ಸರೋಜ್ ಖಾನ್ 
ಬಾಲಿವುಡ್

ಬಾಲಿವುಡ್ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಇನ್ನಿಲ್ಲ

ಬಾಲಿವುಡ್ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ ಹೃದಯಾಘಾತದಿಂದ ದಿಂದ ಶುಕ್ರವಾರ ಮುಂಜಾನೆ ನಿಧನ ಹೊಂದಿದ್ದಾರೆ.

ಮುಂಬೈ: ಬಾಲಿವುಡ್ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ ಹೃದಯಾಘಾತದಿಂದ ದಿಂದ ಶುಕ್ರವಾರ ಮುಂಜಾನೆ ನಿಧನ ಹೊಂದಿದ್ದಾರೆ. 

ಅವರಿಗೆ 71 ವರ್ಷ ವಯಸ್ಸಾಗಿತ್ತು. ಸರೋಜ್ ಖಾನ್ ಪತಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ನಂತರ ಕಳೆದ ತಿಂಗಳು ಮುಂಬೈನ ಗುರು ನಾನಕ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಹೃದಯಾಘಾತದಿಂದ ಶುಕ್ರವಾರ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಬಾಲಿವುಡ್ ಹಿರಿಯ ನೃತ್ಯ ಸಂಯೋಜಕಿಯಾಗಿದ್ದ ಸರೋಜ್ ಖಾನ್ ತಮ್ಮ ವೃತ್ತಿ ಜೀವನದಲ್ಲಿ 2 ಸಾವಿರಕ್ಕೂ ಹಿಂದಿ ಸಿನಿಮಾ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದರು.

ವಿಶೇಷವಾಗಿ ಬಾಲಿವುಡ್ ನಟಿಯರಾದ ಮಾಧರಿ ದೀಕ್ಷಿತ್ ಹಾಗೂ ಶ್ರೀದೇವಿ ಅವರಿಗೆ ಮಾಡಿದ್ದ ನೃತ್ಯ ಸಂಯೋಜನೆ ಬಾಲಿವುಡ್ ನಲ್ಲಿ ಭಾರಿ ಜನಪ್ರಿಯತೆ ಗಳಿಸಿತ್ತು.

ಉಸಿರಾಟದ ತೊಂದರೆ ಕಾಣಿಸಿಕೊಂಡ ನಂತರ ಜೂನ್ 17 ರಂದು ಸರೋಜ್ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಾಸಿಲಾಗಿತ್ತು, ಆದರೆ ಅವರಿಗೆ ನಡೆಸಲಾದ ಕೋವಿಡ್ ಪರೀಕ್ಷೆಯಲ್ಲಿ ನೆಗಟಿವ್ ವರದಿ ಬಂದಿತ್ತು.

ಸರೋಜ್ ಖಾನ್ ಅವರ ನಿಧನಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನೃತ್ಯ ಸಂಯೋಜನೆಯ ದಂತಕತೆಯಾಗಿದ್ದ ಸರೋಜ್ ಖಾನ್ ಅವರ ನಿಧನ ಚಿತ್ರರಂಗಕ್ಕೆ ಉಂಟಾದ ಅತಿ ದೊಡ್ಡ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ. 

1948ರಲ್ಲಿ ಮುಂಬೈನಲ್ಲಿ ಜನಿಸಿದ್ದ ಸರೋಜ್ ಖಾನ್, ಮೂರು ವರ್ಷದ ಮಗುವಾಗಿದ್ದಾಲೇ ಬಾಲ ನಟಿಯಾಗಿ ಸಿನಿಮಾ ರಂಗ ಪ್ರವೇಶಿಸಿದ್ದರು. 

ಆಕೆಗೆ 71 ವರ್ಷ. ಅವರ ನಿಜವಾದ ಹೆಸರು ನಿರ್ಮಲಾ ನಾಗ್ಪಾಲ್. ಅವರು 200ಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಸರೋಜ್ ಮೊದಲು ಸಹಾಯಕ ನೃತ್ಯ ಸಂಯೋಜಕರಾಗಿದ್ದರು. ಆದರೆ ಅವರು 1947ರ ಗೀತಾ ಮೇರಾ ನಾಮ್ ಚಿತ್ರದೊಂದಿಗೆ ನೃತ್ಯ ಸಂಯೋಜಕರಾದರು.

'ನಿಂಬುಡಾ-ನಿಂಬುಡಾ', 'ಏಕ್ ದೋ ತೀನ್', 'ಡೋಲಾ ರೆ ಡೋಲಾ', 'ಕಟ್ಟೆ ನಹಿ ಕಡ್ತೆ' ಸೇರಿದಂತೆ ಸಾವಿರಾರು ಹಿಂದಿ ಚಿತ್ರ ಗೀತೆಗಳಿಗೆ ಸರೋಜ್ ಖಾನ್ ನೃತ್ಯ ಸಂಯೋಜನೆ ಮಾಡಿದ್ದಾರೆ. 'ಹವಾ-ಹವಾಯಿ', 'ನಾ ಜಾನೆ ಕಹನ್ ಸೆ ಸೆ ಆಯಿ ಹೈ', 'ದಿಲ್ ಛಾಕ್-ಛಾಕ್ ಕರ್ ಲಗಾ', 'ಹಮ್ ಆಜ್ ಆಜ್ ಹೈ ಕಾಯುವಿಕೆ', 'ಚೋಲಿ ಕೆ ಪ್ಯಾರ್' ಮುಂತಾದ ಅನೇಕ ಸೂಪರ್ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

ಸರೋಜ್ ಖಾನ್ ತೇಜಾಬ್ , ಖಳನಾಯಕ್, ಮಿಸ್ಟರ್ ಇಂಡಿಯಾ, ನಾಗಿನಾ, ಚಾಂದನಿ, ಹಮ್ ದಿಲ್ ದೇ ಚುಕೆ ಸನಮ್, ದೇವದಾಸ್ , ಚಿತ್ರ ಹಾಡುಗಳಿಗೆ ಮಾಡಿದ್ದ ನೃತ್ಯ ಸಂಯೋಜನೆ ರಸಿಕರ ಮನ ಸೂರೆಗೊಂಡಿದ್ದವು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ