ರಿಯಾ ಚಕ್ರವರ್ತಿ-ಅಮಿರ್ ಖಾನ್ 
ಬಾಲಿವುಡ್

'ಒಂಟಿಯಾಗಿರಲು ಆಗುತ್ತಿಲ್ಲ': 59ನೇ ವರ್ಷಕ್ಕೆ 3ನೇ ಮದುವೆ?, ನಟಿ ರಿಯಾ ಚಕ್ರವರ್ತಿಗೆ ಅಮಿರ್ ಖಾನ್ ಹೇಳಿದ್ದೇನು?

ರಿಯಾ ಚಕ್ರವರ್ತಿ ಅವರ ಪಾಡ್‌ಕಾಸ್ಟ್ ಅಧ್ಯಾಯ 2ರಲ್ಲಿ ಅಮೀರ್ ಖಾನ್ ಗೆ ಮದುವೆಯ ಬಗ್ಗೆ ಅವರ ವೈಯಕ್ತಿಕ ಅಭಿಪ್ರಾಯವನ್ನು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅಮಿರ್, 'ನನ್ನ ಎರಡೂ ಮದುವೆ ವಿಫಲವಾಗಿದೆ. ಹೀಗಾಗಿ ನನ್ನಿಂದ ಯಾವುದೇ ಸಲಹೆ ತೆಗೆದುಕೊಳ್ಳಬೇಡಿ.

ನವದೆಹಲಿ: ಬಾಲಿವುಡ್ ನಟ ಅಮೀರ್ ಖಾನ್ ಯಾವಾಗಲೂ ತಮ್ಮ ವೈಯಕ್ತಿಕ ಜೀವನವನ್ನು ಜನಮನದಿಂದ ದೂರವಿಟ್ಟಿದ್ದರು. ಆದರೆ, ಈಗ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪತ್ನಿಯರಿಂದ ದೂರವಾಗಿರುವ ಅಮಿರ್ ತಮ್ಮ ಮಕ್ಕಳಿಗೆ ಹತ್ತಿರವಾಗಿದ್ದಾರೆ. ವಿಚ್ಛೇದನದ ಹೊರತಾಗಿಯೂ, ಅವರ ಎರಡೂ ಮಾಜಿ ಪತ್ನಿಯರು ಇನ್ನೂ ಕುಟುಂಬದ ಭಾಗವಾಗಿ ಉಳಿದಿದ್ದಾರೆ. ಅಮಿರ್ ಖಾನ್ ರೀನಾ ದತ್ತಾ ಮತ್ತು ಕಿರಣ್ ರಾವ್ ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಇದರೊಂದಿಗೆ ಅಮೀರ್ ಖಾನ್ ತಮ್ಮ ಮೂರನೇ ಮದುವೆಯ ಬಗ್ಗೆ ಮಾತನಾಡಿದ್ದಾರೆ.

ರಿಯಾ ಚಕ್ರವರ್ತಿ ಅವರ ಪಾಡ್‌ಕಾಸ್ಟ್ ಅಧ್ಯಾಯ 2ರಲ್ಲಿ ಅಮೀರ್ ಖಾನ್ ಗೆ ಮದುವೆಯ ಬಗ್ಗೆ ಅವರ ವೈಯಕ್ತಿಕ ಅಭಿಪ್ರಾಯವನ್ನು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅಮಿರ್, 'ನನ್ನ ಎರಡೂ ಮದುವೆ ವಿಫಲವಾಗಿದೆ. ಹೀಗಾಗಿ ನನ್ನಿಂದ ಯಾವುದೇ ಸಲಹೆ ತೆಗೆದುಕೊಳ್ಳಬೇಡಿ. ಆದರೆ ನಾನು ಒಬ್ಬಂಟಿಯಾಗಿರಲು ಇಷ್ಟಪಡುವುದಿಲ್ಲ. ನನಗೆ ಸಂಗಾತಿ ಬೇಕು. ನಾನು ಒಂಟಿ ವ್ಯಕ್ತಿಯಲ್ಲ. ನಾನು ರೀನಾ ಮತ್ತು ಕಿರಣ್ ಅವರಿಗೆ ತುಂಬಾ ಹತ್ತಿರವಾಗಿದ್ದೇನೆ. ನಾವು ಕುಟುಂಬದವರಂತೆ. ಜೀವನದಲ್ಲಿ ಯಾವುದೇ ಭರವಸೆ ಇಲ್ಲ. ನಾನು ನನ್ನ ಸ್ವಂತ ಜೀವನವನ್ನು ನಂಬುವುದಿಲ್ಲ, ಆಗಿದ್ದಾಗ ನಾನು ಇನ್ನೊಬ್ಬರ ಜೀವನವನ್ನು ಹೇಗೆ ನಂಬುವುದು? ಎಂದು ಹೇಳಿದ್ದಾರೆ.

ಅಮೀರ್ ಖಾನ್ ಮೂರನೇ ಬಾರಿಗೆ ಮದುವೆಯಾಗುತ್ತಾರಾ?

ರಿಯಾ ಚಕ್ರವರ್ತಿ ಮೂರನೇ ಮದುವೆಯಾಗಲು ಯೋಚಿಸುತ್ತೀರಾ ಎಂದು ಅಮೀರ್ ಖಾನ್ ಅವರನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನಟ, 'ನನಗೆ 59 ವರ್ಷ, ಈಗ ಮತ್ತೆ ಹೇಗೆ ಮದುವೆಯಾಗಲಿ? ಕಷ್ಟವಾಗುತ್ತದೆ. ನನ್ನ ಜೀವನದಲ್ಲಿ ನನಗೆ ಅನೇಕ ಸಂಬಂಧಗಳಿವೆ. ನಾನು ನನ್ನ ಕುಟುಂಬದೊಂದಿಗೆ ಮತ್ತೆ ಬೆರೆತಿದ್ದೇನೆ. ನನಗೆ ನನ್ನ ಮಕ್ಕಳಿದ್ದಾರೆ, ನನಗೆ ನನ್ನ ಸಹೋದರರು ಮತ್ತು ಸಹೋದರಿಯರಿದ್ದಾರೆ. ನನ್ನ ಹತ್ತಿರ ಇರುವವರ ಜೊತೆ ಇರುವುದು ನನಗೆ ತುಂಬಾ ಸಂತೋಷವಾಗಿದೆ. ನಾನು ಉತ್ತಮ ವ್ಯಕ್ತಿಯಾಗಲು ಪ್ರಯತ್ನಿಸುತ್ತಿದ್ದೇನೆ ಎಂದರು.

ಅಮೀರ್ ಖಾನ್ ನಿರ್ಮಿಸಿದ 'ಲಾಪತ್ ಲೇಡೀಸ್' 2024ರಲ್ಲಿ ಬಿಡುಗಡೆಯಾಗಿದ್ದು ಜನರ ಮನ್ನಣೆ ಗಳಿಸಿತ್ತು. ಈ ಚಿತ್ರವನ್ನು ಕಿರಣ್ ರಾವ್ ನಿರ್ದೇಶಿಸಿದ್ದರು. ಈಗ ಅಮೀರ್ ಖಾನ್ ತಮ್ಮ ಹೊಸ ಚಿತ್ರ 'ಸಿತಾರೆ ಜಮೀನ್ ಪರ್' ಮೂಲಕ ಬರುತ್ತಿದ್ದಾರೆ. ಇದರ ನಿರ್ದೇಶನದ ಜವಾಬ್ದಾರಿಯನ್ನು ಆರ್.ಎಸ್.ಪ್ರಸನ್ನ ವಹಿಸಿಕೊಂಡಿದ್ದಾರೆ. ಜೆನಿಲಿಯಾ ಡಿಸೋಜಾ ಕೂಡ ಈ ಚಿತ್ರದ ಭಾಗವಾಗಿದ್ದಾರೆ. ಅಮೀರ್ ಖಾನ್ ಅಭಿನಯದ 'ಸಿತಾರೆ ಜಮೀನ್ ಪರ್' ಈ ವರ್ಷ ಕ್ರಿಸ್‌ಮಸ್ ಸಂದರ್ಭದಲ್ಲಿ ಥಿಯೇಟರ್‌ಗಳಿಗೆ ಬರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಪ್ರಕರಣ: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT