ಅಮಿತಾಬ್ ಬಚ್ಚನ್ 
ಬಾಲಿವುಡ್

ಕೋವಿಡ್ ನಡುವೆ ಎಲ್ಲಾ ಮುನ್ನೆಚ್ಚರಿಕೆಯೊಂದಿಗೆ 'ಕೆಬಿಸಿ' ಶೂಟಿಂಗ್ ಪುನಾರಂಭ

ಕೊರೋನಾವೈರಸ್ ಸೋಂಕಿನ ನಡುವೆ ಅತ್ಯಂತ ಮುನ್ನೆಚ್ಚರಿಕೆಯೊಂದಿಗೆ ಜನಪ್ರಿಯ ರಿಯಾಲಿಟಿ ಶೋ  "ಕೌನ್ ಬನೇಗಾ ಕರೋಡ್ ಪತಿ" (ಕೆಬಿಸಿ) ಯ ಹನ್ನೆರಡನೇ  ಸೀಸನ್ ಚಿತ್ರೀಕರಣವನ್ನು ಪ್ರಾರಂಭಿಸಿದ್ದೇನೆ ಎಂದು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಭಾನುವಾರ ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಕೋವಿಡ್ -19 ರಿಂದ ಚೇತರಿಸಿಕೊಂಡ ಬಚ್ಚನ್, ಮಾರ್ಚ್‌ನಲ್ಲಿ ಕೊರೋನಾ ಪ್ರೇರಿತ ಲಾಕ್

ಕೊರೋನಾವೈರಸ್ ಸೋಂಕಿನ ನಡುವೆ ಅತ್ಯಂತ ಮುನ್ನೆಚ್ಚರಿಕೆಯೊಂದಿಗೆ ಜನಪ್ರಿಯ ರಿಯಾಲಿಟಿ ಶೋ  "ಕೌನ್ ಬನೇಗಾ ಕರೋಡ್ ಪತಿ" (ಕೆಬಿಸಿ) ಯ ಹನ್ನೆರಡನೇ  ಸೀಸನ್ ಚಿತ್ರೀಕರಣವನ್ನು ಪ್ರಾರಂಭಿಸಿದ್ದೇನೆ ಎಂದು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಭಾನುವಾರ ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಕೋವಿಡ್ -19 ರಿಂದ ಚೇತರಿಸಿಕೊಂಡ ಬಚ್ಚನ್, ಮಾರ್ಚ್‌ನಲ್ಲಿ ಕೊರೋನಾ ಪ್ರೇರಿತ ಲಾಕ್‌ಡೌನ್ ನಂತರ ಮೊದಲ ಬಾರಿಗೆ ಶೂಟಿಂಗ್ ಸೆಟ್ ಗೆ ಬಂದಿದ್ದಾರೆ.

77 ವರ್ಷದ ನಟ ತಮ್ಮ ಬ್ಲಾಗಿನಲ್ಲಿ ಕೆಬಿಸಿ ಚಿತ್ರೀಕರಣದ ಅನುಭವ ಹಂಚಿಕೊಂಡಿದ್ದಾರೆ. ಎಲ್ಲರೂ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್‌ಗಳನ್ನು ಧರಿಸಿದ್ದಾರೆಕೆಬಿಸಿ ಪ್ರಾರಂಭವಾಗಿದೆ.  ಕೆಬಿಸಿ 12. ಪ್ರಾರಂಭವಾದ ವರ್ಷ 2000, ಇಂದು 2020 ವರ್ಷ. ವರ್ಷಗಳು ಕಳೆದವು... ಶೋ ಉಳಿದಿದೆ. "ಶಾಂತ, ಪ್ರಜ್ಞೆ, ಪ್ರತಿ ನಿಯೋಜಿತ ಕೆಲಸದ ದಿನಚರಿ, ಮುನ್ನೆಚ್ಚರಿಕೆಗಳು, ವ್ಯವಸ್ಥೆಗಳು, ಸಾಮಾಜಿಕ ಅಂತರ, ಮಾಸ್ಕ್ ಗಳು, ಸ್ವಚ್ಚವಾಗಿರುವ ಸೆಟ್ ಆದರೂ ಶೋ ಏನಾಗಬಹುದುಎಂಬ ಆತಂಕ.... ಬಚ್ಚನ್ ಹೇಳಿದ್ದಾರೆ.

ಅನುಭವಿ ನಟ ಸೆಟ್‌ನಲ್ಲಿ ಸೌಹಾರ್ದ ವಾತಾವರಣ ಕಡಿಮೆಯಾಗಿರುವುದು ಗಮನಿಸಿದ್ದಾರೆ. ಕೆಲಸಕ್ಕೆ ಸಂಬಂಧಿಸದ ಹೊರತು ಯಾರೂ ಪರಸ್ಪರ ಮಾತನಾಡಲಿಲ್ಲ. "ಇದು ಪ್ರಯೋಗಾಲಯದಂತಿದೆ, . ಇದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ, ಅಂತಹ ದೃಶ್ಯಗಳನ್ನು ನೋಡುವ ಸಮಯ ಎಂದಿಗೂ  ಬರುವುದಿಲ್ಲ ಎಂದಿದ್ದೆ ಆದರೆ ಇಲ್ಲಿ ಹಾಗೆಯೇ ಇದೆ... ಗುರುತಿರುವ ಮುಖಗಳನ್ನೂ ಈಗ ಗುರುತಿಸಲಾಗುತ್ತಿಲ್ಲ.  ನಾವು ಸರಿಯಾದ ಸ್ಥಳ, ಸರಿಯಾದ ಜನರೊಡನೆ  ಇದ್ದೇವೆಯೇ ಎಂಬ ಅನುಮಾನ, ಭಯ ಎಲ್ಲದರೊಡನೆ ಮುಂದುವರಿದಿದ್ದೇವೆ...ಎಲ್ಲಾ ಮುನ್ನೆಚ್ಚರಿಕೆಗಳೊಡನೆ ಎಚ್ಚರಿಕೆಯಿಂದ ಕೆಲಸ ಮಾಡುತ್ತವೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಗಾಂಧಿ ಜಯಂತಿ 2025: ರಾಜ್‌ಘಾಟ್‌ನಲ್ಲಿ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಪುಷ್ಪ ನಮನ

ರಾಜ್ಯ ಸರ್ಕಾರ ಕಿರುಕುಳ ನೀಡುತ್ತಿದೆ, ಪತಿಯನ್ನು ಕೂಡಲೇ ಬಿಡುಗಡೆ ಮಾಡಿ; ಪ್ರಧಾನಿ, ರಾಷ್ಟ್ರಪತಿಗಳಿಗೆ ಸೋನಮ್ ವಾಂಗ್‌ಚುಕ್ ಪತ್ನಿ ಆಗ್ರಹ

ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗದು: ಸಿಎಂ ಸಿದ್ದರಾಮಯ್ಯ

RSS ಶತಮಾನೋತ್ಸವ: ಈ ಅದ್ಭುತ ಪಯಣ ಭಾರತದ ದಿಕ್ಕನ್ನೇ ಬದಲಾಯಿಸಿದೆ; BJP

ದ್ವೇಷ, ಹಿಂಸೆ, ಅನ್ಯಾಯವೆಂಬ ಅಂಧಕಾರ ಆವರಿಸಿದಂತೆಲ್ಲಾ ಅದರಿಂದ ಹೊರಬರಲು ಮತ್ತೆ ಮತ್ತೆ ನೆನಪಾಗುವುದು ಬಾಪು: ಸಿಎಂ ಸಿದ್ದರಾಮಯ್ಯ

SCROLL FOR NEXT