ಬಾಲಿವುಡ್ ಹಿರಿಯ ನಟ ಜಗದೀಪ್ 
ಬಾಲಿವುಡ್

ಬಾಲಿವುಡ್ ಹಿರಿಯ ನಟ -ಕಾಮಿಡಿಯನ್ ಜಗದೀಪ್ ನಿಧನ

ಭಾರತೀಯ ಚಿತ್ರರಂಗದ ಮತ್ತೊಬ್ಬ ಹಿರಿಯ ನಟ- ಕಾಮಿಡಿಯನ್ ಜಗದೀಪ್  ನಿಧನರಾಗಿದ್ದಾರೆ.ಅವರಿಗೆ 81 ವರ್ಷ ವಯಸ್ಸಾಗಿತ್ತು.ಅಮಿತಾಭ್‌ ಬಚ್ಚನ್‌ ಅವರ 'ಶೋಲೆ' ಸಿನಿಮಾದಲ್ಲಿನ ಸೂರ್ಮಾ ಭೋಪಾಲಿ ಎಂಬ ಪಾತ್ರದ ಮೂಲಕ ನಟ ಜಗದೀಪ್‌ ಹೆಚ್ಚು ಜನಪ್ರಿಯ ಆಗಿದ್ದರು. 

ಮುಂಬೈ: ಭಾರತೀಯ ಚಿತ್ರರಂಗದ ಮತ್ತೊಬ್ಬ ಹಿರಿಯ ನಟ- ಕಾಮಿಡಿಯನ್ ಜಗದೀಪ್  ನಿಧನರಾಗಿದ್ದಾರೆ.ಅವರಿಗೆ 81 ವರ್ಷ ವಯಸ್ಸಾಗಿತ್ತು.ಅಮಿತಾಭ್‌ ಬಚ್ಚನ್‌ ಅವರ 'ಶೋಲೆ' ಸಿನಿಮಾದಲ್ಲಿನ ಸೂರ್ಮಾ ಭೋಪಾಲಿ ಎಂಬ ಪಾತ್ರದ ಮೂಲಕ ನಟ ಜಗದೀಪ್‌ ಹೆಚ್ಚು ಜನಪ್ರಿಯ ಆಗಿದ್ದರು. 

ಜಗದೀಪ್‌ ಅವರ ಮೂಲ ಹೆಸರು ಸಯ್ಯದ್‌ ಇಷ್ತಿಯಾಕ್‌ ಅಹ್ಮದ್‌ ಜಫ್ರಿ. ಆದರೆ ಚಿತ್ರರಂಗದಲ್ಲಿ ಜಗದೀಪ್‌ ಎಂಬ ಹೆಸರಿನಿಂದಲೇ ಗುರುತಿಸಿಕೊಂಡಿದ್ದರು.ಜಗದೀಪ್‌ ಪುತ್ರ ಜಾವೇದ್‌ ಜಫ್ರಿ ಕೂಡ ಜನಪ್ರಿಯ ನಟ.

ಬಾಂದ್ರಾದಲ್ಲಿನ ನಿವಾಸದಲ್ಲಿ ಬುಧವಾರ ರಾತ್ರಿ 8-30ರ ಸಮಯದಲ್ಲಿ ಅವರು ನಿಧನರಾಗಿದ್ದು, ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಅವರ ಆಪ್ತ ಸ್ನೇಹಿತ ನಿರ್ಮಾಪಕ ಮೊಹಮ್ಮದ್ ಆಲಿ ತಿಳಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಜಗದೀಪ್ ಸುಮಾರು 400 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1975ರಲ್ಲಿ ಬಿಡುಗಡೆಯಾದ 'ಶೋಲೆ' ಚಿತ್ರದಲ್ಲಿನ ಸೂರ್ಮಾ ಭೋಪಾಲಿ ಪಾತ್ರ ಇಂದಿಗೂ ಕೂಡಾ ಜನ ಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. 'ಪುರಾಣ ಮಂದಿರ್' ಮತ್ತು ಅಂದಾಜ್ ಅಪ್ನಾ ಅಪ್ನಾ  ಚಿತ್ರದಲ್ಲಿ ಸಲ್ಮಾನ್ ಖಾನ್ ತಂದೆಯ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದರು.

'ಶೋಲೆ' ಸಿನಿಮಾದಲ್ಲಿ ತಾವು ಮಾಡಿದ್ದ ಪಾತ್ರವನ್ನೇ ಆಧಾರವಾಗಿಟ್ಟುಕೊಂಡು 1998ರಲ್ಲಿ 'ಸೂರ್ಮಾ ಭೋಪಾಲಿ' ಶೀರ್ಷಿಕೆಯಲ್ಲೇ ಜಗದೀಪ್‌ ಸಿನಿಮಾ ಮಾಡಿದ್ದರು. ಜಗದೀಪ್ ಇಬ್ಬರು ಮಕ್ಕಳನ್ನು ಅಗಲಿದ್ದು, ಅವರ ನಿಧನಕ್ಕೆ ಬಾಲಿವುಡ್ ನ ಅನೇಕರು ಕಂಬನಿ ಮಿಡಿದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ