ಕಂಗನಾ ರಣೌತ್ online desk
ಬಾಲಿವುಡ್

Emergency ಸಿನಿಮಾಗೇ ಎಮರ್ಜೆನ್ಸಿ ಹೇರಲಾಗಿದೆ: ಕಂಗನಾ

ಸಿಬಿಎಫ್ ಸಿ ಸಿನಿಮಾದ ಪ್ರಮಾಣಪತ್ರ ನೀಡುವುದಕ್ಕೆ ವಿಳಂಬ ಮಾಡುತ್ತಿದ್ದು, ಇದರ ಪರಿಣಾಮವಾಗಿ ಸಿನಿಮಾ ಬಿಡುಗಡೆ ವಿಳಂಬವಾಗುತ್ತಿದೆ ಎಂದು ಕಂಗನಾ ಹೇಳಿದ್ದಾರೆ.

ನವದೆಹಲಿ: ನಟಿ ಕಂಗನಾ ರಣೌತ್ ಅಭಿನಯದ ಎಮರ್ಜೆನ್ಸಿ ಸಿನಮ ಬಿಡುಗಡೆಗೆ ಇನ್ನು 4 ದಿನಗಳಷ್ಟೇ ಬಾಕಿ ಇದ್ದು, ನಟಿ ತಮ್ಮ ಎಮರ್ಜೆನ್ಸಿ ಸಿನಿಮಾಗೇ ತುರ್ತು ಪರಿಸ್ಥಿತಿ ಹೇರಲಾಗಿದೆ ಎಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಸಿಬಿಎಫ್ ಸಿ ಸಿನಿಮಾದ ಪ್ರಮಾಣಪತ್ರ ನೀಡುವುದಕ್ಕೆ ವಿಳಂಬ ಮಾಡುತ್ತಿದ್ದು, ಇದರ ಪರಿಣಾಮವಾಗಿ ಸಿನಿಮಾ ಬಿಡುಗಡೆ ವಿಳಂಬವಾಗುತ್ತಿದೆ ಎಂದು ಕಂಗನಾ ಹೇಳಿದ್ದಾರೆ.

ಎಮರ್ಜೆನ್ಸಿ ಸಿನಿಮಾದಲ್ಲಿ ಕಂಗನಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕತ್ತರಿಸದ ಆವೃತ್ತಿಗೆ ಅನುಮತಿ ನೀಡದೇ ಇದ್ದಲ್ಲಿ ಸಿಬಿಎಫ್ ಸಿ ವಿರುದ್ಧ ಕೋರ್ಟ್ ಮೊರೆ ಹೋಗುವುದಾಗಿ ಕಂಗನಾ ಹೇಳಿದ್ದಾರೆ.

ನನ್ನ ಸಿನಿಮಾ ವಿರುದ್ಧವೂ ಎಮರ್ಜೆನ್ಸಿ ಹೇರಲಾಗಿದೆ. ಇದು ಅತ್ಯಂತ ಹತಾಶ ಸ್ಥಿತಿಯಾಗಿದೆ. ನನ್ನ ದೇಶದಲ್ಲಿರುವ ಪರಿಸ್ಥಿತಿಗಳ ಬಗ್ಗೆ ನನಗೆ ನಿರಾಶೆಯಾಗುತ್ತಿದೆ. ಇನ್ನೂ ಎಷ್ಟು ಹೆದರಿಕೊಂಡಿರಬೇಕು? "ನಾನು ಈ ಚಿತ್ರವನ್ನು ತುಂಬಾ ಸ್ವಾಭಿಮಾನದಿಂದ ಮಾಡಿದ್ದೇನೆ, ಅದಕ್ಕಾಗಿಯೇ CBFC ಯಾವುದೇ ವಿವಾದವನ್ನು ಎತ್ತಿ ತೋರಿಸಲು ಸಾಧ್ಯವಿಲ್ಲ ಎಂದು ಕಂಗನಾ ಆರೋಪಿಸಿದ್ದಾರೆ.

ಒಂದು ಮೂಲದ ಪ್ರಕಾರ, ನಿರ್ಮಾಪಕರು ಇನ್ನೂ CBFC ಯಿಂದ ಪ್ರಮಾಣೀಕರಣವನ್ನು ಸ್ವೀಕರಿಸದ ಕಾರಣ ಶುಕ್ರವಾರ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳು ಕಡಿಮೆ ಇದೆ.

"ಅವರು (CBFC) ತಮ್ಮ ವೆಬ್‌ಸೈಟ್‌ನಲ್ಲಿ U/A ಪ್ರಮಾಣಪತ್ರವನ್ನು ಹಾಕಿದ್ದರೂ, ತಯಾರಕರು ಇನ್ನೂ ಪ್ರಮಾಣಪತ್ರದ ಪ್ರತಿಯನ್ನು ಸ್ವೀಕರಿಸಿಲ್ಲ. ಪ್ರತಿದಿನವೂ ಚಿತ್ರಕ್ಕೆ ಹೊಸ ಕಟ್‌ಗಳನ್ನು ನೀಡಲಾಗುತ್ತಿದೆ. ಅವರು ಕೆಲವು ಒತ್ತಡದಿಂದ ಮಾಡುತ್ತಿದ್ದಾರೆ. ಚಿತ್ರದ ನಿಷ್ಟತೆಗಾಗಿ ಕಂಗನಾ ಹೋರಾಡುತ್ತಿದ್ದಾರೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ. ಸೋಮವಾರ, ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ "ತುರ್ತು" ಬಿಡುಗಡೆಯನ್ನು ತಡೆಯಲು ನಿರ್ದೇಶನಗಳನ್ನು ಕೋರಿ ಸಿಖ್ ಸಂಸ್ಥೆ ಸಲ್ಲಿಸಿರುವ ಮನವಿಯ ವಿಚಾರಣೆ ನಡೆಯಲಿದೆ.

ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಶುಕ್ರವಾರ ಸಿಬಿಎಫ್‌ಸಿಗೆ ಲೀಗಲ್ ನೋಟಿಸ್ ಕಳುಹಿಸಿದ್ದು, ರಾಣಾವತ್ ಅವರ ಚಲನಚಿತ್ರವು "ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತದೆ" ಮತ್ತು "ತಪ್ಪು ಮಾಹಿತಿ ಹರಡಬಹುದು" ಎಂದು ಆರೋಪಿಸಿ ಬಿಡುಗಡೆಯನ್ನು ತಡೆಯುವಂತೆ ಕೋರಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT