ಹರಿದ ಶರ್ಟ್ ಧರಿಸಿ ಅಕ್ಷಯ್ ಕುಮಾರ್ ಹೊಸ ಫ್ಯಾಷನ್ 
ಬಾಲಿವುಡ್

ಹರಿದ ಶರ್ಟ್ ಧರಿಸಿ ಅಕ್ಷಯ್ ಕುಮಾರ್ ಹೊಸ ಫ್ಯಾಷನ್: ಲುಕ್ ನೋಡಿ ನೆಟ್ಟಿಗರು ಶಾಕ್; 'ಚಪ್ರಿ' ಎಂದು ಟೀಕೆ..!

ಸಾಮಾನ್ಯವಾಗಿ ಸ್ಟೈಲಿಷ್ ಲುಕ್‌ಗಾಗಿ ಹೆಸರುವಾಸಿಯಾಗಿರುವ ಅಕ್ಷಯ್, ಈ ಬಾರಿ ವಿಚಿತ್ರ ಉಡುಪಿನ ಆಯ್ಕೆ ಮಾಡಿಕೊಂಡಿದ್ದು, ಅನೇಕರು ಅದನ್ನು ಟೀಕಿಸಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ವಿಭಿನ್ನ ಫ್ಯಾಷನ್ ಪ್ರಯೋಗದಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಏಪ್ರಿಲ್ 6ರಂದು ನಡೆದ ಭೂತ್ ಬಂಗ್ಲಾ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಧರಿಸಿದ್ದ ಶರ್ಟ್ ಈ ಚರ್ಚೆಗೆ ಕಾರಣವಾಗಿದೆ. ಹರಿದುಹೋಗಿರುವ ಅಥವಾ ಇಲಿ ತಿಂದುಹಾಕಿದಂತೆ ಕಾಣುತ್ತಿದ್ದ ಈ ಶರ್ಟ್, ನೆಟ್ಟಿಗರ ಗಮನ ಸೆಳೆಯಿತು.

ಸಾಮಾನ್ಯವಾಗಿ ಸ್ಟೈಲಿಷ್ ಲುಕ್‌ಗಾಗಿ ಹೆಸರುವಾಸಿಯಾಗಿರುವ ಅಕ್ಷಯ್, ಈ ಬಾರಿ ವಿಚಿತ್ರ ಉಡುಪಿನ ಆಯ್ಕೆ ಮಾಡಿಕೊಂಡಿದ್ದು, ಅನೇಕರು ಅದನ್ನು ಟೀಕಿಸಿದ್ದಾರೆ.

ಈವೆಂಟ್‌ನ ವೀಡಿಯೊಗಳು ಮತ್ತು ಫೋಟೋಗಳು ವೈರಲ್ ಆದ ತಕ್ಷಣವೇ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳ ಸುರಿಮಳೆ ಸುರಿದಿದೆ.

“ಇಷ್ಟು ಹಣ ಇದ್ದೂ ಸರಿಯಾದ ಶರ್ಟ್ ತೆಗೆದುಕೊಳ್ಳಲು ಆಗಲಿಲ್ಲವೇ?” ಎಂಬ ಪ್ರಶ್ನೆಯಿಂದ ಹಿಡಿದು, “ಇಲಿ ತಿಂದುಹೋದ ಬಟ್ಟೆಯನ್ನು ಫ್ಯಾಷನ್ ಎಂದು ತೊಟ್ಟಿದ್ದಾರೆ” ಎಂಬ ವ್ಯಂಗ್ಯವರೆಗೂ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಕೆಲವರು ಅಕ್ಷಯ್ ಲುಕ್‌ನ್ನು ನೇರವಾಗಿ ಟೀಕಿಸಿ, ಅತಿಯಾದ ಹಣ ಮತ್ತು ಫ್ಯಾಷನ್ ಪ್ರಯೋಗಗಳು ಕೆಲವೊಮ್ಮೆ ಅಸಾಧಾರಣವಾಗಿ ತೋರುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ಕೆಲವರು “ಬಡವರು ಹೀಗೆ ಬಟ್ಟೆ ಹಾಕಿದರೆ ‘ಚಪ್ರಿ’ ಅಂತ ಕರೀತಾರೆ, ಶ್ರೀಮಂತರಿಗೆ ತೊಟ್ಟರೆ ಅದೇ ಫ್ಯಾಷನ್” ಎಂದು ವ್ಯಂಗ್ಯ ಮಾಡಿದ್ದಾರೆ.

ಇದರ ಮಧ್ಯೆಯೇ ಭೂತ್ ಬಂಗ್ಲಾ ಚಿತ್ರದ ಬಗ್ಗೆ ಕುತೂಹಲ ಹೆಚ್ಚುತ್ತಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಸುಮಾರು 14 ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ. ಇವರಿಬ್ಬರ ಜೋಡಿ ಹಿಂದಿನ ಹಾಸ್ಯಚಿತ್ರಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿತ್ತು.

ಇವರು ಕೊನೆಯದಾಗಿ ಒಟ್ಟಿಗೆ ಕೆಲಸ ಮಾಡಿದ ಚಿತ್ರ ಖಟ್ಟಾ ಮೀಟಾ ಚಿತ್ರ. ಈ ಚಿತ್ರ 2010ರಲ್ಲಿ ಬಿಡುಗಡೆಯಾಗಿತ್ತು. ಈಗ ‘ಭೂತ್ ಬಂಗ್ಲಾ’ ಮೂಲಕ ಹಾರರ್-ಕಾಮಿಡಿ ಶೈಲಿಯಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್