ಕಿರಣ್ ರಾವ್ (Photo | Sri Loganathan Velmurugan, EPS)
ಬಾಲಿವುಡ್

ಚಿತ್ರ ನಿರ್ಮಾಣ ತಂಡದಲ್ಲಿ ಶೇ. 50 ರಷ್ಟು ಮಹಿಳೆಯರನ್ನು ಹೊಂದಲು ಯೋಜನೆ: ಕಿರಣ್ ರಾವ್

ಆಸ್ಕರ್ ಪ್ರಶಸ್ತಿಗೆ ಭಾರತೀಯ ಸಿನಿಮಾ ಆಯ್ಕೆಯಾಗಿರುವುದೇ ನನಗೆ ಪ್ರಶಸ್ತಿ. ನಾನು ತುಂಬಾ ಅಬಾರಿಯಾಗಿದ್ದು, ಪ್ರತಿಯೊಬ್ಬರೂ ಹೆಮ್ಮೆ ಪಡುವಂತೆ ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ.

ಬೆಂಗಳೂರು: ಯುವ ಮಹಿಳೆಯರು ಚಿತ್ರರಂಗ ಸೇರುವಂತೆ ಚಿತ್ರ ನಿರ್ದೇಶಕಿ, ನಿರ್ಮಾಪಕಿ ಮತ್ತು ಕಥೆಗಾರರಾದ ಕಿರಣ್ ರಾವ್ ಕರೆ ನೀಡಿದ್ದಾರೆ. 'ಲಾಪತಾ ಲೇಡಿಸ್' ಚಿತ್ರಕ್ಕಾಗಿ ಇತ್ತೀಚಿಗೆ ಹೆಚ್ಚಿನ ಸುದ್ದಿಯಲ್ಲಿದ್ದಾರೆ. ಇದು ದೇಶದ 28 ಚಿತ್ರಗಳನ್ನು ಹಿಂದಿಕ್ಕಿ 2025 ರ ಆಸ್ಕರ್‌ ಪ್ರಶಸ್ತಿಗೆ ಆಯ್ಕೆಯಾಗಿತ್ತು.

'ಆಸ್ಕರ್ ಪ್ರಶಸ್ತಿಗೆ ಭಾರತೀಯ ಸಿನಿಮಾ ಆಯ್ಕೆಯಾಗಿರುವುದೇ ನನಗೆ ಪ್ರಶಸ್ತಿ. ನಾನು ತುಂಬಾ ಅಬಾರಿಯಾಗಿದ್ದು, ಪ್ರತಿಯೊಬ್ಬರೂ ಹೆಮ್ಮೆ ಪಡುವಂತೆ ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ರಾವ್ ಹೇಳುತ್ತಾರೆ.

ಗ್ರಾಮೀಣ ಪ್ರದೇಶದ ಕಥೆ ಹೇಳುವ ಚಿತ್ರದಲ್ಲಿ ಮದುವೆ, ಪಿತೃಪ್ರಭುತ್ವ ಮತ್ತು ಸಾಮಾಜಿಕ ನಿಯಮಗಳಂತಹ ವಿಷಯಗಳನ್ನು ಪರಿಶೋಧಿಸುತ್ತದೆ. ಇಬ್ಬರು ಮುಸುಕಾದ ಕೆಂಪು ಸೀರೆ ಧರಿಸಿದ ವಧುಗಳು, ಫೂಲ್ (ನಿತಾನ್ಶಿ ಗೋಯೆಲ್) ಮತ್ತು ಜಯಾ (ಪ್ರತಿಭಾ ರಂತ), ಮದುವೆಯ ನಂತರ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗುವಾಗ ರೈಲು ಪ್ರಯಾಣದ ಸಮಯದಲ್ಲಿ ತಪ್ಪಾಗಿ ವಿನಿಮಯವಾದ ನಂತರ ಸ್ವಯಂ ಅನ್ವೇಷಣೆಯ ಸಾಹಸಮಯ ಪ್ರಯಾಸಕರ ಪ್ರಯಾಣ ಕೈಗೊಳ್ಳುತ್ತಾರೆ.

ಇಬ್ಬರೂ ವಿಭಿನ್ನ ಅನುಭವಗಳ ಮೂಲಕ ಹೋದರೂ, ಅವರು ತಮ್ಮದೇ ಆದ ರೀತಿಯಲ್ಲಿ ಕಲಿಯುತ್ತಾರೆ, ಕಲಿಯುತ್ತಾರೆ ಮತ್ತು ಎಚ್ಚರಗೊಳ್ಳುತ್ತಾರೆ ಎಂದು ರಾವ್ ಹೇಳಿದರು.

ಮುಸುಕಿನ ಕಲ್ಪನೆಯು ಅವರ ಸಾಮರ್ಥ್ಯಕ್ಕೆ ಮಿತಿಯಿದೆ ಎಂದು ತೋರಿಸುವ ಒಂದು ದೊಡ್ಡ ಭೌತಿಕ ರೂಪಕವಾಗಿದೆ. ನಾವು ಯಾವುದೇ ರೀತಿಯ ಮುಸುಕನ್ನು ಟೀಕಿಸಲ್ಲ. ಚಿತ್ರದ ಕೊನೆಯಲ್ಲಿಯೂ ಅವರು ಮುಸುಕುಗಳನ್ನು ಧರಿಸುತ್ತಾರೆ ಮತ್ತು ಅದು ಅವರ ಆಯ್ಕೆಯಾಗಿರುವುದರಿಂದ ವಿಷಯವೇ ಅಲ್ಲಾ ಎಂದರು. ಇಬ್ಬರು ಮದುಮಗಳು ಎಂಬ ಮೂಲ ಕಥೆಯನ್ನು ಬಿಪ್ಲಬ್ ಗೋಸ್ವಾಮಿ ಬರೆದಿದ್ದಾರೆ. ರಾವ್ ಅವರು ತಮ್ಮ ಚಿತ್ರಕ್ಕಾಗಿ ಈ ಕಥೆಯ ಹಲವಾರು ಅಂಶಗಳನ್ನು ತಿರುಚಿದ್ದು, ಮಂಜು ಮೈ ಎಂಬ ಪಾತ್ರವನ್ನು ಪರಿಚಯಿಸಿದ್ದಾರೆ. ಫೂಲ್ ರೈಲು ನಿಲ್ದಾಣದಲ್ಲಿ ಭೇಟಿಯಾಗುವ ಚಮತ್ಕಾರಿ ಮಧ್ಯವಯಸ್ಕ ಮಹಿಳೆ. "ಮಂಜು ಮಾಯಿ ಮಹಿಳಾ ಸ್ವಾತಂತ್ರ್ಯವನ್ನು ಸಂಕೇತಿಸುತ್ತಾಳೆ, ತನ್ನದೇ ಆದ ನಿಯಮಗಳ ಮೇಲೆ ಬದುಕುತ್ತಾಳೆ.

ನಮ್ಮ ಜೀವನದಲ್ಲಿ ಮಹಿಳೆಯರು ನಮ್ಮ ತಾಯಿ, ಚಿಕ್ಕಮ್ಮ, ಅಜ್ಜಿ, ಸಹೋದರಿಯರು ನಮಗಾಗಿ ತುಂಬಾ ಮಾಡಿದ್ದಾರೆ. ಆದರೂ ಅವರ ಕೆಲಸಕ್ಕೆ ಬೆಲೆಯಿಲ್ಲ. ಮಂಜು ಮಾಯಿ ಪಾತ್ರ ನಿಜವಾಗಿಯೂ ಅದ್ಬುತ ಪಾತ್ರವಾಗಿದೆ ಎನ್ನುವ ಕಿರಣ್ ರಾವ್,

ಮುಂದಿನ ಚಲನಚಿತ್ರ ನಿರ್ಮಾಣ ತಂಡದಲ್ಲಿ ಶೇ. 50 ರಷ್ಟು ಮಹಿಳೆಯರನ್ನು ಹೊಂದಲು ಯೋಜಿಸಿರುವುದಾಗಿ ತಿಳಿಸಿದರು. ಇದಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ತೃತೀಯ ಲಿಂಗಿಗಳು ಮತ್ತು ದುರ್ಬಲ ವರ್ಗದ ಜನರು ಚಲನಚಿತ್ರ ನಿರ್ಮಾಣದಲ್ಲಿ ಇರಬೇಕಾದ ಅಗತ್ಯವನ್ನು ಅವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT