ಶಾರುಖ್ ಖಾನ್ ನಟನೆಯ ಕಿಂಗ್ ಚಿತ್ರೀಕರಣ ಪ್ರಾರಂಭಿಸಿದ ನಟಿ ದೀಪಿಕಾ ಪಡುಕೋಣೆ 
ಬಾಲಿವುಡ್

Kalki 2898 AD ಸೀಕ್ವೆಲ್‌ನಿಂದ ಔಟ್; ಶಾರುಖ್ ಖಾನ್ ಜೊತೆ 'ಕಿಂಗ್' ಚಿತ್ರೀಕರಣ ಪ್ರಾರಂಭಿಸಿದ ದೀಪಿಕಾ ಪಡುಕೋಣೆ!

ನಟಿ ಅಧಿಕೃತವಾಗಿ ಶಾರುಖ್ ಖಾನ್ ನಟನೆಯ 'ಕಿಂಗ್' ಚಿತ್ರದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಈ ಜೋಡಿ ಕೊನೆಯ ಬಾರಿಗೆ ಜವಾನ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿತ್ತು.

ನವದೆಹಲಿ: ಸ್ಪಿರಿಟ್ ಸೇರಿದಂತೆ ಪ್ರಭಾಸ್, ಅಮಿತಾಬ್ ಬಚ್ಚನ್ ನಟನೆಯ 'ಕಲ್ಕಿ 2898 AD' ನಂತಹ ಹೈ ಪ್ರೊಫೈಲ್ ಯೋಜನೆಗಳಿಂದ ಹಿಂದೆ ಸರಿದಿದ್ದರೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೈಯಲ್ಲಿ ಸಾಕಷ್ಟು ಚಿತ್ರಗಳು ಇವೆ. ಅವರು ಈಗಾಗಲೇ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ನಟಿ ಅಧಿಕೃತವಾಗಿ ಶಾರುಖ್ ಖಾನ್ ನಟನೆಯ 'ಕಿಂಗ್' ಚಿತ್ರದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಈ ಜೋಡಿ ಕೊನೆಯ ಬಾರಿಗೆ ಜವಾನ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿತ್ತು.

ಓಂ ಶಾಂತಿ ಓಂ ನಟಿ ಶನಿವಾರ, ಶಾರುಖ್ ಖಾನ್ ಅವರ ಕೈ ಹಿಡಿದಿರುವ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಚಿತ್ರೀಕರಣದ ಮೊದಲ ದಿನದ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

''ಓಂ ಶಾಂತಿ ಓಂ' ಚಿತ್ರೀಕರಣದ ಸಮಯದಲ್ಲಿ ಅವರು (ಶಾರುಖ್ ಖಾನ್) ಸುಮಾರು 18 ವರ್ಷಗಳ ಹಿಂದೆ ನನಗೆ ಕಲಿಸಿದ ಮೊದಲ ಪಾಠವೆಂದರೆ, ಒಂದು ಸಿನಿಮಾ ಮಾಡುವ ಅನುಭವ ಮತ್ತು ಅದನ್ನು ನೀವು ಯಾರೊಂದಿಗೆ ಮಾಡುತ್ತೀರಿ ಎಂಬುದು ಅದರ ಯಶಸ್ಸಿಗಿಂತ ಹೆಚ್ಚು ಮುಖ್ಯ ಎಂಬುದಾಗಿದೆ. ಆದರೆ, ನಾನು ಅದನ್ನು ಹೆಚ್ಚು ಒಪ್ಪಲು ಸಾಧ್ಯವಿಲ್ಲ ಮತ್ತು ಅಂದಿನಿಂದ ನಾನು ತೆಗೆದುಕೊಂಡ ಪ್ರತಿಯೊಂದು ನಿರ್ಧಾರಕ್ಕೂ ಆ ಕಲಿಕೆಯನ್ನು ಅನ್ವಯಿಸಿದ್ದೇನೆ. ಮತ್ತು ಅದಕ್ಕಾಗಿಯೇ ನಾವು ನಮ್ಮ 6ನೇ ಸಿನಿಮಾವನ್ನು ಮತ್ತೆ ಒಟ್ಟಿಗೆ ಮಾಡುತ್ತಿದ್ದೇವೆ. #ಕಿಂಗ್ #ದಿನ1' ಎಂದು ಬರೆದಿದ್ದಾರೆ.

ಕಿಂಗ್ ಚಿತ್ರದ ಮೂಲಕ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಆರನೇ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅವರ ಚೊಚ್ಚಲ ಬ್ಲಾಕ್‌ಬಸ್ಟರ್ ಚಿತ್ರ 'ಓಂ ಶಾಂತಿ ಓಂ' ನಿಂದ ಹಿಡಿದು 'ಚೆನ್ನೈ ಎಕ್ಸ್‌ಪ್ರೆಸ್,' 'ಹ್ಯಾಪಿ ನ್ಯೂ ಇಯರ್,' 'ಪಠಾಣ್,' ಮತ್ತು 'ಜವಾನ್' ನಂತಹ ಹಿಟ್‌ ಚಿತ್ರಗಳಲ್ಲಿ ಇಬ್ಬರೂ ನಟಿಸಿದ್ದಾರೆ.

ಪ್ರಭಾಸ್ ಅವರ ಕಲ್ಕಿ 2898 AD ಚಿತ್ರದ ಮುಂದುವರಿದ ಭಾಗದಿಂದ ನಟಿಯನ್ನು ಅಧಿಕೃತವಾಗಿ ಕೈಬಿಟ್ಟ ಕೆಲವೇ ದಿನಗಳಲ್ಲಿ ದೀಪಿಕಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಗುರುವಾರ ತನ್ನ X ಖಾತೆಯಲ್ಲಿ ಕಲ್ಕಿ ಸಿನಿಮಾದ ಸೀಕ್ವೆನ್‌ನಲ್ಲಿ ದೀಪಿಕಾ ಪಡುಕೋಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಷರತ್ತುಬದ್ಧ ಅನುಮತಿ

ಇದೇ ಮೊದಲು, ಬಿಜೆಪಿಯಿಂದ ಗೆದ್ದು TMC ಸೇರಿದ್ದ ಮುಕುಲ್ ರಾಯ್ ಶಾಸಕ ಸ್ಥಾನ ರದ್ದುಗೊಳಿಸಿದ ಹೈಕೋರ್ಟ್!

ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ಗೆಲುವು; ತಮಿಳು ನಾಡು ಅರ್ಜಿ ಸುಪ್ರೀಂ ಕೋರ್ಟ್ ವಜಾ

Delhi Blast: ರೂ. 7.5 ಕೋಟಿ ವಂಚನೆ ಪ್ರಕರಣ, 3 ವರ್ಷ ಜೈಲು ಸೇರಿದ್ದ ಅಲ್ ಫಲಾಹ್ ವಿಶ್ವವಿದ್ಯಾನಿಲಯದ ಸಂಸ್ಥಾಪಕ!

SCROLL FOR NEXT