ಉರ್ಫಿ ಜಾವೇದ್ 
ಬಾಲಿವುಡ್

ಭಾರತದಲ್ಲಿ ಮಾಡಿದ್ದನ್ನು ದುಬೈನಲ್ಲಿ ಮಾಡಲು ಹೋಗಿ ಬಂಧನಕ್ಕೀಡಾದ ನಟಿ ಉರ್ಫಿ ಜಾವೇದ್!

ಉರ್ಫಿ ಜಾವೇದ್ ಯಾವಾಗಲೂ ಬಣ್ಣಬಣ್ಣದ ಬಿಕಿಟಿ ತೊಟ್ಟು ಬೀದಿಗಿಳಿಯುತ್ತಾರೆ. ಇದಕ್ಕಾಗಿ ಉರ್ಫಿ ಹಲವು ಬಾರಿ ಟ್ರೋಲ್‌ಗೆ ಒಳಗಾಗಿದ್ದರು. ಆದರೆ, ಉರ್ಫಿ ಇದಕ್ಕೆ ತಲೆಕೆಡಿಸಿಕೊಂಡಿಲ್ಲ. ಆದರೆ ಉರ್ಫಿಯ ಈ ನಡೆ ದುಬೈನಲ್ಲಿ ನಡೆಯಲಿಲ್ಲ. ಉರ್ಫಿ ಮತ್ತೊಮ್ಮೆ ಸಾರ್ವಜನಿಕವಾಗಿ ಬಿಕಿನಿ ತೊಟ್ಟು ವಿಡಿಯೋ ಮಾಡಿದ್ದರಿಂದ ಆಕೆಯನ್ನು ಬಂಧಿಸಲಾಗಿದೆ.

ಉರ್ಫಿ ಜಾವೇದ್ ಯಾವಾಗಲೂ ಬಣ್ಣಬಣ್ಣದ ಬಿಕಿಟಿ ತೊಟ್ಟು ಬೀದಿಗಿಳಿಯುತ್ತಾರೆ. ಇದಕ್ಕಾಗಿ ಉರ್ಫಿ ಹಲವು ಬಾರಿ ಟ್ರೋಲ್‌ಗೆ ಒಳಗಾಗಿದ್ದರು. ಆದರೆ, ಉರ್ಫಿ ಇದಕ್ಕೆ ತಲೆಕೆಡಿಸಿಕೊಂಡಿಲ್ಲ. ಆದರೆ ಉರ್ಫಿಯ ಈ ನಡೆ ದುಬೈನಲ್ಲಿ ನಡೆಯಲಿಲ್ಲ. ಉರ್ಫಿ ಮತ್ತೊಮ್ಮೆ ಸಾರ್ವಜನಿಕವಾಗಿ ಬಿಕಿನಿ ತೊಟ್ಟು ವಿಡಿಯೋ ಮಾಡಿದ್ದರಿಂದ ಆಕೆಯನ್ನು ಬಂಧಿಸಲಾಗಿದೆ. 

ಉರ್ಫಿ ಕಳೆದ ಹಲವು ದಿನಗಳಿಂದ ದುಬೈನಲ್ಲಿದ್ದಾರೆ. ತನ್ನ ಮುಂದಿನ ಪ್ರಾಜೆಕ್ಟ್‌ಗಳ ಶೂಟಿಂಗ್‌ಗೆ ಸಂಬಂಧಿಸಿದಂತೆ ಅಲ್ಲಿಗೆ ಹೋಗಿದ್ದರು. ಅಲ್ಲಿಯೂ ಉರ್ಫಿ ತನ್ನ ಚೇಷ್ಟೆಗಳಿಂದ ಹಿಂದೆ ಸರಿಯಲಿಲ್ಲ. ದುಬೈನಲ್ಲಿ ಬಹಿರಂಗವಾಗಿ ಬಿಕಿನಿ ತೊಟ್ಟಿದ್ದ ನಟಿ ದುಬೈ ಸರ್ಕಾರದ ಟೀಕೆಗೆ ಗುರಿಯಾಗಿದ್ದಾರೆ. ಉರ್ಫಿ ತನ್ನ ಇನ್‌ಸ್ಟಾಗ್ರಾಮ್‌ಗಾಗಿ ದುಬೈನಲ್ಲಿ ಸ್ವಯಂ ನಿರ್ಮಿತ ಉಡುಪಿನಲ್ಲಿ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ದುಬೈನ ಜನರು ಉರ್ಫಿಯ ಉಡುಪನ್ನು ಸಾಕಷ್ಟು ವೈರಲ್ ಮಾಡಿದ್ದರು.

ಉರ್ಫಿ ತನ್ನ ವೀಡಿಯೊವನ್ನು ಸಾರ್ವಜನಿಕ ಸ್ಥಳದಲ್ಲಿ ಚಿತ್ರೀಕರಿಸಿದ್ದಳು. ದುಬೈನ ನಿಯಮಗಳ ಪ್ರಕಾರ, ಸಾರ್ವಜನಿಕ ಸ್ಥಳದಲ್ಲಿ ಬಹಿರಂಗ ಬಟ್ಟೆಗಳನ್ನು ಧರಿಸಿ ಚಿತ್ರೀಕರಣ ಮಾಡುವಂತಿಲ್ಲ. ಇದೀಗ ಪೊಲೀಸರು ಈ ಬಗ್ಗೆ ಉರ್ಫಿಯನ್ನು ಪ್ರಶ್ನಿಸಿದ್ದಾರೆ. ಭಾರತಕ್ಕೆ ಬರಲು ಉರ್ಫಿಯ ಟಿಕೆಟ್ ಅನ್ನು ದುಬೈ ಪೊಲೀಸರು ಮುಂದೂಡಬಹುದು ಎಂದು ಹೇಳಲಾಗುತ್ತಿದೆ.

ಹಿಂದಿನ ದಿನವೂ ಉರ್ಫಿ ಜಾವೇದ್ ಅವರ ಆರೋಗ್ಯ ಹದಗೆಟ್ಟಿತ್ತು. ಗಂಟಲಿನ ಸೋಂಕಿನಿಂದ ಉರ್ಫಿ ಆಸ್ಪತ್ರೆಗೆ ಹೋಗಬೇಕಾಯಿತು. ಬಿಕಿನಿ ಬಟ್ಟೆಗಳನ್ನು ಧರಿಸಿದ್ದ ಉರ್ಫಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬಂದಿವೆ. ಆದರೆ ಇನ್ನೂ ಅವಳು ಬಹಿರಂಗವಾಗಿ ಮತ್ತು ಧೈರ್ಯದಿಂದ ಬದುಕುತ್ತಿದ್ದಾಳೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT