ಸರೋಜ್ ಖಾನ್ 
ಬಾಲಿವುಡ್

ಬಾಲಿವುಡ್ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಇನ್ನಿಲ್ಲ

ಬಾಲಿವುಡ್ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ ಹೃದಯಾಘಾತದಿಂದ ದಿಂದ ಶುಕ್ರವಾರ ಮುಂಜಾನೆ ನಿಧನ ಹೊಂದಿದ್ದಾರೆ.

ಮುಂಬೈ: ಬಾಲಿವುಡ್ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ ಹೃದಯಾಘಾತದಿಂದ ದಿಂದ ಶುಕ್ರವಾರ ಮುಂಜಾನೆ ನಿಧನ ಹೊಂದಿದ್ದಾರೆ. 

ಅವರಿಗೆ 71 ವರ್ಷ ವಯಸ್ಸಾಗಿತ್ತು. ಸರೋಜ್ ಖಾನ್ ಪತಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ನಂತರ ಕಳೆದ ತಿಂಗಳು ಮುಂಬೈನ ಗುರು ನಾನಕ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಹೃದಯಾಘಾತದಿಂದ ಶುಕ್ರವಾರ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಬಾಲಿವುಡ್ ಹಿರಿಯ ನೃತ್ಯ ಸಂಯೋಜಕಿಯಾಗಿದ್ದ ಸರೋಜ್ ಖಾನ್ ತಮ್ಮ ವೃತ್ತಿ ಜೀವನದಲ್ಲಿ 2 ಸಾವಿರಕ್ಕೂ ಹಿಂದಿ ಸಿನಿಮಾ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದರು.

ವಿಶೇಷವಾಗಿ ಬಾಲಿವುಡ್ ನಟಿಯರಾದ ಮಾಧರಿ ದೀಕ್ಷಿತ್ ಹಾಗೂ ಶ್ರೀದೇವಿ ಅವರಿಗೆ ಮಾಡಿದ್ದ ನೃತ್ಯ ಸಂಯೋಜನೆ ಬಾಲಿವುಡ್ ನಲ್ಲಿ ಭಾರಿ ಜನಪ್ರಿಯತೆ ಗಳಿಸಿತ್ತು.

ಉಸಿರಾಟದ ತೊಂದರೆ ಕಾಣಿಸಿಕೊಂಡ ನಂತರ ಜೂನ್ 17 ರಂದು ಸರೋಜ್ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಾಸಿಲಾಗಿತ್ತು, ಆದರೆ ಅವರಿಗೆ ನಡೆಸಲಾದ ಕೋವಿಡ್ ಪರೀಕ್ಷೆಯಲ್ಲಿ ನೆಗಟಿವ್ ವರದಿ ಬಂದಿತ್ತು.

ಸರೋಜ್ ಖಾನ್ ಅವರ ನಿಧನಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನೃತ್ಯ ಸಂಯೋಜನೆಯ ದಂತಕತೆಯಾಗಿದ್ದ ಸರೋಜ್ ಖಾನ್ ಅವರ ನಿಧನ ಚಿತ್ರರಂಗಕ್ಕೆ ಉಂಟಾದ ಅತಿ ದೊಡ್ಡ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ. 

1948ರಲ್ಲಿ ಮುಂಬೈನಲ್ಲಿ ಜನಿಸಿದ್ದ ಸರೋಜ್ ಖಾನ್, ಮೂರು ವರ್ಷದ ಮಗುವಾಗಿದ್ದಾಲೇ ಬಾಲ ನಟಿಯಾಗಿ ಸಿನಿಮಾ ರಂಗ ಪ್ರವೇಶಿಸಿದ್ದರು. 

ಆಕೆಗೆ 71 ವರ್ಷ. ಅವರ ನಿಜವಾದ ಹೆಸರು ನಿರ್ಮಲಾ ನಾಗ್ಪಾಲ್. ಅವರು 200ಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಸರೋಜ್ ಮೊದಲು ಸಹಾಯಕ ನೃತ್ಯ ಸಂಯೋಜಕರಾಗಿದ್ದರು. ಆದರೆ ಅವರು 1947ರ ಗೀತಾ ಮೇರಾ ನಾಮ್ ಚಿತ್ರದೊಂದಿಗೆ ನೃತ್ಯ ಸಂಯೋಜಕರಾದರು.

'ನಿಂಬುಡಾ-ನಿಂಬುಡಾ', 'ಏಕ್ ದೋ ತೀನ್', 'ಡೋಲಾ ರೆ ಡೋಲಾ', 'ಕಟ್ಟೆ ನಹಿ ಕಡ್ತೆ' ಸೇರಿದಂತೆ ಸಾವಿರಾರು ಹಿಂದಿ ಚಿತ್ರ ಗೀತೆಗಳಿಗೆ ಸರೋಜ್ ಖಾನ್ ನೃತ್ಯ ಸಂಯೋಜನೆ ಮಾಡಿದ್ದಾರೆ. 'ಹವಾ-ಹವಾಯಿ', 'ನಾ ಜಾನೆ ಕಹನ್ ಸೆ ಸೆ ಆಯಿ ಹೈ', 'ದಿಲ್ ಛಾಕ್-ಛಾಕ್ ಕರ್ ಲಗಾ', 'ಹಮ್ ಆಜ್ ಆಜ್ ಹೈ ಕಾಯುವಿಕೆ', 'ಚೋಲಿ ಕೆ ಪ್ಯಾರ್' ಮುಂತಾದ ಅನೇಕ ಸೂಪರ್ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

ಸರೋಜ್ ಖಾನ್ ತೇಜಾಬ್ , ಖಳನಾಯಕ್, ಮಿಸ್ಟರ್ ಇಂಡಿಯಾ, ನಾಗಿನಾ, ಚಾಂದನಿ, ಹಮ್ ದಿಲ್ ದೇ ಚುಕೆ ಸನಮ್, ದೇವದಾಸ್ , ಚಿತ್ರ ಹಾಡುಗಳಿಗೆ ಮಾಡಿದ್ದ ನೃತ್ಯ ಸಂಯೋಜನೆ ರಸಿಕರ ಮನ ಸೂರೆಗೊಂಡಿದ್ದವು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT