ಹಿರಿಯ ನಟಿ ವೈಜಯಂತಿಮಾಲಾ ಬಾಲಿ  
ಬಾಲಿವುಡ್

ಹಿರಿಯ ನಟಿ ವೈಜಯಂತಿಮಾಲಾ ಬಾಲಿ ಆರೋಗ್ಯ ಕುರಿತ ವದಂತಿ: ನಿರಾಕರಿಸಿದ ಕುಟುಂಬಸ್ಥರು!

ಆಧಾರ ರಹಿತ ವದಂತಿಗಳನ್ನು ಹಬ್ಬಿಸುವುದನ್ನು ನಿಲ್ಲಿಸಿ ಎಂದು ಚೆನ್ನೈ ಮೂಲದ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಗಿರಿಜಾಶಂಕರ್ ಸುಂದರೇಶನ್ ಶುಕ್ರವಾರ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ಚೆನ್ನೈ: ಭಾರತದ ಮೊದಲ ಮಹಿಳಾ ಸೂಪರ್‌ಸ್ಟಾರ್ ಎಂದೇ ಹೆಸರಾದ ವೈಜಯಂತಿಮಾಲಾ ಬಾಲಿ ಆರೋಗ್ಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹಬ್ಬಿತ್ತು. ಇಂತಹ ವರದಿಗಳನ್ನು ಅವರ ಕುಟುಂಬಸ್ಥರು ಶುಕ್ರವಾರ ನಿರಾಕರಿಸಿದ್ದು, ಅವರು ಆರೋಗ್ಯದಿಂದ ಇರುವುದಾಗಿ ತಿಳಿಸಿದ್ದಾರೆ. ಡಾ.ವೈಜಯಂತಿಮಾಲಾ ಬಾಲಿ ಚೆನ್ನಾಗಿದ್ದು, ಯಾವುದೇ ರೀತಿಯ ಸುಳ್ಳು ಸುದ್ದಿ ಹಂಚಿಕೊಳ್ಳುವ ಮೊದಲು, ದಯವಿಟ್ಟು ಆ ಸುದ್ದಿಗಳನ್ನು ಪರಿಶೀಲಿಸಿ ಎಂದು ಅವರ ಕುಟುಂಬಸ್ಥರು ಹೇಳಿದ್ದಾರೆ.

ಆಧಾರ ರಹಿತ ವದಂತಿಗಳನ್ನು ಹಬ್ಬಿಸುವುದನ್ನು ನಿಲ್ಲಿಸಿ ಎಂದು ಚೆನ್ನೈ ಮೂಲದ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಗಿರಿಜಾಶಂಕರ್ ಸುಂದರೇಶನ್ ಶುಕ್ರವಾರ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ವೈಜಯಂತಿ ಮಾಲಾ ಅವರ ಸೂಸೆ ಸುಚೀಂದ್ರ ಬಾಲಿ ಹಂಚಿಕೊಂಡಿದ್ದಾರೆ. ವೈಜಯಂತಿಮಾಲಾ ಬಾಲಿ ಅವರ ನೃತ್ಯ ಪ್ರದರ್ಶನದ ವಿಡಿಯೋವೊಂದನ್ನು ಜನವರಿ 18 ರಂದು ಸುಂದರೇಶನ್ ಹಂಚಿಕೊಂಡಿದ್ದರು.

1949 ರಲ್ಲಿ ತಮಿಳು ಚಲನಚಿತ್ರ 'ವಾಜ್ಕೈ' ಮೂಲಕ ಚಲನಚಿತ್ರ ಕ್ಷೇತ್ರ ಪ್ರವೇಶಿಸಿದ ವೈಜಯಂತಿ ಮಾಲಾ ಬಾಲಿ ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬಿಮಲ್ ರಾಯ್ ಅವರ 'ದೇವದಾಸ್' (1955) ನಲ್ಲಿ ಚಂದ್ರಮುಖಿಯ ಪಾತ್ರ ಭಾರೀ ಜನಪ್ರಿಯವಾಗಿತ್ತು. ಅವರಿಗೆ ಫಿಲ್ಮ್‌ಫೇರ್ ಪ್ರಶಸ್ತಿ ತಂದುಕೊಟ್ಟಿತು.

ಆದರೆ ತಾನೂ ಪೋಷಕ ನಟಿ ಅಲ್ಲ ಎಂದು ಹೇಳಿ ಆ ಪ್ರಶಸ್ತಿಯನ್ನು ನಿರಾಕರಿಸಿದ್ದರು. 'ದೇವದಾಸ್' ನಲ್ಲಿನ ಅವರ ಯಶಸ್ಸು ಆ ಕಾಲದ ಪ್ರಮುಖ ನಾಯಕರ ಜೊತೆಗೆ ಹೆಚ್ಚಿನ ಹಿಂದಿ ಚಲನಚಿತ್ರಗಳಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಟ್ಟಿತ್ತು. ಅಲ್ಲದೇ ಆಕೆಗೆ ಅಪಾರ ಖ್ಯಾತಿ ಮತ್ತು ಸ್ಟಾರ್‌ಡಮ್ ತಂದುಕೊಟ್ಟಿತ್ತು.

ತನ್ನ ವೃತ್ತಿಜೀವನದ ಉತ್ತುಂಗದಲ್ಲಿ, ವೈಜಯಂತಿಮಾಲಾ ನಟ ರಾಜ್ ಕಪೂರ್ ಅವರ ಕುಟುಂಬ ವೈದ್ಯ ಡಾ ಚಮನ್‌ಲಾಲ್ ಬಾಲಿ ಅವರನ್ನು ಮದುವೆಯಾದ ನಂತರ ನಟನೆಯಿಂದ ದೂರ ಉಳಿದರು. ನಂತರ ಅವರು 1984 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು ಆದರೆ 1999 ರಲ್ಲಿ ರಾಜೀನಾಮೆ ನೀಡಿ, ಅದೇ ವರ್ಷ ಬಿಜೆಪಿ ಸೇರಿದ್ದರು. 1968ರಲ್ಲಿ ಪದ್ಮಶ್ರೀ ಪುರಸ್ಕೃತರಾದ ವೈಜಯಂತಿಮಾಲಾ ಅವರಿಗೆ 2024ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT