ಅಜಯ್ ದೇವಗನ್ ಮತ್ತು ಬೇರ್ ಗ್ರಿಲ್ಸ್ 
ಬಾಲಿವುಡ್

'ಇಂಟು ದ ವೈಲ್ಡ್‌ ವಿತ್‌' ಕಾರ್ಯಕ್ರಮಕ್ಕೆ ಹಿಂದೂ ಮಹಾಸಾಗರದಲ್ಲಿ ನಟ ಅಜಯ್‌ ದೇವಗನ್‌ ರೋಚಕ ಚಿತ್ರೀಕರಣ

ಭಾರತದ ಪ್ರಮುಖ ನೈಜ ಮನರಂಜನಾ ವಾಹಿನಿ ಡಿಸ್ಕವರಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಚಿತ್ರಿಸಿದ ರೋಚಕ ಸಾಹಸಮಯ ಸರಣಿ ಶೊ ಒಂದು ಮೂಡಿ ಬರಲಿದೆ.

ಮುಂಬೈ: ಭಾರತದ ಪ್ರಮುಖ ನೈಜ ಮನರಂಜನಾ ವಾಹಿನಿ ಡಿಸ್ಕವರಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಚಿತ್ರಿಸಿದ ರೋಚಕ ಸಾಹಸಮಯ ಸರಣಿ ಶೊ ಒಂದು ಮೂಡಿ ಬರಲಿದೆ.

ಬಾಲಿವುಡ್‌ ನಟ ಅಜಯ್‌ ದೇವಗನ್ ಹಾಗೂ ದಿ ವೈಲ್ಡ್‌ ವಿತ್‌ ಬಿಯರ್‌ ಗ್ರಿಲ್‌ ಕಾರ್ಯಕ್ರಮದ ಗ್ರಿಲ್‌ ಈ ಸರಣಿಯ ಮೊದಲ ಕಂತಿನಲ್ಲಿ ಕಾಣಿಸಿಕೊಂಡಿದ್ದು, ಅಪಾಯಕಾರಿ ಸಾಗರದಲ್ಲಿ ಪ್ರಯಾಣ ಮಾಡುವುದನ್ನು ಕಾಣಬಹುದಾಗಿದೆ.

ಅಪಾಯಕಾರಿ ಸಾಹಸಗಳ ನಡುವೆ ಅಜಯ್‌ದೇವನ್‌ ಅವರೊಂದಿಗೆ ಗ್ರಿಲ್, ಅವರಕುಟುಂಬ, ವೃತ್ತಿ ಮತ್ತು ಜೀವನದ ಕುರಿತು ಮುಕ್ತ ಸಂಭಾಷಣೆ ನಡೆಸಲಿದ್ದಾರೆ. ಹಿಂದೂ ಮಹಾಸಾಗರದ ಅತ್ಯಂತ ನಿರ್ಜನ ದ್ವೀಪಗಳಲ್ಲಿ ಬದುಕಲು, ಪ್ರಯತ್ನಿಸುವ ಈ ಸಾಹಸಮಯ ಸರಣಿ ಮೈನವಿರೇಳಿಸುವುದರಲ್ಲಿ ಅನುಮಾನವಿಲ್ಲ. ಈ ಚಿತ್ರೀಕರಣದ ಅನುಭವ ಹಂಚಿಕೊಮಡಿರುವ ಅಜಯ್‌ ದೇವಗನ್, "ಕಾಡಿನಲ್ಲಿ ನನ್ನ ಮೊದಲ ಪಯಣ ಮತ್ತು ಇದು ಮಕ್ಕಳಾಟವಲ್ಲ ಎಂದು ಹೇಳಬಲ್ಲೆ' ಎಂದಿದ್ದಾರೆ.

ನನ್ನ ತಂದೆ ಸಾಹಸ ನಿರ್ದೇಶಕರಾಗಿದ್ದರು ಮತ್ತು ಭಾರತೀಯ ಚಿತ್ರರಂಗದಲ್ಲಿ ನನ್ನ 30 ವರ್ಷಗಳ ವೃತ್ತಿಜೀವನದಲ್ಲಿ ಹಲವು ಅಪಾಯಕಾರಿ ಪಾತ್ರಗಳನ್ನು ಒಳಗೊಂಡಂತೆ ಹಲವಾರು ಪಾತ್ರಗಳನ್ನುನಿರ್ವಹಿಸಿದ್ದೇನೆ. ಅಂತಹದೇ ಅನುಭವ ಇದಾಗಿತ್ತು. ಇದು ಪ್ರಕೃತಿಯೊಂದಿಗೆ ಅಗತ್ಯ ಸಂಬಂಧ ಕಂಡುಕೊಳ್ಳಲು ನೆರವಾಯಿತು ಎಂದರು.

ಈ ಇನ್‌ ಟೂ ದಿ ವೈಲ್ಡ್‌ ಕಾರ್ಯಕ್ರಮ ಡಿಸ್ಕವರಿ+, ಡಿಸ್ಕವರಿ ಮತ್ತು ಡಿಸ್ಕವರಿ ಎಚ್‌ಡಿ ಮತ್ತು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಬಾಂಗ್ಲಾ, ಮಲಯಾಳಂ ಮತ್ತು ಕನ್ನಡ ಸೇರಿದಂತೆ 7ಭಾಷೆಗಳಲ್ಲಿ ಲಭ್ಯವಿರುತ್ತದೆ. ಈ ಸಂಚಿಕೆ ಅ 22ರಂದು ಪ್ರಸಾರವಾಗಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT