ಅಜಯ್ ದೇವಗನ್ ಮತ್ತು ಬೇರ್ ಗ್ರಿಲ್ಸ್ 
ಬಾಲಿವುಡ್

'ಇಂಟು ದ ವೈಲ್ಡ್‌ ವಿತ್‌' ಕಾರ್ಯಕ್ರಮಕ್ಕೆ ಹಿಂದೂ ಮಹಾಸಾಗರದಲ್ಲಿ ನಟ ಅಜಯ್‌ ದೇವಗನ್‌ ರೋಚಕ ಚಿತ್ರೀಕರಣ

ಭಾರತದ ಪ್ರಮುಖ ನೈಜ ಮನರಂಜನಾ ವಾಹಿನಿ ಡಿಸ್ಕವರಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಚಿತ್ರಿಸಿದ ರೋಚಕ ಸಾಹಸಮಯ ಸರಣಿ ಶೊ ಒಂದು ಮೂಡಿ ಬರಲಿದೆ.

ಮುಂಬೈ: ಭಾರತದ ಪ್ರಮುಖ ನೈಜ ಮನರಂಜನಾ ವಾಹಿನಿ ಡಿಸ್ಕವರಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಚಿತ್ರಿಸಿದ ರೋಚಕ ಸಾಹಸಮಯ ಸರಣಿ ಶೊ ಒಂದು ಮೂಡಿ ಬರಲಿದೆ.

ಬಾಲಿವುಡ್‌ ನಟ ಅಜಯ್‌ ದೇವಗನ್ ಹಾಗೂ ದಿ ವೈಲ್ಡ್‌ ವಿತ್‌ ಬಿಯರ್‌ ಗ್ರಿಲ್‌ ಕಾರ್ಯಕ್ರಮದ ಗ್ರಿಲ್‌ ಈ ಸರಣಿಯ ಮೊದಲ ಕಂತಿನಲ್ಲಿ ಕಾಣಿಸಿಕೊಂಡಿದ್ದು, ಅಪಾಯಕಾರಿ ಸಾಗರದಲ್ಲಿ ಪ್ರಯಾಣ ಮಾಡುವುದನ್ನು ಕಾಣಬಹುದಾಗಿದೆ.

ಅಪಾಯಕಾರಿ ಸಾಹಸಗಳ ನಡುವೆ ಅಜಯ್‌ದೇವನ್‌ ಅವರೊಂದಿಗೆ ಗ್ರಿಲ್, ಅವರಕುಟುಂಬ, ವೃತ್ತಿ ಮತ್ತು ಜೀವನದ ಕುರಿತು ಮುಕ್ತ ಸಂಭಾಷಣೆ ನಡೆಸಲಿದ್ದಾರೆ. ಹಿಂದೂ ಮಹಾಸಾಗರದ ಅತ್ಯಂತ ನಿರ್ಜನ ದ್ವೀಪಗಳಲ್ಲಿ ಬದುಕಲು, ಪ್ರಯತ್ನಿಸುವ ಈ ಸಾಹಸಮಯ ಸರಣಿ ಮೈನವಿರೇಳಿಸುವುದರಲ್ಲಿ ಅನುಮಾನವಿಲ್ಲ. ಈ ಚಿತ್ರೀಕರಣದ ಅನುಭವ ಹಂಚಿಕೊಮಡಿರುವ ಅಜಯ್‌ ದೇವಗನ್, "ಕಾಡಿನಲ್ಲಿ ನನ್ನ ಮೊದಲ ಪಯಣ ಮತ್ತು ಇದು ಮಕ್ಕಳಾಟವಲ್ಲ ಎಂದು ಹೇಳಬಲ್ಲೆ' ಎಂದಿದ್ದಾರೆ.

ನನ್ನ ತಂದೆ ಸಾಹಸ ನಿರ್ದೇಶಕರಾಗಿದ್ದರು ಮತ್ತು ಭಾರತೀಯ ಚಿತ್ರರಂಗದಲ್ಲಿ ನನ್ನ 30 ವರ್ಷಗಳ ವೃತ್ತಿಜೀವನದಲ್ಲಿ ಹಲವು ಅಪಾಯಕಾರಿ ಪಾತ್ರಗಳನ್ನು ಒಳಗೊಂಡಂತೆ ಹಲವಾರು ಪಾತ್ರಗಳನ್ನುನಿರ್ವಹಿಸಿದ್ದೇನೆ. ಅಂತಹದೇ ಅನುಭವ ಇದಾಗಿತ್ತು. ಇದು ಪ್ರಕೃತಿಯೊಂದಿಗೆ ಅಗತ್ಯ ಸಂಬಂಧ ಕಂಡುಕೊಳ್ಳಲು ನೆರವಾಯಿತು ಎಂದರು.

ಈ ಇನ್‌ ಟೂ ದಿ ವೈಲ್ಡ್‌ ಕಾರ್ಯಕ್ರಮ ಡಿಸ್ಕವರಿ+, ಡಿಸ್ಕವರಿ ಮತ್ತು ಡಿಸ್ಕವರಿ ಎಚ್‌ಡಿ ಮತ್ತು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಬಾಂಗ್ಲಾ, ಮಲಯಾಳಂ ಮತ್ತು ಕನ್ನಡ ಸೇರಿದಂತೆ 7ಭಾಷೆಗಳಲ್ಲಿ ಲಭ್ಯವಿರುತ್ತದೆ. ಈ ಸಂಚಿಕೆ ಅ 22ರಂದು ಪ್ರಸಾರವಾಗಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

SCROLL FOR NEXT