ಹೇಮಾ ಮಾಲಿನಿ ಮತ್ತು ಧರ್ಮೇಂದ್ರ 
ಬಾಲಿವುಡ್

ಧರ್ಮೇಂದ್ರ ಜೊತೆ ವಾಸಿಸುತ್ತಿಲ್ಲ ನಟಿ ಹೇಮಾಮಾಲಿನಿ: ವೈವಾಹಿಕ ಜೀವನದ ಬಗ್ಗೆ 'ಡ್ರೀಮ್ ಗರ್ಲ್' ಹೇಳಿದ್ದೇನು?

ಬಾಲಿವುಡ್‌ನ ಡ್ರೀಮ್‌ ಗರ್ಲ್‌ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಒಂದಲ್ಲ ಒಂದು ಕಾರಣಕ್ಕೆ ಜನಮನದಲ್ಲಿ ಉಳಿದಿದ್ದಾರೆ. ಹೇಮಾ ಮತ್ತು ಧರ್ಮೇಂದ್ರ ಅವರ ಪ್ರೇಮಕಥೆಯು ಬಾಲಿವುಡ್‌ನಾದ್ಯಂತ ಚರ್ಚೆಯ ವಿಷಯವಾಗಿ ಉಳಿದಿದೆ

ಬಾಲಿವುಡ್‌ನ ಡ್ರೀಮ್‌ ಗರ್ಲ್‌ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಒಂದಲ್ಲ ಒಂದು ಕಾರಣಕ್ಕೆ ಜನಮನದಲ್ಲಿ ಉಳಿದಿದ್ದಾರೆ. ಹೇಮಾ ಮತ್ತು ಧರ್ಮೇಂದ್ರ ಅವರ ಪ್ರೇಮಕಥೆಯು ಬಾಲಿವುಡ್‌ನಾದ್ಯಂತ ಚರ್ಚೆಯ ವಿಷಯವಾಗಿ ಉಳಿದಿದೆ

ನಟಿ ಹೇಮಾ ಮಾಲಿನಿ, ಧರ್ಮೇಂದ್ರ ಮದುವೆ ವಿಷಯ ಅನೇಕರಿಗೆ ಗೊತ್ತೇ ಇದೆ. ಧರ್ಮೇಂದ್ರ ಜೊತೆ ಹೇಮಾ ಮಾಲಿನಿ ಒಂದೇ ಸೂರಿನಡಿ ಬದುಕುತ್ತಿಲ್ಲ. ಈಗ ಈ ಬಗ್ಗೆ ಅವರು ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ.

ಧರ್ಮೇಂದ್ರ ಅವರು ನನ್ನಿಂದ ದೂರವಾಗಿರುವ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ. ನಾನು ನನ್ನೊಂದಿಗೆ ಸಂತೋಷವಾಗಿದ್ದೇನೆ. ನನಗೆ ನನ್ನ ಇಬ್ಬರು ಮಕ್ಕಳಿದ್ದಾರೆ ಮತ್ತು ನಾನು ಅವರನ್ನು ಚೆನ್ನಾಗಿ ಬೆಳೆಸಿದ್ದೇನೆ ಎಂದಿದ್ದಾರೆ. ಧರ್ಮೇಂದ್ರ ತಮ್ಮ ಮೊದಲ ಪತ್ನಿ ಜೊತೆ ವಾಸಿಸುತ್ತಿದ್ದಾರೆ.

ಪ್ರಕಾಶ್ ಅವರ ಜೊತೆ ಮದುವೆಯಾಗಿ 4 ಮಕ್ಕಳನ್ನು ( ಸನ್ನಿ ಡಿಯೋಲ್, ಬಾಬಿ ಡಿಯೋಲ್, ಅಜೀತಾ, ವಿಜೇತಾ ) ಪಡೆದಿದ್ದ ಧರ್ಮೇಂದ್ರ ಜೊತೆ ಹೇಮಾ ಮಾಲಿನಿ 1980ರಲ್ಲಿ ಮದುವೆಯಾಗಿದ್ದರು. ಮೊದಲ ಪತ್ನಿ ಪ್ರಕಾಶ್‌ಗೆ ವಿಚ್ಛೇದನ ಕೊಡದೆ ಧರ್ಮೇಂದ್ರ ಅವರು ಹೇಮಾ ಮಾಲಿನಿ ಕೈಹಿಡಿದಿದ್ದರು.

ಯಾರಿಗೂ ಇಂತಹ ಜೀವನ ಬೇಡ. ಪ್ರತಿಯೊಬ್ಬರೂ ತಮ್ಮ ಕುಟುಂಬ ಮತ್ತು ಮಕ್ಕಳೊಂದಿಗೆ ಇರಲು ಇಷ್ಟಪಡುತ್ತಾರೆ. ತನ್ನ ಕುಟುಂಬದಿಂದ ದೂರ ಉಳಿಯಲು ಯಾರು ಸಂತೋಷಪಡುತ್ತಾರೆ. ಪ್ರತಿ ಮಹಿಳೆ ಪತಿ, ಮಕ್ಕಳು ಮತ್ತು ಸಾಮಾನ್ಯ ಜೀವನವನ್ನು ಬಯಸುತ್ತಾರೆ. ಆದರೆ ಕೆಲವು ಕಾರಣಗಳಿಂದ ನಾನು ಈ ವಿಷಯಗಳನ್ನು ಬೇರ್ಪಡಿಸಿದೆ. ಈ ಬಗ್ಗೆ ಅವರಿಗೆ ಬೇಸರವೇನೂ ಇಲ್ಲ. ನನ್ನ ಮಕ್ಕಳಿಬ್ಬರನ್ನೂ ಸಾಕಿ ಬೆಳೆಸಿದ ಖುಷಿ ನನಗಿದೆ. ಸಹಜವಾಗಿ, ಧರ್ಮೇಂದ್ರ ಅವರು ಎಲ್ಲೆಡೆ ನನ್ನೊಂದಿಗೆ ಇದ್ದರು. ಮಕ್ಕಳ ಮದುವೆಯ ಚಿಂತೆಯಲ್ಲಿದ್ದವರಲ್ಲಿ ಅವರೂ ಒಬ್ಬರು. ಎಲ್ಲವೂ ಆಗುತ್ತದೆ ಎಂದು ನಾನು ಯಾವಾಗಲೂ ಅವನಿಗೆ ಹೇಳುತ್ತಿದ್ದೆ ಎಂದಿದ್ದಾರೆ.

"ನನಗೆ ಈ ಬಗ್ಗೆ ಬೇಜಾರಿಲ್ಲ. ನಾನು ಖುಷಿಯಾಗಿದ್ದೇನೆ. ನನಗೆ ಇಬ್ಬರು ಮಕ್ಕಳಿವೆ, ಅವರನ್ನು ಚೆನ್ನಾಗಿ ಬೆಳೆಸಿದ್ದೇನೆ. ಆ ಸಮಯದಲ್ಲಿ ಧರ್ಮೇಂದ್ರ ಇದ್ದರು, ಯಾವಾಗಲೂ ಜೊತೆಯಾಗಿಯೇ ಇರುತ್ತಾರೆ. ಸರಿಯಾದ ಸಮಯಕ್ಕೆ ಮಕ್ಕಳಿಗೆ ಮದುವೆ ಮಾಡಬೇಕು ಅಂತ ಅವರು ಹೇಳುತ್ತಿದ್ದರು. ಆಗ ನಾನು ಆಗತ್ತೆ ಎನ್ನುತ್ತಿದ್ದೆ. ಸರಿಯಾದ ಸಮಯಕ್ಕೆ ಮಕ್ಕಳನ್ನು ಮದುವೆಯಾಗುವ ಹುಡುಗ ದೇವರ ಆಶೀರ್ವಾದದೊಂದಿಗೆ ನಮ್ಮ ಕಣ್ಣು ಮುಂದೆ ಬರುತ್ತಾನೆ ಅಂತ ಹೇಳಿದ್ದರು" ಎಂದಿದ್ದಾರೆ ಹೇಮಾ ಮಾಲಿನಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಬುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT