ಹಾವು ರಕ್ಷಕ ವಿಕ್ಕಿ ದುಬೆ  
ಬಾಲಿವುಡ್

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ 'ಮನ್ನತ್' ನಿವಾಸದಲ್ಲಿ 8 ಅಡಿ ಉದ್ದದ ಹಾವಿನ ರಕ್ಷಣೆ! ಮತ್ತೊಂದು ನಾಪತ್ತೆ

ಶೆಡ್ ಒಂದರ ಕೆಳಗೆ ಎರಡು ಹಾವುಗಳು ಹೆಣೆದುಕೊಂಡಿರುವುದು ಕಂಡುಬಂದಿವೆ. ಬಳಿಕ ಹಾವು ರಕ್ಷಕ ವಿಕ್ಕಿ ದುಬೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವು ಶೋಧ ಕಾರ್ಯವನ್ನು ಕೈಗೊಂಡಿತು.

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಬಾಂದ್ರಾದಲ್ಲಿರುವ 'ಮನ್ನತ್' ನಿವಾಸದಿಂದ 8 ಅಡಿ ಉದ್ದದ ಹಾವನ್ನು ರಕ್ಷಿಸಲಾಗಿದ್ದು, ಮತ್ತೊಂದು ನಾಪತ್ತೆಯಾಗಿದೆ. ನಿನ್ನೆ ಸಂಜೆ ಮನೆಯ

ಶೆಡ್ ಒಂದರ ಕೆಳಗೆ ಎರಡು ಹಾವುಗಳು ಹೆಣೆದುಕೊಂಡಿರುವುದು ಕಂಡುಬಂದಿವೆ. ಬಳಿಕ ಹಾವು ರಕ್ಷಕ ವಿಕ್ಕಿ ದುಬೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವು ಶೋಧ ಕಾರ್ಯವನ್ನು ಕೈಗೊಂಡಿತು.

ಸುಮಾರು 8 ಅಡಿ ಉದ್ದವಿದ್ದ ಹಾವುಗಳಲ್ಲಿ ಒಂದನ್ನು ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ದುಬೆ ಯಶಸ್ವಿಯಾದರು. ಈ ಹಾವು 'ಧಮನ್' ಅಥವಾ 'ಇಂಡಿಯನ್ ರಾಟ್ ಸ್ನೇಕ್' (ಭಾರತೀಯ ಇಲಿ ಹಾವು) ಎಂದು ಗುರುತಿಸಲಾಗಿದೆ. ಇದು ವಿಷಕಾರಿಯಲ್ಲದ ಜಾತಿಯಾಗಿದ್ದು, ಮನುಷ್ಯರಿಗೆ ಯಾವುದೇ ಅಪಾಯವನ್ನು ಉಂಟುಮಾಡುವುದಿಲ್ಲ ಎನ್ನಲಾಗಿದೆ.

ಆದರೆ, ಸ್ಥಳದಲ್ಲಿ ಜನರು ಜಮಾಯಿಸಿದ್ದರಿಂದ ಎರಡನೇ ಹಾವು ತಪ್ಪಿಸಿಕೊಂಡು ಹೋಯಿತು. ಅದು ಕಾಣೆಯಾದದ್ದು 'ಮನ್ನತ್'ನ ಭದ್ರತಾ ಸಿಬ್ಬಂದಿ ಮತ್ತು ಮನೆಯವರಲ್ಲಿ ಆತಂಕವನ್ನು ಉಂಟುಮಾಡಿದ್ದರಿಂದ ಮನೆ ಆವರಣದಲ್ಲಿ ತಡರಾತ್ರಿಯವರೆಗೂ ಶೋಧ ಕಾರ್ಯ ನಡೆಯಿತು. ಎಷ್ಟೇ ಪ್ರಯತ್ನಿಸಿದರೂ, ಎರಡನೇ ಹಾವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

ರಕ್ಷಿಸಲಾದ ಹಾವು ಅಪಾಯಕಾರಿಯಲ್ಲ, ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ದುಬೆ ಅಲ್ಲಿದ್ದವರಿಗೆ ಭರವಸೆ ನೀಡಿದರು. ಅರಣ್ಯ ಇಲಾಖೆಯ ನಿಯಮಾವಳಿಗಳ ಪ್ರಕಾರ, ಸೆರೆಹಿಡಿಯಲಾದ 'ಧಮನ್' ಹಾವನ್ನು ನಂತರ ಅದರ ನೈಸರ್ಗಿಕ ಆವಾಸಸ್ಥಾನದಲ್ಲಿ ಸುರಕ್ಷಿತವಾಗಿ ಬಿಡುಗಡೆ ಮಾಡಲಾಯಿತು.

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!

ರಾಮ ಮಂದಿರ ದೇಣಿಗೆ ಕಳ್ಳತನ: ಚಂಪತ್ ರಾಯ್, ಅನಿಲ್ ಮಿಶ್ರಾಗೆ ಉತ್ತರಪ್ರದೇಶ SIT ಕ್ಲೀನ್ ಚಿಟ್!

PM CARES ನಿಧಿ ವಿವರ ಬಹಿರಂಗ; ದೇಣಿಗೆಗಳಲ್ಲಿ ತೀವ್ರ ಕುಸಿತ ವಿದೇಶಿ ದೇಣಿಗಗಳ ಬಗ್ಗೆ ಕೇಂದ್ರ ಹೇಳಿದ್ದೇನು?

India vs Sri Lanka: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರಿಷಭ್ ಪಂತ್; ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್!

ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶ ರದ್ದು: KPSC ಅಧ್ಯಕ್ಷರನ್ನಾಗಿ ಶಿವಶಂಕರಪ್ಪ ಮರುನೇಮಕಕ್ಕೆ ಹೈಕೋರ್ಟ್ ಸೂಚನೆ