ಅಮಿತಾಬ್ ಬಚ್ಚನ್ 
ಬಾಲಿವುಡ್

ಶಿಶುವಿಗೆ 16 ಕೋಟಿ ರೂ. ಬೆಲೆಯ ಇಂಜೆಕ್ಷನ್: ನೆರವು ನೀಡಲು ಬಿಗ್ ಬಿ ಅಮಿತಾಬ್ ಬಚ್ಚನ್ ಮುಂದು

ಬಾಲಿವುಡ್ ಸೂಪರ್‌ ಸ್ಟಾರ್‌, ಬಿಗ್‌ ಬಿ ಅಮಿತಾಬ್ ಬಚ್ಚನ್ ಪುಟ್ಟ ಮಗುವಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ. ಕಿರುತೆರೆಯಲ್ಲಿ "ಕೌನ್‌ ಬನೇಗಾ ಕರೋಡ್‌ ಪತಿ" ಕಾರ್ಯಕ್ರಮದ ನಿರೂಪಕರಾಗಿರುವ ಅವರು ಪ್ರಸ್ತುತ 13 ನೇ ಸೀಸನ್‌ ಕೆಬಿಸಿ ನಡೆಸಿಕೊಡುತ್ತಿದ್ದಾರೆ. 

ಮುಂಬೈ: ಬಾಲಿವುಡ್ ಸೂಪರ್‌ ಸ್ಟಾರ್‌, ಬಿಗ್‌ ಬಿ ಅಮಿತಾಬ್ ಬಚ್ಚನ್ ಪುಟ್ಟ ಮಗುವಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ. ಕಿರುತೆರೆಯಲ್ಲಿ "ಕೌನ್‌ ಬನೇಗಾ ಕರೋಡ್‌ ಪತಿ" ಕಾರ್ಯಕ್ರಮದ ನಿರೂಪಕರಾಗಿರುವ ಅವರು ಪ್ರಸ್ತುತ 13 ನೇ ಸೀಸನ್‌ ಕೆಬಿಸಿ ನಡೆಸಿಕೊಡುತ್ತಿದ್ದಾರೆ. 

ಈ ಕಾರ್ಯಕ್ರಮಕ್ಕೆ ಯಾರೇ ಬಂದರೂ ಗೆದ್ದ ಬಹುಮಾನ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸುತ್ತಾರೆ. ಹೊಸದಾಗಿ ಈ ಕಾರ್ಯಕ್ರಮಕ್ಕೆ ಬಾಲಿವುಡ್‌ ನೃತ್ಯ ನಿರ್ದೇಶಕಿ ಫರಾಖಾನ್, ನಾಯಕಿ ದೀಪಿಕಾ ಪಡುಕೋಣೆ ಅತಿಥಿಗಳಾಗಿದ್ದರು. ಈ ಸಂಚಿಕೆಗೆ ಸಂಬಂಧಿಸಿದ ಹೊಸ ಪ್ರೋಮೋವನ್ನು ಸೋನಿ ಟಿವಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. 

ಎಲ್ಲರಂತೆ, ತಾವು ಗೆದ್ದ ಬಹುಮಾನದ ಹಣವನ್ನು ಬೆನ್ನು ಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿರುವ 17 ತಿಂಗಳ ಪುಟ್ಟ ಮಗು ಅಯಾನ್ಶ್ ಸಹಾಯಾರ್ಥ ನೀಡಲಾಗುವುದು ಎಂದು ಫರಾಖಾನ್‌ ಹೇಳಿದರು. ಆ ಮಗುವಿಗೆ ಎರಡನೇ ವರ್ಷಕ್ಕೆ ನೀಡಬೇಕಿರುವ ಇಂಜೆಕ್ಷನ್ ಖರೀದಿಗೆ 16 ಕೋಟಿ ರೂ.ಬೇಕಾಗಿದೆ. ಹಾಗಾಗಿ ಚಿಕಿತ್ಸೆಗೆ ಸಹಾಯ ಮಾಡಲು ಬಯಸುತ್ತೇನೆ ಎಂದು ಹೇಳಿ ಫರಾ ಖಾನ್‌ ಭಾವುಕರಾದರು.

ಅಮಿತಾಬ್ ಬಚ್ಚನ್ ಮಾತನಾಡಿ, ವಿಚಿತ್ರವಾದ ಕಾಯಿಲೆಯಿಂದ ಬಳಲುತ್ತಿರುವ ಮಗು ಆಯಾನ್ಶ್‌ಗಾಗಿ ಫರಾ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ನನಗೆ ಇಲ್ಲಿ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಆದರೆ, ಆ ಮಗುವಿಗೆ ನಾನು ಕೂಡ ಆರ್ಥಿಕ ಸಹಾಯ ಮಾಡುತ್ತೇನೆ ಎಂದರು. ಆದರೆ ಎಷ್ಟು ಹಣ ನೀಡಲಾಗುವುದು ಎಂಬುದನ್ನು ಮಾತ್ರ ಬಿಗ್‌ ಬಿ ಹೇಳಲಿಲ್ಲ. 

ನಟಿ ದೀಪಿಕಾ ಪಡುಕೋಣೆ ತಮ್ಮ ಫೌಂಡೇಶನ್ 'ಲೀವ್‌ ಲವ್ ಲಾಫ್' ಬಗ್ಗೆ ಮಾತನಾಡಿದರು. 2014 ರಲ್ಲಿ ತಾನು ತುಂಬಾ ಖಿನ್ನತೆಗೆ ಒಳಗಾಗಿದ್ದೆ ಆ ಸಮಯದಲ್ಲಿ ಸಾಯಬೇಕೆಂದು ಎಂದು ಭಾವಿಸಿದ್ದೇ ಎಂದು ಹೇಳುವ ಮೂಲಕ ಭಾವೋದ್ವೇಗಕ್ಕೊಳಗಾದರು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ಈ ಪ್ರತಿಷ್ಠಾನ ಸ್ಥಾಪಿಸಲಾಗಿದೆ ಎಂದು ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT