ಬಾಲಿವುಡ್

ಪುಲ್ವಾಮ ಉಗ್ರ ದಾಳಿ: 40 ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 5 ಲಕ್ಷ ರು. ಘೋಷಿಸಿದ ಅಮಿತಾಭ್‌

Lingaraj Badiger
ಮುಂಬೈ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್ ಪಿಎಫ್ ಯೋಧರ ಕುಟುಂಬಕ್ಕೆ ತಲಾ 5 ಲಕ್ಷ ರುಪಾಯಿ ಪರಿಹಾರ ನೀಡುವುದಾಗಿ ಬಾಲಿವುಡ್ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಅವರು ಶನಿವಾರ ಘೋಷಿಸಿದ್ದಾರೆ.
ಘೋಷಿಸಿರುವ ಪರಿಹಾರವನ್ನು ದುಃಖತಪ್ತ ಹುತಾತ್ಮ ಯೋಧರ ಕುಟುಂಬಗಳಿಗೆ ತ್ವರಿತವಾಗಿ, ಎಲ್ಲಿ ಮತ್ತು ಹೇಗೆ ತಾನು ನೀಡಬಹುದು ಎಂಬುದನ್ನು ವಿವಿಧ ಸರ್ಕಾರಿ ಮೂಲಗಳ ಮೂಲಕ ಅಮಿತಾಭ್ ಬಚ್ಚನ್ ಅವರು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಗ್ ಬಿ ಅವರ ವಕ್ತಾರರು ತಿಳಿಸಿದ್ದಾರೆ.
ಪುಲ್ವಾಮಾ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಅಮಿತಾಭ್‌  ಬಚ್ಚನ್ ಅವರು ಶುಕ್ರವಾರ ತಾವು ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದ ವಿರಾಟ್‌ ಕೊಹ್ಲಿ ಪ್ರತಿಷ್ಠಾನದ ಕಾರ್ಯಕ್ರಮವನ್ನು ರದ್ದುಪಡಿಸಿದ್ದರು. ಆ ಕಾರ್ಯಕ್ರಮ ಶನಿವಾರ ನಿಗದಿಪಡಿಸಲಾಗಿದೆ.
SCROLL FOR NEXT