ಕೊರೋನಾ ಕಂಟಕದ ನಡುವೆ ಚೀನಾದಲ್ಲಿ ರಿಲೀಸ್ ಆಗ್ತಿಗೆ ಈ ಬಾಲಿವುಡ್ ಚಿತ್ರ! 
ಬಾಲಿವುಡ್

ಕೊರೋನಾ ಕಂಟಕದ ನಡುವೆ ಚೀನಾದಲ್ಲಿ ರಿಲೀಸ್ ಆಗ್ತಿದೆ ಈ ಬಾಲಿವುಡ್ ಚಿತ್ರ!

ಜಗತ್ತಿನಾದ್ಯಂತ ಕೊರೋನಾ ಹಾವಳಿ ದಿನದಿನಕ್ಕೆ ಬಿಗಡಾಯಿಸುತ್ತಿದೆ. ಆದರೆ ಭಯಾನಕ ಕೊರೋನಾವೈರಸ್ ಜನಕ ಚೀನಾ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದು ಇದೀಗ ಹೃತಿಕ್ ರೋಷನ್ ಅವರ ಹಿಟ್ ಚಿತ್ರ "ಸೂಪರ್ 30" ಯನ್ನು ತನ್ನ ನೆಲದಲ್ಲಿ ರಿಲೀಸ್ ಮಾಡಲು ಸಜ್ಜಾಗಿದೆ. 

ಜಗತ್ತಿನಾದ್ಯಂತ ಕೊರೋನಾ ಹಾವಳಿ ದಿನದಿನಕ್ಕೆ ಬಿಗಡಾಯಿಸುತ್ತಿದೆ. ಆದರೆ ಭಯಾನಕ ಕೊರೋನಾವೈರಸ್ ಜನಕ ಚೀನಾ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದು ಇದೀಗ ಹೃತಿಕ್ ರೋಷನ್ ಅವರ ಹಿಟ್ ಚಿತ್ರ "ಸೂಪರ್ 30" ಯನ್ನು ತನ್ನ ನೆಲದಲ್ಲಿ ರಿಲೀಸ್ ಮಾಡಲು ಸಜ್ಜಾಗಿದೆ.

ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಗ್ರೂಪ್ ಈ ಚಿತ್ರವನ್ನು ಚೀನಾದಲ್ಲಿ ರಿಲೀಸ್ ಮಾಡಲು ಸಿದ್ದತೆ ನಡೆಸಿತ್ತು. ಸಂಸ್ಥೆಯ ಸಿಇಒ ಶಿಬಾಶಿಶ್ ಸರ್ಕಾರ್  ಚೀನಾದಲ್ಲಿ ಲಾಕ್‌ಡೌನ್ ಆಗುವ ಮೊದಲು ಸೆನ್ಸಾರ್‌ಶಿಪ್ ಪ್ರಕ್ರಿಯೆ ಮಾತುಕತೆ ನಡೆಸಿದ್ದರು. ಇದೀಗ ಅವರು ಇದಕ್ಕಾಗಿ ಅಂತಿಮ ಅನುಮತಿಯ ಎದುರು ನೋಡುತ್ತಿದ್ದಾರೆ.

ಆರೋಗ್ಯ ಬಿಕ್ಕಟ್ಟಿನ ನಂತರ ಚೀನಾದಲ್ಲಿ ಬಿಡುಗಡೆಯಾಗುವ ಮೊದಲ ಬಾಲಿವುಡ್ ಚಿತ್ರ "ಸೂಪರ್ 30" ಎಂದು ಹೇಳಲಾಗಿದೆಯಾದರೂ ನಿರ್ಮಾಪಕರು ಇದನ್ನು ಖಾತ್ರಿಪಡಿಸಿಲ್ಲ. "ನಾವು ಸೆನ್ಸಾರ್‌ಗೆ ಅರ್ಜಿ ಸಲ್ಲಿಸಿದ್ದೇವೆ ಮತ್ತು ನಾವು ಸೆನ್ಸಾರ್‌ಶಿಪ್ ಪ್ರಕ್ರಿಯೆಯ ಮಧ್ಯದಲ್ಲಿದ್ದಾಗ ಕೊರೋನಾವೈರಸ್ ಕಾಣಿಸಿಕೊಂಡಿತ್ತು. ಸೆನ್ಸಾರ್‌ಶಿಪ್ ಪಡೆಯಲು ಮೂರು ಹಂತಗಳಿವೆ ಮತ್ತು ನಾವು ಮೊದಲ ಹಂತವನ್ನು ಪೂರ್ಣಗೊಳಿಸಿದ್ದೇವೆ. ಚೀನಾದಲ್ಲಿ ಲಾಕ್‌ಡೌನ್ ಸಂಭವಿಸಿದಾಗ ನಾವು ಪ್ರಕ್ರಿಯೆಯ ಮಧ್ಯದಲ್ಲಿದ್ದೆವು" ಅವರು ಹೇಳಿದ್ದಾರೆ.

"‌ಲೈನ್‌ನಲ್ಲಿ ಇನ್ನೂ ಅನೇಕ ಚಲನಚಿತ್ರಗಳು ಇರಲಿವೆ ಎಂದು ನಾನು ಊಹಿಸಿದ್ದೇನೆ. ಬಹುಶಃ ಲೈನ್‌ನಲ್ಲಿ ಅನೇಕ ಭಾರತೀಯ ಚಲನಚಿತ್ರಗಳು ಇರಬಹುದು, ಅದು ನನಗೆ ಖಚಿತವಾಗಿಲ್ಲ. ಆದರೆ ನಮ್ಮ ಚಿತ್ರ ಸೆನ್ಸಾರ್ಶಿಪ್ ಪ್ರಕ್ರಿಯೆಯಲ್ಲಿದೆ ಎಂದು ನನಗೆ ಬಹಳ ಖಚಿತವಾಗಿದೆ, ಮತ್ತು ಒಮ್ಮೆ ಸೆನ್ಸಾರ್ ಅದನ್ನು ತೆರವುಗೊಳಿಸಿದರೆ ನಮ್ಮ ಚಲನಚಿತ್ರವನ್ನು ಚೀನಾದಲ್ಲಿ ಬಿಡುಗಡೆ ಮಾಡಲು ನಾವು ಸಜ್ಜಾಗುತ್ತೇವೆ.

"ಸೂಪರ್ 30" ಬಡ ಕುಟುಂಬಗಳಿಂದ ಐಐಟಿ-ಜೆಇಇ ಆಕಾಂಕ್ಷಿಗಳಿಗಾಗಿ ಸೂಪರ್ 30 ಪ್ರೋಗ್ರಾಂ ಅನ್ನು ನಡೆಸುತ್ತಿರುವ ಆನಂದ್ ಕುಮಾರ್ ಅವರ ಜೀವನವನ್ನು ಆಧರಿಸಿದೆ. ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಮತ್ತು ಫ್ಯಾಂಟಮ್ ಫಿಲ್ಮ್ಸ್ ನಿರ್ಮಿಸಿದ ಮತ್ತು ವಿಕಾಸ್ ಬಹ್ಲ್ ನಿರ್ದೇಶನದ ಈ ಚಿತ್ರದಲ್ಲಿ ಮೃಣಾಲ್ ಠಾಕೂರ್, ಅಮಿತ್ ಸಾಧ್ ಮತ್ತು ನಂದೀಶ್ ಸಂಧು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT