ಸುಬೋಧ್ ಚೋಪ್ರಾ 
ಬಾಲಿವುಡ್

'ಮರ್ಡರ್', 'ರೋಗ್' ಖ್ಯಾತಿಯ ಚಿತ್ರಕಥೆಗಾರ ಸುಬೋಧ್ ಚೋಪ್ರಾ ನಿಧನ

"ಮರ್ಡರ್" ಮತ್ತು "ರೋಗ್" ಚಿತ್ರದ ಸಂಬಾಷಣೆಗಳಿಗೆ ಹೆಸರಾದ ಬರಹಗಾರ ಸುಬೋಧ್ ಚೋಪ್ರಾ (49 )ಅವರು ಮುಂಬೈನ ಆಸ್ಪತ್ರೆಯಲ್ಲಿ ನಿಧನವಾಗಿದ್ದಾರೆ. ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅಲ್ಲದೆ ಅವರು ಕೆಲ ದಿನಗಳ ಹಿಂದಷ್ಟೇ ಕೋವಿಡ್ ನಿಂದ ಚೇತರಿಸಿಕೊಂಡಿದ್ದರೆಂದು ಅವರ ಸಹೋದರ ಶಶಾಂಕ್ ಚೋಪ್ರಾ ಹೇಳಿದ್ದಾರೆ.

"ಮರ್ಡರ್" ಮತ್ತು "ರೋಗ್" ಚಿತ್ರದ ಸಂಬಾಷಣೆಗಳಿಗೆ ಹೆಸರಾದ ಬರಹಗಾರ ಸುಬೋಧ್ ಚೋಪ್ರಾ  (49)ಅವರು ಮುಂಬೈನ ಆಸ್ಪತ್ರೆಯಲ್ಲಿ ನಿಧನವಾಗಿದ್ದಾರೆ. ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅಲ್ಲದೆ ಅವರು ಕೆಲ ದಿನಗಳ ಹಿಂದಷ್ಟೇ ಕೋವಿಡ್ ನಿಂದ ಚೇತರಿಸಿಕೊಂಡಿದ್ದರೆಂದು ಅವರ ಸಹೋದರ ಶಶಾಂಕ್ ಚೋಪ್ರಾ ಹೇಳಿದ್ದಾರೆ.

ಸುಬೋಧ್ ಚೋಪ್ರಾ ಅವರ ಆಮ್ಲಜನಕದ ಮಟ್ಟ ಕುಸಿದ ನಂತರ ಶುಕ್ರವಾರ ಮಲಾಡ್‌ನ ಉಪನಗರ ಲೈಫ್‌ಲೈನ್ ಆಸ್ಪತ್ರೆಗೆ ದಾಖಲಿಸಲಾಗಿದೆ. "ಅವರು ಮೇ 8 ರಂದು ಕೋವಿಡ್ 19 ನಿಂದ ಚೇತರಿಸಿಕೊಂಡಿದ್ದರು. ಅವರು ಹೊಟ್ಟೆಯಲ್ಲಿ ನೋವು ಅನುಭವಿಸುತ್ತಿದ್ದರು. ಅವರಿಗೆ ಏನೂ ತಿನ್ನಲು ಆಗುತ್ತಿರಲಿಲ್ಲ.ಅವರ ಆಮ್ಲಜನಕದ ಮಟ್ಟವು ಇದ್ದಕ್ಕಿದ್ದಂತೆ ಕುಸಿಯಿತು ಮತ್ತು ನಾವು ಮನೆಯಲ್ಲಿ ಸಿಲಿಂಡರ್‌ಗೆ ವ್ಯವಸ್ಥೆ ಮಾಡಿದ್ದೆವು" ಎಂದು ಶಾಂಕ್ ಚೋಪ್ರಾ ಪಿಟಿಐಗೆ ತಿಳಿಸಿದರು.

ಕೋವಿಡ್ ನಿಂದ ತಂದೆ ಸಾವನ್ನಪ್ಪಿದ ಹತ್ತು ದಿನಗಳ ಬಳಿಕ ಸುಬೋಧ್ ಚೋಪ್ರಾ, ಅವರ ಸೋದರ ಹಾಗೂ ಅತ್ತಿಗೆಗೆ ಕೋವಿಡ್ ಪಾಸಿಟಿವ್ ಎಂದು ವರದಿ ಬಂದಿತ್ತು.

ಸುಬೋಧ್ ಅವರು ವಸುಧಾ ಎಂಬ ಮಲಯಾಳಂ ಚಲನಚಿತ್ರವನ್ನು ನಿರ್ದೇಶಿಸಿದ್ದರು ಮತ್ತು ಮಹೇಶ್ ಭಟ್ ಅವರ ಹಿಂದಿ ಧಾರಾವಾಹಿಗಳಲ್ಲಿ ಸಹ ಕೆಲಸ ಮಾಡಿದ್ದರು.

ಸುಬೋಧ್ ಕಡೆಯದಾಗಿ 2019ರಲ್ಲಿ "ಇಮ್ಮಾರ್ಟಲ್ಸ್ ಆಫ್ ಕಾರ್ಗಿಲ್" ಎಂಬ ಸಾಕ್ಷ್ಯಚಿತ್ರಕ್ಕೆ ಸಂಭಾಷಣೆ ಬರೆದಿದ್ದರು.

ಈ ವರ್ಷ, ಹಲವಾರು ಬಾಲಿವುಡ್ ಕಲಾವಿದರು,  ನಿರ್ದೇಶಕರು ಕೋವಿಡ್ -19 ಗೆ ಪ್ರಾಣ ಕಳೆದುಕೊಂಡರು. ಹಿರಿಯ ಸಂಗೀತ ಸಂಯೋಜಕ ಶ್ರವಣ್ ರಾಥೋಡ್‌ನಿಂದ ಸತೀಶ್ ಕೌಲ್, ಅಭಿಲಾಶಾ ಪಾಟೀಲ್, ಚಲನಚಿತ್ರ ಸಂಕಲನಕಾರ ಅಜಯ್ ಶರ್ಮಾ, ಬಿಕ್ರಮ್‌ಜೀತ್ ಕನ್ವರ್‌ಪಾಲ್ ಮತ್ತು ಯೂಟ್ಯೂಬರ್ ರಾಹುಲ್ ವೊಹ್ರಾ ಸೇರಿ ಅನೇಕರು  ಕೋವಿಡ್ -19 ಗೆ ಬಲಿಯಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್, ಇಂದು ರಾಜೀನಾಮೆ ಅನುಮಾನ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

ಸಿಎಂ ಕುರ್ಚಿ ಕದನ: ಸಿದ್ದರಾಮಯ್ಯ ಮನೆ ಮುಂದೆ ಬೆಂಬಲಿಗರ ಶಕ್ತಿ ಪ್ರದರ್ಶನ, ರಾಜೀನಾಮೆ ನೀಡದಂತೆ ಆಗ್ರಹ..!

SCROLL FOR NEXT