ಬಾಲಿವುಡ್

ಗಾಯಕ ಎಸ್‌ಪಿಬಿ ನಿಧನಕ್ಕೆ ಬಾಲಿವುಡ್ ದಿಗ್ಗಜರ  ಕಂಬನಿ

Raghavendra Adiga

ಮುಂಬೈ: ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಬಾಲಿವುಡ್ ಗಣ್ಯರು ಸಂತಾಪ ಸೂಚಿಸಿದ್ದು, ಇದು ಉದ್ಯಮ ಮತ್ತು ರಾಷ್ಟ್ರಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದ್ದಾರೆ.

'ಎಸ್‌ಪಿಬಿ ಎಂದು ಪ್ರಸಿದ್ಧವಾಗಿದ್ದ ಬಾಲಸುಬ್ರಹ್ಮಣ್ಯಂ ಕೋವಿಡ್ -19 ಸೋಲಿಗೆ ತುತ್ತಾಗಿ  51 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ಸ್ಥಿತಿಯಲ್ಲಿ ಹೋರಾಟ ನಡೆಸಿದ್ದಾರೆ. 

"ಪ್ರತಿಭಾಶಾಲಿ ಗಾಯಕ ಮೃದುಭಾಷಿ, ಬಹಳ ನಯವಾದ ವ್ಯಕ್ತಿ  ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನವಾದ ಸುದ್ದಿ ಕೇಳಿ ಬಹಳ ದುಃಖವಾಗಿದೆ. " ಖ್ಯಾತ ಗಾಯಕ ಲತಾ ಮಂಗೇಷ್ಕರ್ ಹೇಳಿದ್ದಾರೆ.

ಪ್ರಖ್ಯಾತ ಸಂಗೀತ ಸಂಯೋಜಕ ಎ ಆರ್ ರಹಮಾನ್ ,"#ripspb ...Devastated" ಎಂದು ಟ್ವೀಟ್ ಮಾಡಿದ್ದಾರೆ.

"ಬಾಲಸುಬ್ರಹ್ಮಣ್ಯಂ ಅವರ ನಿಧನದ ಬಗ್ಗೆ ಕೇಳಿದಾಗ ತುಂಬಾ ದುಃಖವಾಯಿತು. ಕೆಲವು ತಿಂಗಳ ಹಿಂದೆ ನಾನು ಈ ಲಾಕ್‌ಡೌನ್‌ನಲ್ಲಿನ ವರ್ಚುವಲ್ ಕನ್ಸರ್ಟ್ ಸಮಯದಲ್ಲಿ ಅವರೊಂದಿಗೆ ಮಾತನಾಡಿದ್ದೆ, ಅವರ ಸಾವು ನಿಜಕ್ಕೂ ಅಚ್ಚಿರಿಯಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ" ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ. 

ಗಾಯಕ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಜಾನಿ ಲಿವರ್ ಸಹ ಸಂತಾಪ ವ್ಯಕ್ತಪಡಿಸಿದ್ದಾರೆ. ಇವರಲ್ಲದೆ ಮಹೇಶ್ ಬಾಬು. ರಿತೇಶ್ ದೇಶ್ ಮುಖ್, ಕೃತಿ ಕರಬಂಧ, ನೀಲ್ ನಿತಿನ್ ಮುಖೇಶ್, ಶ್ರುತಿ ಹಾಸನ್, ಸುಧೀರ್ ಬಾಬು, ಇನ್ನೂ ಮೊದಲಾದವರು ಶೋಕ ವ್ಯಕ್ತಪಡಿಸಿದ್ದಾರೆ. 

SCROLL FOR NEXT