ಸೋನು ಸೂದ್ 
ಬಾಲಿವುಡ್

ತನ್ನ ಮಗುವಿಗೆ 'ಸೋನು ಸೂದ್' ಎಂದು ಹೆಸರಿಟ್ಟ ವಲಸೆ ಕಾರ್ಮಿಕ ಮಹಿಳೆ!

ಲಾಕ್ ಡೌನ್ ಮಧ್ಯೆ ಸಿಕ್ಕಿಬಿದ್ದ ವಲಸಿಗರಿಗೆ ಸುರಕ್ಷಿತವಾಗಿ ತಮ್ಮ ಸ್ವಂತ ಊರುಗಳಿಗೆ ತಲುಪಲು ನಿರಂತರ ಸಹಾಯ ಮಾಡುತ್ತಿರುವ ಬಾಲಿವುಡ್ ನಟ ಸೋನು ಸೂದ್ ಅವರ ಹೆಸರನ್ನು ವಲಸೆ ಕಾರ್ಮಿಕ ಮಹಿಳೆಯೊಬ್ಬಳು ತನ್ನ ಮಗುವಿಗೆ ಇಡುವ ಮೂಲಕ ಕೃತಜ್ಞತೆ ಮೆರೆದಿದ್ದಾಳೆ.

ಲಾಕ್ ಡೌನ್ ಮಧ್ಯೆ ಸಿಕ್ಕಿಬಿದ್ದ ವಲಸಿಗರಿಗೆ ಸುರಕ್ಷಿತವಾಗಿ ತಮ್ಮ ಸ್ವಂತ ಊರುಗಳಿಗೆ ತಲುಪಲು ನಿರಂತರ ಸಹಾಯ ಮಾಡುತ್ತಿರುವ ಬಾಲಿವುಡ್ ನಟ ಸೋನು ಸೂದ್ ಅವರ ಹೆಸರನ್ನು ವಲಸೆ ಕಾರ್ಮಿಕ ಮಹಿಳೆಯೊಬ್ಬಳು ತನ್ನ ಮಗುವಿಗೆ ಇಡುವ ಮೂಲಕ ಕೃತಜ್ಞತೆ ಮೆರೆದಿದ್ದಾಳೆ. ಮಹಿಳೆ ತನ್ನ ಮಗುವಿಗೆ ಸೋನು ಸೂದ್ ಶ್ರೀವಾಸ್ತವ್ ಎಂದು ಹೆಸರಿಟ್ಟದ್ದನ್ನು ತಿಳಿದ ನಟ ಸೋನು ಸೂದ್ ಭಾವುಕರಾಗಿದ್ದಾರೆ.

ಎರಡು ವಾರಗಳ ಹಿಂದೆ ಅವರು ಸಹಾಯ ಮಾಡಿದ್ದ  ಗರ್ಭಿಣಿ ವಲಸೆ ಕಾರ್ಮಿಕ ಮಹಿಳೆಯೊಬ್ಬಳು ತನ್ನ ಹಳ್ಳಿಯನ್ನು ಸುರಕ್ಷಿತವಾಗಿ ತಲುಪಿದ್ದಾಳೆ ಮತ್ತು ತನ್ನ ಹೆರಿಗೆಯ ಬಳಿಕ ನವಜಾತ ಮಗನಿಗೆ ಸೋನು ಸೂದ್ ಹೆಸರನ್ನಿಟ್ಟಿದ್ದಾಳೆ ಎಂದು ನಟ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಮಹಿಳೆಯ ಕುಟುಂಬ ನಟನಿಗೆ ಕರೆಮಾಡಿ ಮಗುವಿಗೆ ಸೋನು ಸೂದ್ ಎಂದು ಹೆಸರಿಟ್ಟಿದ್ದಾಗಿ ಹೇಳಿದೆ. 

"ನಾನು ಅವರು ಶ್ರೀವಾಸ್ತವ್ ವಾಗಿರುವ ಕಾರಣ ಸೂದ್ ಎನ್ನುವ ಹೆಸರನ್ನು ಹೇಗೆ ಇಡುತ್ತೀರೆಂದು ಕೇಳಿದೆ. ಅಲ್ಲದೆ ಸೋನು ಶ್ರೀವಾಸ್ತವ್ ಎಂದಿಡಲು ಹೇಳಿದೆ. ಆದರೆ ಆಕೆ ‘ನಹಿ ಹಮ್ನಿ ಬಚ್ಚೆ ಕಾ ನಾಮ್ ಸೋನು ಸೂದ್ ಶ್ರೀವಾಸ್ತವ್ ರಾಖಾ ಹೈ.’ಎಂದಿದ್ದರು. ಇದು ನನ್ನ ಹೃದಯವನ್ನು ತಟ್ಟಿದೆ. 

ಸೋನು ಸೂದ್ ವಲಸಿಗರಿಗಗಾಇ ಸಾಕಷ್ಟು ಸಂಖ್ಯೆಯ ಬಸ್ಸುಗಳನ್ನು ವ್ಯವಸ್ಥೆಗೊಳಿಸಿದ್ದಕ್ಕಾಗಿ ರಾಷ್ಟ್ರದಾದ್ಯಂತ ಜನರ ಮನ ಗೆದ್ದಿದ್ದಾರೆ. ಮೇ 29, 2020 ರಂದು ಕೇರಳದಲ್ಲಿ ಸಿಲುಕಿದ್ದ 170 ಯುವತಿಯರನ್ನು  ತಮ್ಮ ಮನೆಗಳಿಗೆ  ವಿಮಾನದಲ್ಲಿ ಕಳಿಸುವ ಮೂಲಕ ಸೋನು ಸೂದ್  ಮತ್ತೆ ಮಾನವೀಯತೆ ಮೆರೆದಿದ್ದರು. ಇಲ್ಲಿಯವರೆಗೆ ನಟ  2000 ಕ್ಕೂ ಹೆಚ್ಚು ಕಾರ್ಮಿಕರನ್ನು ವಿವಿಧ ಭಾರತೀಯ ರಾಜ್ಯಗಳಲ್ಲಿರುವ ತಮ್ಮ ಮನೆಗಳಿಗೆ ಕಳುಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ: ಸಿಎಂ ಆಪ್ತ ಗುಂಪಿನಿಂದ ಸ್ಪೋಟಕ ಸಂದೇಶ, ಡಾ. ಜಿ. ಪರಮೇಶ್ವರ್ ಹೇಳಿದ್ದೇನು?

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

SCROLL FOR NEXT