದ್ದ ಬಹ್ಲ್, ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದಾರೆ. 
ಬಹ್ಲ್ ಅವರ ಈ ವರ್ತನೆ ನನಗೆ ಕಿರಿಕಿರಿಯುಂಟು ಮಾಡುತ್ತಿತ್ತು. ಹೀಗಾಗಿ ಫಾಂಟಮ್‌ ಕಂಪನಿಯ ಮಾಜಿ ಉದ್ಯೋಗಿ ಹೇಳಿದ್ದರಲ್ಲಿ ಸತ್ಯವಿದೆ ಎಂದಿದ್ದಾರೆ. ಸದ್ಯ ವಿಕಾಸ್‌ ಬಹ್ಲ್, ಹೃತಿಕ್‌ ರೋಷನ್‌ ನಟನೆಯ ಸೂಪರ್‌ 30 ಸಿನಿಮಾ ನಿರ್ದೇಶಿಸಿದ್ದು ಜನವರಿಯಲ್ಲಿ ತೆರೆಗೆ ಬರಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT