ಸುಶಾಂತ್ ಸಿಂಗ್ ರಜಪೂತ್ 
ಬಾಲಿವುಡ್

ನಟ ಸುಶಾಂತ್ ಸಿಂಗ್ ಮೊದಲ ಪುಣ್ಯಸ್ಮರಣೆ: 'ಎ ನ್ಯೂಟ್ರಾನ್‌ ಸ್ಟಾರ್' ನೆನೆದ ಭೂಮಿ ಪೆಡ್ನೇಕರ್!

ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೊದಲ ಪುಣ್ಯಸ್ಮರಣೆ ಇಂದು. ಈ ಹಿನ್ನೆಲೆ, ಅವರ 'ಸೋಂಚಿರಿಯಾ' ಸಹನಟಿ ಭೂಮಿ ಪೆಡ್ನೇಕರ್ ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಬರಹ ಹಂಚಿಕೊಂಡಿದ್ದಾರೆ.

ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೊದಲ ಪುಣ್ಯಸ್ಮರಣೆ ಇಂದು. ಈ ಹಿನ್ನೆಲೆ, ಅವರ 'ಸೋಂಚಿರಿಯಾ' ಸಹನಟಿ ಭೂಮಿ ಪೆಡ್ನೇಕರ್ ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಬರಹ ಹಂಚಿಕೊಂಡಿದ್ದಾರೆ.

ಭೂಮಿ ಪೆಡ್ನೇಕರ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ 2019 ರ ಹಿಟ್ ಚಿತ್ರ 'ಸೋಂಚಿರಿಯಾ'ದ ಬಿಟಿಎಸ್ ಚಿತ್ರಗಳ ಸರಣಿಯನ್ನು ಹಂಚಿಕೊಂಡಿದ್ದಾರೆ.

"ಮಿಸ್ ಯು, ನಾವು ಮಾತನಾಡಿದ ಎಲ್ಲವೂ. ನಕ್ಷತ್ರಗಳಿಂದ ಹಿಡಿದು ಅಜ್ಞಾತ ವಿಷಯಗಳವರೆಗೆ ಅಪೂರ್ವವಾದದ್ದು, ನಾನು ಹಿಂದೆಂದೂ ನೋಡಿರದಂತೆ ನೀವು ಜಗತ್ತನ್ನು ನನಗೆ ತೋರಿಸಿದ್ದೀರಿ. ಓಂ ಶಾಂತಿ #Forever #Ssr #Peace #neutronstar," ಎಂದು ಅವರು ಹೃದಯಸ್ಪರ್ಶಿಯಾಗಿ ಬರೆದುಕೊಂಡಿದ್ದಾರೆ.

'ಸೋಂಚಿರಿಯಾ' ಚಿತ್ರದಲ್ಲಿ ಸುಶಾಂತ್, ಭೂಮಿ, ಮನೋಜ್ ಬಾಜಪೇಯಿ, ರಣವೀರ್ ಶೋರೆ ಮತ್ತು ಅಶುತೋಷ್ ರಾಣಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಂಬಲ್‌ನಲ್ಲಿ ನಡೆದ ಕಥೆಯನ್ನು ಪ್ರಸ್ತುತಪಡಿಸಿದ ಈ ಚಿತ್ರವು ಮಾರ್ಚ್ 2019 ರಲ್ಲಿ ಬಿಡುಗಡೆಯಾಯಿತು ಮತ್ತು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಆದರೆ, ಇದು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಕಂಡಿರಲಿಲ್ಲ.

ವೈವಿಧ್ಯಮಯ ಪಾತ್ರಗಳನ್ನು ಪರಿಪೂರ್ಣತೆಯೊಂದಿಗೆ ಅಭಿನಯಿಸಲು ಹೆಸರುವಾಸಿಯಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಅವರು 2020 ರ ಜೂನ್ 14 ರಂದು ತಮ್ಮ ಅಪಾರ್ಟ್ ಮೆಂಟಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಇಂದು ಆ ಘಟನೆಗೆ ಒಂದು ವರ್ಷವಾಗಿದೆ. ಆದರೆ ದಿವಂಗತ ನಟನು ಬಿಟ್ಟುಹೋದ ಖಾಲಿತನವನ್ನು ರಾಷ್ಟ್ರವು ಇನ್ನೂ ಅನುಭವಿಸುತ್ತಿದೆ.

ಅವರ ನಿಧನವು ಭಾರಿ ವಿವಾದಕ್ಕೆ ಕಾರಣವಾಯಿತು, ಅವರ ಕುಟುಂಬ ನ್ಯಾಯಕ್ಕೆ ಆಗ್ರಹಿಸಿದೆ.ಗೆಳತಿ ಮತ್ತು ನಟ ರಿಯಾ ಚಕ್ರವರ್ತಿಯ ಮೇಲೆ ಸಹ ಆರೋಪ ಕೇಳಿಬಂದಿತ್ತು.  ಪ್ರಸ್ತುತ, ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಅವರ ಸಾವಿನ ತನಿಖೆ ನಡೆಸುತ್ತಿದೆ.

2008 ರಲ್ಲಿ 'ಕಿಸ್ ದೇಶ್ ಮೇ ಹೈ ಮೇರಾ ದಿಲ್' ಎಂಬ ಟಿವಿ ಕಾರ್ಯಕ್ರಮದೊಂದಿಗೆ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದ ಸುಶಾಂತ್, ಅಂಕಿತಾ ಲೋಖಂಡೆ ಎದುರು ಕಿರುತೆರೆಯ ಜನಪ್ರಿಯ ಶೋ 'ಪವಿತ್ರ ರಿಷ್ತಾ'ದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಮನೆಮಾತಾದರು.

2013 ರಲ್ಲಿ ಅವರು'ಕಾಯ್ ಪೋ ಚೆ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು ಮತ್ತು ಅಂದಿನಿಂದ ಅವರು ಹಿಂದೆ ಮುಂದೆ ನೋಡಲಿಲ್ಲ. 'ಡಿಟೆಕ್ಟಿವ್ ಬಯೋಮಕೇಶ್ ಬಕ್ಷಿ!', 'ಎಂ.ಎಸ್. ಧೋನಿ' ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ಈ ನಟ ಅಭಿನಯಿಸಿದ್ದಾರೆ.

ಶ್ರದ್ಧಾ ಕಪೂರ್ ಸಹನಟನಾಗಿ ನಟಿಸಿರುವ 'ಚಿಚೋರ್' ಎಂಬ ಬ್ಲಾಕ್ಬಸ್ಟರ್ ಚಿತ್ರದಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿದರು, ಇದು ಅತ್ಯುತ್ತಮ ಹಿಂದಿ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದೆ. ಅವರ ಕೊನೆಯ ಚಿತ್ರ 'ದಿಲ್ ಬೇಚಾರ ' ಅವರ ಮರಣದ ಒಂದು ತಿಂಗಳ ನಂತರ ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆಯಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT