ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ 
ಬಾಲಿವುಡ್

ಸೈಫ್ ಅಲಿ ಖಾನ್ ಮೇಲೆ ಚಾಕು ದಾಳಿ: ಸಾಮಾಜಿಕ ಮಾಧ್ಯಮದಲ್ಲಿ ರಹಸ್ಯ ಪೋಸ್ಟ್ ಹಂಚಿಕೊಂಡ ಕರೀನಾ ಕಪೂರ್!

ಜನವರಿ 16ರ ಮುಂಜಾನೆ ಮುಂಬೈನ ಬಾಂದ್ರಾ ಪ್ರದೇಶದಲ್ಲಿನ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯ ನಿವಾಸದಲ್ಲಿ ದರೋಡೆ ಪ್ರಯತ್ನದ ಸಂದರ್ಭದಲ್ಲಿ ದಾಳಿಕೋರನೊಬ್ಬ ಸೈಫ್ ಅವರಿಗೆ ಚಾಕುವಿನಿಂದ ಇರಿದಿದ್ದನು.

ನವದೆಹಲಿ: ತನ್ನ ಪತಿ, ನಟ ಸೈಫ್ ಅಲಿಖಾನ್ ಮೇಲೆ ನಡೆದ ದಾಳಿಯ ವಾರಗಳ ನಂತರ, 'ವ್ಯಕ್ತಿಯೊಬ್ಬನ ಸಿದ್ಧಾಂತಗಳು ಮತ್ತು ಊಹೆಗಳನ್ನು ಜೀವನವು ಹೇಗೆ ವಿಫಲಗೊಳಿಸುತ್ತದೆ' ಎಂಬುದರ ಕುರಿತು ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ರಹಸ್ಯವಾದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಜನವರಿ 16ರ ಮುಂಜಾನೆ ಮುಂಬೈನ ಬಾಂದ್ರಾ ಪ್ರದೇಶದಲ್ಲಿನ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯ ನಿವಾಸದಲ್ಲಿ ದರೋಡೆ ಪ್ರಯತ್ನದ ಸಂದರ್ಭದಲ್ಲಿ ದಾಳಿಕೋರನೊಬ್ಬ ಸೈಫ್ ಅವರಿಗೆ ಚಾಕುವಿನಿಂದ ಪದೇ ಪದೆ ಇರಿದಿದ್ದನು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ನಾಲ್ಕು ದಿನಗಳ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.

'ಮದುವೆಗಳು, ವಿಚ್ಛೇದನಗಳು, ಆತಂಕಗಳು, ಹೆರಿಗೆ, ಪ್ರೀತಿಪಾತ್ರರ ಸಾವು, ಪೋಷಕತ್ವವನ್ನು ನೀವು ನಿಜವಾಗಿಯೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಇವು ನಿಮಗೆ ನಿಜವಾಗಿ ಸಂಭವಿಸುವವರೆಗೆ, ಜೀವನದಲ್ಲಿನ ಸಿದ್ಧಾಂತಗಳು ಮತ್ತು ಊಹೆಗಳು ವಾಸ್ತವವಾಗಿರುವುದಿಲ್ಲ. ನಿಮ್ಮ ಸರದಿ ಬರುವವರೆಗೂ, ಜೀವನವು ನಿಮಗೆ ಸವಾಲುಗಳನ್ನು ಒಡ್ಡುವವರೆಗೂ ನೀವು ಇತರರಿಗಿಂತ ಬುದ್ಧಿವಂತರು ಎಂದು ನೀವು ಭಾವಿಸುತ್ತೀರಿ' ಎಂದು ಕರೀನಾ ತನ್ನ Instagram ನಲ್ಲಿ ಶನಿವಾರ ಪೋಸ್ಟ್ ಮಾಡಿದ್ದಾರೆ.

ತಮ್ಮ ಮೇಲಿನ ದಾಳಿಯ ನಂತರ, ನಟ ಘಟನೆಯನ್ನು ಉದ್ದೇಶಿಸಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯನ್ನು ಹಂಚಿಕೊಂಡಿದ್ದರು. ಇದು 'ನಮ್ಮ ಕುಟುಂಬಕ್ಕೆ ನಂಬಲಾಗದಷ್ಟು ಸವಾಲಿನ ದಿನ' ಎಂದು ಕರೆದಿದ್ದಾರೆ.

'ಈಗ ನಡೆದ ಘಟನೆಗಳಿಂದ ನಾವು ಹೊರಬರಲು ಪ್ರಯತ್ನಿಸುತ್ತಿದ್ದೇವೆ. ನಾವು ಈ ಕಷ್ಟದ ಸಮಯದಲ್ಲಿರುವಾಗ, ಮಾಧ್ಯಮಗಳು ಮತ್ತು ಪಾಪರಾಜಿಗಳು ಪಟ್ಟುಬಿಡದ ಊಹಾಪೋಹಗಳು ಮತ್ತು ಪ್ರಸಾರದಿಂದ ದೂರವಿರಬೇಕೆಂದು ನಾನು ಗೌರವದಿಂದ ಮತ್ತು ನಮ್ರತೆಯಿಂದ ವಿನಂತಿಸುತ್ತೇನೆ' ಎಂದು ಅವರು ಬರೆದಿದ್ದಾರೆ.

ಜನವರಿ 21ರಂದು ಸೈಫ್ ಆಸ್ಪತ್ರೆಯಿಂದ ಬಿಡುಗಡೆಯಾದಾಗ, ಆನ್‌ಲೈನ್‌ನಲ್ಲಿ ಅನೇಕ ಕ್ಲಿಪ್‌ಗಳು ಕಾಣಿಸಿಕೊಂಡವು. ಅವುಗಳಲ್ಲಿ ನಟ ಆರಾಮವಾಗಿ ನಡೆಯುವುದನ್ನು ತೋರಿಸುತ್ತದೆ. ಇದು ಅವರಿಗೆ ನಿಜವಾಗಿಯೂ ಗಾಯಗಳು ಆಗಿದ್ದವಾ ಎನ್ನುವ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಅನುಮಾನ ವ್ಯಕ್ತಪಡಿಸಲು ಕಾರಣವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

SCROLL FOR NEXT