ಅಜಯ್ ದೇವಗನ್ ಮತ್ತು ಬೇರ್ ಗ್ರಿಲ್ಸ್ 
ಬಾಲಿವುಡ್

'ಇಂಟು ದ ವೈಲ್ಡ್‌ ವಿತ್‌' ಕಾರ್ಯಕ್ರಮಕ್ಕೆ ಹಿಂದೂ ಮಹಾಸಾಗರದಲ್ಲಿ ನಟ ಅಜಯ್‌ ದೇವಗನ್‌ ರೋಚಕ ಚಿತ್ರೀಕರಣ

ಭಾರತದ ಪ್ರಮುಖ ನೈಜ ಮನರಂಜನಾ ವಾಹಿನಿ ಡಿಸ್ಕವರಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಚಿತ್ರಿಸಿದ ರೋಚಕ ಸಾಹಸಮಯ ಸರಣಿ ಶೊ ಒಂದು ಮೂಡಿ ಬರಲಿದೆ.

ಮುಂಬೈ: ಭಾರತದ ಪ್ರಮುಖ ನೈಜ ಮನರಂಜನಾ ವಾಹಿನಿ ಡಿಸ್ಕವರಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಚಿತ್ರಿಸಿದ ರೋಚಕ ಸಾಹಸಮಯ ಸರಣಿ ಶೊ ಒಂದು ಮೂಡಿ ಬರಲಿದೆ.

ಬಾಲಿವುಡ್‌ ನಟ ಅಜಯ್‌ ದೇವಗನ್ ಹಾಗೂ ದಿ ವೈಲ್ಡ್‌ ವಿತ್‌ ಬಿಯರ್‌ ಗ್ರಿಲ್‌ ಕಾರ್ಯಕ್ರಮದ ಗ್ರಿಲ್‌ ಈ ಸರಣಿಯ ಮೊದಲ ಕಂತಿನಲ್ಲಿ ಕಾಣಿಸಿಕೊಂಡಿದ್ದು, ಅಪಾಯಕಾರಿ ಸಾಗರದಲ್ಲಿ ಪ್ರಯಾಣ ಮಾಡುವುದನ್ನು ಕಾಣಬಹುದಾಗಿದೆ.

ಅಪಾಯಕಾರಿ ಸಾಹಸಗಳ ನಡುವೆ ಅಜಯ್‌ದೇವನ್‌ ಅವರೊಂದಿಗೆ ಗ್ರಿಲ್, ಅವರಕುಟುಂಬ, ವೃತ್ತಿ ಮತ್ತು ಜೀವನದ ಕುರಿತು ಮುಕ್ತ ಸಂಭಾಷಣೆ ನಡೆಸಲಿದ್ದಾರೆ. ಹಿಂದೂ ಮಹಾಸಾಗರದ ಅತ್ಯಂತ ನಿರ್ಜನ ದ್ವೀಪಗಳಲ್ಲಿ ಬದುಕಲು, ಪ್ರಯತ್ನಿಸುವ ಈ ಸಾಹಸಮಯ ಸರಣಿ ಮೈನವಿರೇಳಿಸುವುದರಲ್ಲಿ ಅನುಮಾನವಿಲ್ಲ. ಈ ಚಿತ್ರೀಕರಣದ ಅನುಭವ ಹಂಚಿಕೊಮಡಿರುವ ಅಜಯ್‌ ದೇವಗನ್, "ಕಾಡಿನಲ್ಲಿ ನನ್ನ ಮೊದಲ ಪಯಣ ಮತ್ತು ಇದು ಮಕ್ಕಳಾಟವಲ್ಲ ಎಂದು ಹೇಳಬಲ್ಲೆ' ಎಂದಿದ್ದಾರೆ.

ನನ್ನ ತಂದೆ ಸಾಹಸ ನಿರ್ದೇಶಕರಾಗಿದ್ದರು ಮತ್ತು ಭಾರತೀಯ ಚಿತ್ರರಂಗದಲ್ಲಿ ನನ್ನ 30 ವರ್ಷಗಳ ವೃತ್ತಿಜೀವನದಲ್ಲಿ ಹಲವು ಅಪಾಯಕಾರಿ ಪಾತ್ರಗಳನ್ನು ಒಳಗೊಂಡಂತೆ ಹಲವಾರು ಪಾತ್ರಗಳನ್ನುನಿರ್ವಹಿಸಿದ್ದೇನೆ. ಅಂತಹದೇ ಅನುಭವ ಇದಾಗಿತ್ತು. ಇದು ಪ್ರಕೃತಿಯೊಂದಿಗೆ ಅಗತ್ಯ ಸಂಬಂಧ ಕಂಡುಕೊಳ್ಳಲು ನೆರವಾಯಿತು ಎಂದರು.

ಈ ಇನ್‌ ಟೂ ದಿ ವೈಲ್ಡ್‌ ಕಾರ್ಯಕ್ರಮ ಡಿಸ್ಕವರಿ+, ಡಿಸ್ಕವರಿ ಮತ್ತು ಡಿಸ್ಕವರಿ ಎಚ್‌ಡಿ ಮತ್ತು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಬಾಂಗ್ಲಾ, ಮಲಯಾಳಂ ಮತ್ತು ಕನ್ನಡ ಸೇರಿದಂತೆ 7ಭಾಷೆಗಳಲ್ಲಿ ಲಭ್ಯವಿರುತ್ತದೆ. ಈ ಸಂಚಿಕೆ ಅ 22ರಂದು ಪ್ರಸಾರವಾಗಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಇನ್ನೂ ನನಸಾಗಿಲ್ಲ ದಶಕಗಳ ಕನಸು: ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ, ಯೋಜನೆಗೆ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

SCROLL FOR NEXT