ಥಗ್ಸ್ ಆಫ್ ಹಿಂದೂಸ್ತಾನ್ ಮೊದಲ ಪೋಸ್ಟರ್ 
ಬಾಲಿವುಡ್

ಥಗ್ಸ್ ಆಫ್ ಹಿಂದೂಸ್ತಾನ್ ಮೊದಲ ಪೋಸ್ಟರ್ ಔಟ್, ಟ್ರೇಲರ್ ಬಿಡುಗಡೆ ಯಾವಾಗ ಗೊತ್ತಾ?

ಬಾಲಿವುಡ್ ನ ಈ ವರ್ಷದ ಚಿತ್ರಗಳಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ಯಶ್ ರಾಜ್ ಪ್ರೊಡಕ್ಷನ್ಸ್ ನಿರ್ಮಾಣದ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ಪ್ರಥಮ ಪೋಸ್ಟರ್ ಬಿಡುಗಡೆಯಾಗಿದೆ.

ಮುಂಬೈ: ಬಾಲಿವುಡ್ ನ ಈ ವರ್ಷದ ಚಿತ್ರಗಳಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ಯಶ್ ರಾಜ್ ಪ್ರೊಡಕ್ಷನ್ಸ್ ನಿರ್ಮಾಣದ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ಪ್ರಥಮ ಪೋಸ್ಟರ್ ಬಿಡುಗಡೆಯಾಗಿದೆ.
ಮಂಗಳವಾರ ಬಿಡುಗಡೆಯಾಗಿರುವ ಈ ಪೋಸ್ಟರ್ ನಲ್ಲಿ ನಾವು ಬಿಗ್ ಬಿ ಅಮಿತಾಬ್ ಬಚ್ಚನ್, ಅಮೀರ್ ಖಾನ್, ಫಾತಿಮಾ ಸನಾ, ಶಾರುಖ್ ಹಾಗೂ ಕತ್ರೀನಾ ಕೈಫ್ ಅವರನ್ನು ಕಾಣುಬಹುದು.
ಯಶ್ ಚೋಪ್ರಾ ಅವರ ಜನ್ಮದಿನದವಾದ ಸೆಪ್ಟೆಂಬರ್ 27ಕ್ಕೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದಾಗಿ ನಿರ್ಮಾಣ ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.
ಪೋಸ್ಟರ್ ನಲ್ಲಿ ಅಮಿತಾಬ್ ಹಾಗೂ ಫಾತಿಮಾ ಕತ್ರೀನಾ ಅವರ ಮೇಲೆ ಯುದ್ಧ ಮಾಡುವ ಭಂಗಿಯಲ್ಲಿದ್ದಾರೆ. ಇದು ಪೋಸ್ಟರ್ ಮೆರುಗನ್ನು ಹೆಚ್ಚಿಸುವಂತಿದೆ. ಚಿತ್ರದ ಪ್ರಮುಖ ತಾರಾಂಗಣದಲ್ಲಿರುವ ಅಮಿತಾಬ್, ಅಮೀರ್, ಪಾತಿಮಾ ಸೇರಿ ಅನೇಕರ ವೈಯುಕ್ತಿಕ ಪೋಸ್ಟರ್ ಗಳು ಇದಾಗಲೇ ಸಾಕಷ್ಟು ಜನಪ್ರಿಯವಾಗಿದೆ. ಆದರೆ ಇದೇ ಮೊದಲ ಬಾರಿಗೆ ಅಮಿತಾಬ್ ಹಾಗೂ ಅಮೀರ್ ಖಾನ್ ಒಂದೇ ಪೋಸ್ಟರ್ನಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಇನ್ನು ಚಿತ್ರದಲ್ಲಿ ಕತ್ರೀನಾ ಪಾತ್ರದ ಕುರಿತು ಹೆಚ್ಚು ಮಾಹಿತಿ ಹೊರಬಂದಿಲ್ಲ. ಆಕೆ ನಿರ್ವಹಿಸುತ್ತಿರುವ ಸುರಯ್ಯಾ ಪಾತ್ರದ ಕುರಿತು ಚಿತ್ರಪ್ರೇಮಿಗಳಲ್ಲಿ ಸಾಕಷ್ಟು ನಿರೀಕ್ಷೆಗಳಿದೆ.
ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಅಮೀರ್ ಈ ಕುರಿತಂತೆ ತಮ್ಮ ಉತ್ಸಾಹವನ್ನೂ ಹಂಚಿಕೊಂಡಿದ್ದಾರೆ. "ಈ ಪೋಸ್ಟರ್ ನಲ್ಲಿ ನನ್ನನ್ನು ನಾನು ಕಂಡುಕೊಳ್ಳುವಾಗ ನಾನು ಮಿ. ಬಚ್ಚನ್ ಜತೆಯಾಗಿರುವದನ್ನು ಕಂಡು ಅತ್ಯಂತ ಸಂತಸವಾಗುತ್ತದೆ. ಇದು ನನ್ನ ದೊಡ್ಡ ಕನಸಾಗಿತ್ತು. ಆದರೆ ನನಗೀಗಲೂ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ." ಅಮೀರ್ ಖಾನ್ ಟ್ವೀಟ್ ಮಾಡಿದ್ದಾರೆ.
ಥಗ್ಸ್ ನ ಮೊದಲ ಮೋಷನ್ ಪೋಸ್ಟರ್ ಬಿಡುಗಡೆಗೊಂಡಂದಿನಿಂದ ಚಿತ್ರಪ್ರೇಮಿಗಳಲ್ಲಿ ಚಿತ್ರದ ಬಗೆಗೆ ಕುತೂಹಲವಿದ್ದು ಇದೀಗ ಚಿತ್ರದ ಟ್ರೇಲರ್ ಬಿಡುಗಡೆಗಾಗಿ ಅವರು ಕಾಯುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT