ತಾರೆ ಜಮೀನ್ ಪರ್ ಚಿತ್ರದ ದೃಶ್ಯ 
ಬಾಲಿವುಡ್

ಅಮೀರ್ ಖಾನ್ ಮುಂದಿನ ಚಿತ್ರದ ಹೆಸರು 'ಸಿತಾರೆ ಜಮೀನ್ ಪರ್'!

ಅಮೀರ್ ಖಾನ್ ಅಭಿನಯದ 2007 ರಲ್ಲಿ ಬಿಡುಗಡೆಯಾಗಿ ಯಶಸ್ಸು ಪಡೆದ ಚಿತ್ರ 'ತಾರೆ ಜಮೀನ್ ಪರ್', ತಮ್ಮ ಭಾವನಾತ್ಮಕ ನಟನೆ ಮತ್ತು ಚೊಚ್ಚಲ ನಿರ್ದೇಶನದ ಚಿತ್ರವದು. ಅದು ಚಿತ್ರಪ್ರೇಮಿಗಳಲ್ಲಿ ಸಾಕಷ್ಟು ಪ್ರಭಾವ ಬೀರಿತ್ತು, ಈಗಲೂ ಆ ಚಿತ್ರವನ್ನು ನೋಡುವವರಿದ್ದಾರೆ.

ಅಮೀರ್ ಖಾನ್ ಅಭಿನಯದ 2007 ರಲ್ಲಿ ಬಿಡುಗಡೆಯಾಗಿ ಯಶಸ್ಸು ಪಡೆದ ಚಿತ್ರ 'ತಾರೆ ಜಮೀನ್ ಪರ್', ಭಾವನಾತ್ಮಕ ನಟನೆ ಮತ್ತು ಅಮೀರ್ ಖಾನ್ ಚೊಚ್ಚಲ ನಿರ್ದೇಶನದ ಚಿತ್ರವದು. ಅದು ಚಿತ್ರಪ್ರೇಮಿಗಳಲ್ಲಿ ಸಾಕಷ್ಟು ಪ್ರಭಾವ ಬೀರಿತ್ತು, ಈಗಲೂ ಆ ಚಿತ್ರವನ್ನು ನೋಡುವವರಿದ್ದಾರೆ.

ಇತ್ತೀಚೆಗೆ ಅಮೀರ್ ಖಾನ್ ನಟನೆ, ನಿರ್ದೇಶನಕ್ಕೆ ಬ್ರೇಕ್ ಹಾಕಿದ್ದರು. ಇತ್ತೀಚಿನ ವರ್ಷಗಳಲ್ಲಿ ಆಮಿರ್ ಖಾನ್​ ಅವರಿಗೆ ನಿರೀಕ್ಷಿತ ಪ್ರಮಾಣದ ಗೆಲುವು ಸಿಕ್ಕಿಲ್ಲ. ‘ಲಾಲ್​ ಸಿಂಗ್ ಛಡ್ಡಾ’ ಸಿನಿಮಾ ಸೋತಿತು.

ಇದೀಗ 2023ರ ಕೊನೆಯ ಹೊತ್ತಿಗೆ ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದಾರೆ. ಅದಕ್ಕೆ ಅವರು ಕೊಟ್ಟಿರುವ ಶೀರ್ಷಿಕೆ "ಸಿತಾರೆ ಜಮೀನ್ ಪರ್" ಎಂದು. ಚಿತ್ರ "ತಾರೆ ಜಮೀನ್ ಪರ್" ಅನ್ವೇಷಿಸಿದ ವಿಷಯದ ಮೇಲೆ ಇರುತ್ತದೆ.

ನಾನು ಚಿತ್ರದ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ. ಚಿತ್ರದ ಶೀರ್ಷಿಕೆ 'ಸಿತಾರೆ ಜಮೀನ್ ಪರ್ ನಿಮಗೆ ನನ್ನ 'ತಾರೆ ಜಮೀನ್ ಪರ್' ಚಿತ್ರ ನೆನಪಿರಬೇಕು. ಈ ಚಿತ್ರದ ಹೆಸರು 'ಸಿತಾರೆ ಜಮೀನ್ ಪರ್' ಏಕೆಂದರೆ ನಾವು ಅದೇ ವಿಷಯದೊಂದಿಗೆ ಹತ್ತು ಹೆಜ್ಜೆ ಮುಂದೆ ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.

"ಸಿತಾರೆ ಜಮೀನ್ ಪರ್" ಜನರನ್ನು ನಗಿಸುತ್ತದೆ ಮತ್ತು ಅಳುವಂತೆ ಮಾಡುತ್ತದೆ, ವಿಷಯ ಒಂದೇ, ಅದಕ್ಕಾಗಿಯೇ ನಾವು ಈ ಹೆಸರನ್ನು ಚಿಂತನಶೀಲವಾಗಿ ಆರಿಸಿದ್ದೇವೆ. ನಾವೆಲ್ಲರೂ ನ್ಯೂನತೆಗಳನ್ನು ಹೊಂದಿದ್ದೇವೆ ಆದರೆ ವಿಶೇಷವಾದದ್ದನ್ನು ಹೊಂದಿದ್ದೇವೆ, ಆದ್ದರಿಂದ ನಾವು ಈ ವಿಷಯವನ್ನು ಮುಂದಕ್ಕೆ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

37 ವರ್ಷ ನಿಷೇಧದ ಬಳಿಕ ಮತ್ತೆ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ; ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಮೃತದೇಹಗಳ ಮೇಲೆ ರಾಜಕೀಯ ಮಾಡಬೇಡಿ: ರಾಹುಲ್ ಗಾಂಧಿ ವಿರುದ್ಧ ಭಗವಂತ್ ಮಾನ್ ಕಿಡಿ

ಭವಿಷ್ಯದ ಬಾಹ್ಯಾಕಾಶ ಯಾನಕ್ಕೆ ಅಂತರರಾಷ್ಟ್ರೀಯ ಸಹಕಾರ ಮುಖ್ಯ: ಸುನಿತಾ ವಿಲಿಯಮ್ಸ್

KGF ಕಾಲೇಜಿನಲ್ಲಿ ಕುರ್ಚಿ ವಿಚಾರಕ್ಕೆ ವಾಗ್ವಾದ: ತರಗತಿಯಲ್ಲಿ ಯುವಕನ ಥಳಿತಕ್ಕೆ ಪ್ರಜ್ಞೆತಪ್ಪಿ ಬಿದ್ದ ವಿದ್ಯಾರ್ಥಿನಿ, Video

ದುರ್ಗಾಪೂಜೆ ವೇಳೆ 'ಬಂಗಾಳಿಗಳು ಮೀನು, ಮಟನ್ ತಿನ್ನುತ್ತಾರೆ': ಬಾಗೇಶ್ವರ ಬಾಬಾಗೆ ಟಕ್ಕರ್ ಕೊಟ್ಟ ಬಿಜೆಪಿ ನಾಯಕರು!