ಗೌರಿ ಸ್ಪ್ರಾಟ್-ಸುಚಿತ್ರಾ ಕೃಷ್ಣಮೂರ್ತಿ ಮತ್ತು ಸುಚಿತ್ರಾ ಕೃಷ್ಣಮೂರ್ತಿ 
ಬಾಲಿವುಡ್

'3ನೇ ಮದುವೆಯಾಗುತ್ತಿರುವ ಆಮೀರ್ ಖಾನ್‌ಗೆ ತುಂಬಾ ಧೈರ್ಯವಿದೆ'; ತಾವೇಕೆ ಇನ್ನೂ ಸಿಂಗಲ್ ಎಂಬುದನ್ನು ತಿಳಿಸಿದ ನಟಿ!

ಸುಚಿತ್ರಾ 1999ರಲ್ಲಿ ನಿರ್ದೇಶಕ ಶೇಖರ್ ಕಪೂರ್ ಅವರನ್ನು ವಿವಾಹವಾದರು. ಆ ಸಮಯದಲ್ಲಿ ಅವರಿಗೆ 22 ವರ್ಷ, ನಿರ್ದೇಶಕರಿಗೆ 52 ವರ್ಷವಾಗಿತ್ತು. ದಂಪತಿ 2007ರಲ್ಲಿ ವಿಚ್ಛೇದನ ಪಡೆದರು.

ಜುಲೈ 5 ರಂದು ನಡೆಯುವ ಖಾಸಗಿ ಸಮಾರಂಭದಲ್ಲಿ ಬಾಲಿವುಡ್ ನಟ ಆಮಿರ್ ಖಾನ್ ತಮ್ಮ ಬಹುಕಾಲದ ಗೆಳತಿ ಗೌರಿ ಸ್ಪ್ರಾಟ್ ಅವರೊಂದಿಗೆ ವಿವಾಹವಾಗಲಿದ್ದಾರೆ. ಇದು ಸೂಪರ್‌ಸ್ಟಾರ್‌ನ ಮೂರನೇ ಮದುವೆಯಾಗಿದ್ದು, ಈ ನಿರ್ಧಾರಕ್ಕೆ ನಟಿ ಸುಚಿತ್ರಾ ಕೃಷ್ಣಮೂರ್ತಿ ಬೆಂಬಲ ಸೂಚಿಸಿದ್ದಾರೆ.

IANS ಜೊತೆ ಮಾತನಾಡಿದ ಅವರು, 'ಆಲ್ ದಿ ಬೆಸ್ಟ್. ಅವರಿಗೆ ತುಂಬಾ ಧೈರ್ಯವಿದೆ. ನಾನು ಅವರಿಗೆ ತುಂಬಾ ತುಂಬಾ ಶುಭ ಹಾರೈಸುತ್ತೇನೆ. ಒಬ್ಬರಿಗಾಗಿ ನಿಮ್ಮ ಹೃದಯವನ್ನು ಮತ್ತೆ ತೆರೆಯುವುದು ಮತ್ತು ಮತ್ತೆ ಪ್ರೀತಿಸುವುದು ತುಂಬಾ ಸುಂದರವಾದ ವಿಷಯ ಎಂದು ನಾನು ಭಾವಿಸುತ್ತೇನೆ. ಇದು ಒಂದು ಆಶೀರ್ವಾದದ ಅವಕಾಶ ಮತ್ತು ನಾನು ಅವರಿಗೆ ಎಲ್ಲ ಪ್ರೀತಿ ಮತ್ತು ಯಶಸ್ಸನ್ನು ಬಯಸುತ್ತೇನೆ' ಎಂದು ಹೇಳಿದರು.

ಸುಚಿತ್ರಾ 1999ರಲ್ಲಿ ನಿರ್ದೇಶಕ ಶೇಖರ್ ಕಪೂರ್ ಅವರನ್ನು ವಿವಾಹವಾದರು. ಆ ಸಮಯದಲ್ಲಿ ಅವರಿಗೆ 22 ವರ್ಷ, ನಿರ್ದೇಶಕರಿಗೆ 52 ವರ್ಷವಾಗಿತ್ತು. ದಂಪತಿ 2007ರಲ್ಲಿ ವಿಚ್ಛೇದನ ಪಡೆದರು. ಅವರಿಗೆ ಕಾವೇರಿ ಕಪೂರ್ ಎಂಬ ಮಗಳು ಇದ್ದಾಳೆ.

ಶೇಖರ್ ಕಪೂರ್ ಅವರಿಂದ ವಿಚ್ಛೇದನ ಪಡೆದ ನಂತರವೂ ಅವರು ಏಕೆ ಒಂಟಿಯಾಗಿದ್ದಾರೆ ಎಂಬುದರ ಕುರಿತು ಮಾತನಾಡಿದ ನಟಿ, 'ಬೇರೆಯವರೊಂದಿಗಿನ ಸಂಬಂಧವನ್ನು ನಿಭಾಯಿಸಲು ಅಥವಾ ಸರಿಪಡಿಸಲು ಮೊದಲು ನಿಮ್ಮೊಳಗೆ ಸ್ಪಷ್ಟತೆ, ಸ್ಥಿರತೆ ಮತ್ತು ಭಾವನಾತ್ಮಕ ಸಮತೋಲನ ಇರಬೇಕು. ನಾನು ಏಕೆ ಒಂಟಿಯಾಗಿದ್ದೇನೆ ಎಂದು ಜನರು ನನ್ನನ್ನು ಹೆಚ್ಚಾಗಿ ಕೇಳುತ್ತಾರೆ ಮತ್ತು ನಾನು ಕಲೆಯನ್ನೇ ಮದುವೆಯಾಗಿದ್ದೇನೆ ಎಂದು ನಾನು ಅವರಿಗೆ ಹೇಳುತ್ತೇನೆ. ಆದರೆ, ಕೆಲವೊಮ್ಮೆ ಆ ಕಲೆಯು ವಿಷಕಾರಿಯಾಗಿದೆ. ಕೆಲವೊಮ್ಮೆ ಅದು ಆರ್ಥಿಕವಾಗಿ ಅಸ್ಥಿರವಾಗಿರುತ್ತದೆ. ಕೆಲವೊಮ್ಮೆ ಅದು ಸಂಪೂರ್ಣವಾಗಿ ಅನಿರೀಕ್ಷಿತವಾಗಿರುತ್ತದೆ. ಯಾವುದೇ ಸಂಗಾತಿ ಅದನ್ನು ಸುಲಭವಾಗಿ ಸಹಿಸಿಕೊಳ್ಳಲು ಸಾಧ್ಯವಿಲ್ಲ. ನೀವು ಆ ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಮತ್ತು ನಿಮ್ಮ ಜೀವನವನ್ನು ಯಾರೊಂದಿಗಾದರೂ ಕಳೆಯಲು ಬಯಸುತ್ತೀರಿ ಎಂದು ನಿಮಗೆ ಸಂಪೂರ್ಣವಾಗಿ ಖಚಿತವಿಲ್ಲದಿದ್ದರೆ, ಮದುವೆಯಾಗಬಾರದು. ಇಂದು, ಮದುವೆಯು ಒಂದು ಆಯ್ಕೆಯಾಗಿದೆ, ಅವಶ್ಯಕತೆಯಲ್ಲ' ಎಂದಿದ್ದಾರೆ.

ಭಾರತೀಯ ವಿವಾಹಗಳ ಬಗ್ಗೆ ಮಾತನಾಡಿದ ಸುಚಿತ್ರಾ, 'ಮದುವೆಯಾಗುವ ಮೊದಲು ನೀವು ಇನ್ನೊಬ್ಬ ವ್ಯಕ್ತಿಯ ಕುಟುಂಬವನ್ನು ಅರ್ಥಮಾಡಿಕೊಳ್ಳಬೇಕು ಎಂದು ನಾನು ನಂಬುತ್ತೇನೆ. ಆಗಾಗ್ಗೆ, ಕುಟುಂಬಗಳು ಮತ್ತು ದಂಪತಿ ನಡುವಿನ ಘರ್ಷಣೆಗಳು ಸಂಬಂಧದಲ್ಲಿ ತೊಂದರೆಗಳನ್ನು ಉಂಟುಮಾಡುತ್ತವೆ' ಎಂದು ಹೇಳಿದರು.

ಅಮೀರ್ ಖಾನ್ ಅವರ ವಿವಾಹಗಳು

ಅಮೀರ್ ಖಾನ್ 1986ರಲ್ಲಿ ರೀನಾ ದತ್ತಾ ಅವರನ್ನು ರಹಸ್ಯ ಮತ್ತು ಆತ್ಮೀಯರ ಮುಂದೆ ವಿವಾಹವಾದರು. ದಂಪತಿಗೆ ಮಗ ಜುನೈದ್ ಮತ್ತು ಮಗಳು ಇರಾ ಇದ್ದಾರೆ. ಜುನೈದ್ ಈಗ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ಆದರೆ, ಇರಾ ಮಾನಸಿಕ-ಆರೋಗ್ಯ ಜಾಗೃತಿಯ ವಕೀಲರಾಗಿದ್ದಾರೆ. 16 ವರ್ಷಗಳ ದಾಂಪತ್ಯದ ನಂತರ ದಂಪತಿ 2002ರಲ್ಲಿ ವಿಚ್ಛೇದನ ಪಡೆದರು.

ಆಮಿರ್ 2005ರಲ್ಲಿ ಕಿರಣ್ ರಾವ್ ಅವರನ್ನು ವಿವಾಹವಾದರು. 2001ರ ಲಗಾನ್ ಚಿತ್ರದ ಸೆಟ್‌ಗಳಲ್ಲಿ ಇಬ್ಬರೂ ಭೇಟಿಯಾದರು. ಕಿರಣ್ ಅವರು ಆ ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿದ್ದರು. ಅವರು 2021ರಲ್ಲಿ ವಿಚ್ಛೇದನ ಪಡೆದರು. ದಂಪತಿಗೆ ಬಾಡಿಗೆ ತಾಯ್ತನದ ಮೂಲಕ ಪಡೆದ ಆಜಾದ್‌ ಎಂಬ ಮಗನಿದ್ದಾನೆ.

ಕಳೆದ ವರ್ಷ ತಮ್ಮ 60ನೇ ಹುಟ್ಟುಹಬ್ಬದಂದು ಆಮೀರ್ ಅವರು ಗೌರಿ ಅವರನ್ನು ಮಾಧ್ಯಮಗಳಿಗೆ ಪರಿಚಯಿಸಿದರು. ಅವರು ತಮ್ಮ ಸಂಬಂಧವನ್ನು 18 ತಿಂಗಳು ರಹಸ್ಯವಾಗಿಟ್ಟುಕೊಂಡಿದ್ದರು ಮತ್ತು ನಂತರ ಅದನ್ನು ಸಾರ್ವಜನಿಕಗೊಳಿಸಿದರು. ಮೂಲತಃ ಬೆಂಗಳೂರಿನವರಾದ ಗೌರಿ, ಈಗ ಆಮೀರ್ ಖಾನ್ ಅವರ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಾತಿ, ಧರ್ಮ ಯಾವುದೇ ಪ್ರಭಾವಕ್ಕೂ ಮಣಿಯಬೇಡಿ: ಪಾರದರ್ಶಕವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಡಿಕೆಶಿ ಸೂಚನೆ​​

ನಾನೇರಿದೆತ್ತರಕ್ಕೆ ನೀನೇರಬಲ್ಲೆಯಾ?: ನಿರ್ಗಮನಕ್ಕೂ ಉನ್ನತ ಹುದ್ದೆ ಅಲಂಕರಿಸಿ ವಿರೋಧಿಗಳಿಗೆ ಸೆಡ್ಡು ಹೊಡೆದ 'ರಾಜನೀತಿಜ್ಞ' ಸಿದ್ದರಾಮಯ್ಯ!

ಬೇರೆ ದಾರಿಯೇ ಇರಲಿಲ್ಲ, ನಿರ್ಮಾಪಕರ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಸುಳ್ಳು: ನಟಿ ಶಿಲ್ಪಾ ಶಿಂಡೆ ಸ್ಫೋಟಕ ಹೇಳಿಕೆ! Video

ಹಿಜ್ಬುಲ್ಲಾಗೆ ಕಟ್ಟುನಿಟ್ಟಿನ ಕಡಿವಾಣ: ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಇಸ್ರೇಲ್-ಲೆಬನಾನ್ ಮಹತ್ವದ ಒಪ್ಪಂದ, ಅಮೆರಿಕಾ ಮಧ್ಯಸ್ಥಿಕೆ..!

ಮುಂದಿನ ಶತಮಾನ ಯಾರಿಗೆ ಸೇರಿದ್ದು? ನಿರ್ಧರಿಸುವುದು R&D ಮೇಲಿನ ಹೂಡಿಕೆ! (ಹಣಕ್ಲಾಸು)

SCROLL FOR NEXT