ಕಂಗನಾ ರಾನಾವತ್ 
ಬಾಲಿವುಡ್

ಚಿತ್ರವಾಗಿ ತೆರೆ ಮೇಲೆ ಬರಲಿದೆಯಂತೆ ಕಂಗನಾ ಜೀವನ ಕಥೆ

ಬಾಲಿವುಡ್ ನಟಿ ಕಂಗನಾ ರಾನಾವತ್ ಸದ್ಯದಲ್ಲಿಯೇ ತಮ್ಮ ಜೀವನದ ಸಂಗತಿಗಳನ್ನು ಬೆಳ್ಳಿಪರದೆ ಮೇಲೆ ...

ಬಾಲಿವುಡ್ ನಟಿ ಕಂಗನಾ ರಾನಾವತ್ ಸದ್ಯದಲ್ಲಿಯೇ ತಮ್ಮ ಜೀವನದ ಸಂಗತಿಗಳನ್ನು ಬೆಳ್ಳಿತೆರೆ ಮೇಲೆ ತರಲು ಸಜ್ಜಾಗಿದ್ದು ಅದರ ನಿರ್ದೇಶನದ ಜವಾಬ್ದಾರಿಯನ್ನು ಅವರೇ ಹೊರಲಿದ್ದಾರೆ.

ಬಾಹುಬಲಿ ಚಿತ್ರಕ್ಕೆ ಕಥೆ ಬರೆದ ಎಸ್ ಎಸ್ ರಾಜಮೌಳಿಯವರ ತಂದೆ ಕೆ ವಿ ವಿಜಯೇಂದ್ರ ಈ ಚಿತ್ರಕ್ಕೆ ಕಥೆ ಬರೆಯಲಿದ್ದಾರೆ. ಕಂಗನಾ ಅವರ ಮಣಿಕರ್ಣಿಕಾ ಚಿತ್ರಕ್ಕೆ ಕೂಡ ಕಥೆ ಬರೆದಿದ್ದು ಇವರೇ. ಅಕ್ಟೋಬರ್-ನವೆಂಬರ್ ಹೊತ್ತಿಗೆ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

'''ನನ್ನ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ನನ್ನ ಜೀವನದ ಕಥೆಯನ್ನೇ ಆಧಾರವಾಗಿಟ್ಟುಕೊಳ್ಳುತ್ತೇನೆ. ಇದುವರೆಗೆ ನನ್ನ ಜೀವನದ ಪಯಣಗಳನ್ನು ತೆರೆಮೇಲೆ ತರಲಿದ್ದೇನೆ. ಹಾಗೆಂದು ಇದು ಪ್ರಚಾರಕ್ಕಾಗಿ ಮಾಡುವ ಸಿನಿಮಾ ಅಲ್ಲ'' ಎಂದರು.

ಚಿತ್ರದಲ್ಲಿ ಹಲವು ಹಾಸ್ಯದ ಸನ್ನಿವೇಶಗಳು ಕೂಡ ಇರುತ್ತದೆ. ನನ್ನ ಜೀವನದಲ್ಲಿ ಸಾಕಷ್ಟು ಮಂದಿ ನನಗೆ ಪ್ರೀತಿ ತೋರಿಸಿದ್ದಾರೆ. ಅವರು ನಾನು ಹೇಗೆ ಇರುತ್ತೇನೆ ಅದೇ ರೀತಿ ಒಪ್ಪಿಕೊಂಡಿದ್ದಾರೆ. ಅದನ್ನು ಚಿತ್ರದಲ್ಲಿ ತೋರಿಸುತ್ತೇನೆ, ಹಾಗೆಂದು ನನ್ನ ಜೀವನದಲ್ಲಿ ವಿವಾದಕ್ಕೀಡಾದ, ಭಿನ್ನಾಭಿಪ್ರಾಯ ತಲೆದೋರಿದ ವ್ಯಕ್ತಿಗಳ ಪಾತ್ರಗಳನ್ನು ತೋರಿಸುವುದಿಲ್ಲ, ಒಟ್ಟಿನಲ್ಲಿ ಜೀವನದ ವಿವಿಧ ಆಯಾಮಗಳಿವೆ ಎಂದು ಹೇಳಿ ಕುತೂಹಲ ಸೃಷ್ಟಿಸಿದ್ದಾರೆ.

ನನ್ನ ಜೀವನದಲ್ಲಿ ಬಂದ ಜನರ ಪಾತ್ರಗಳಿಲ್ಲದೆ ನನ್ನ ಜೀವನದ ಪಯಣವನ್ನು ಹೇಗೆ ತೋರಿಸಲು ಸಾಧ್ಯ, ಇಲ್ಲಿ ನಾನು ಒಂಟಿಯಲ್ಲ, ಆದರೆ ಯಾವುದೇ ಹೆಸರುಗಳನ್ನು ತೆಗೆದುಕೊಳ್ಳುವುದಿಲ್ಲ. ನನ್ನನ್ನು ಕಾಪಾಡಿಕೊಂಡು ನನ್ನ ಜೀವನದ ಬಗ್ಗೆ, ಏಳು  ಬೀಳುಗಳ ಬಗ್ಗೆ ತೋರಿಸುತ್ತೇನೆ. ಕೊನೆಗೂ ಒಬ್ಬ ಸಾಹಸಿ, ಯಶಸ್ವಿ ಹುಡುಗಿಯ ಕಥೆ ತೋರಿಸುವ ಚಿತ್ರವಿದು. ಪರ್ವತ ಪ್ರದೇಶದಿಂದ ಬಂದು ಬಾಲಿವುಡ್ ನಲ್ಲಿ ಯಾವ ಗಾಡ್ ಫಾದರ್ ಗಳ ರಕ್ಷೆಯಿಲ್ಲದೆ ಬೆಳೆದು ಗುರುತಿಸಿಕೊಂಡವಳ ಕಥೆ ಎಂದು ಹೇಳಿದರು ಕಂಗನಾ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT