ಟಾಕ್ಸಿಕ್’ ನಟಿ ತಾರಾ ಸುತಾರಿಯಾ 
ಬಾಲಿವುಡ್

ತೀರಾ ಹತ್ತಿರ ಬಂದು ಪೋಟೋ ತೆಗೆಯಲು ಮುಂದಾದ ಪಾಪರಾಜಿ: ‘ಟಾಕ್ಸಿಕ್’ ನಟಿ ತಾರಾ ಸುತಾರಿಯಾ ಮಾಡಿದ್ದೇನು? ಈ Video ನೋಡಿ...

ಬಿಳಿ ಬಣ್ಣದ ಉಡುಪು ಹಾಗೂ ಕಪ್ಪು ಕನ್ನಡಕ ಧರಿಸಿದ್ದ ತಾರಾ ಸುತಾರಿಯಾ ಮಳಿಗೆಯ ಪ್ರವೇಶ ದ್ವಾರದತ್ತ ಸಾಗುತ್ತಿದ್ದರು. ಈ ವೇಳೆ ಸಿಬ್ಬಂದಿ ಕೊಡೆ ಹಿಡಿದು ಅವರಿಗೆ ಭದ್ರತೆ ನೀಡಲು ಯತ್ನಿಸಿದರೂ, ಛಾಯಾಗ್ರಾಹಕರು ಅವರನ್ನು ಸುತ್ತುವರೆದಿದ್ದರು.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ನಟಿ ತಾರಾ ಸುತಾರಿಯಾ ಮುಂಬೈನಲ್ಲಿ ಹೊರಗೆ ಹೋಗಿದ್ದಾಗ ಪಾಪರಾಜಿಯೊಬ್ಬರು ತೀರಾ ಹತ್ತಿರ ಬಂದು ನಟಿಯ ಫೋಟೋ ತೆಗೆಯಲು ಮುಂದಾಗಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ಸುತಾರಿಯಾ, ಕ್ಯಾಮರಾವನ್ನು ಪಕಕ್ಕೆ ತಳ್ಳಿ ಕೋಪದಿಂದ ತೆರಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೌದು. ಭದ್ರತಾ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಸುತಾರಿಯಾ ಮಳಿಗೆಯೊಂದಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಬಿಳಿ ಬಣ್ಣದ ಉಡುಪು ಹಾಗೂ ಕಪ್ಪು ಕನ್ನಡಕ ಧರಿಸಿದ್ದ ತಾರಾ ಸುತಾರಿಯಾ ಮಳಿಗೆಯ ಪ್ರವೇಶ ದ್ವಾರದತ್ತ ಸಾಗುತ್ತಿದ್ದರು. ಈ ವೇಳೆ ಸಿಬ್ಬಂದಿ ಕೊಡೆ ಹಿಡಿದು ಅವರಿಗೆ ಭದ್ರತೆ ನೀಡಲು ಯತ್ನಿಸಿದರೂ, ಛಾಯಾಗ್ರಾಹಕರು ಅವರನ್ನು ಸುತ್ತುವರೆದಿದ್ದರು.

ಈ ನಡುವೆ ಫೋಟೋಗ್ರಾಫರ್ ಒಬ್ಬರು ಕ್ಯಾಮೆರಾವನ್ನು ತೀರಾ ಹತ್ತಿರಕ್ಕೆ ತಂದಾಗ, ತಾಳ್ಮೆ ಕಳೆದುಕೊಂಡ ತಾರಾ ಕ್ಯಾಮೆರಾವನ್ನು ಬದಿಗೆ ತಳ್ಳಿ ಮುಂದೆ ಸಾಗಿದರು. ಇಷ್ಟೇ ಅಲ್ಲದೆ, ಕೆಲವು ಛಾಯಾಗ್ರಾಹಕರು ನಟಿಯ ಹೆಸರನ್ನು ಗೇಲಿ ಮಾಡುವ ರೀತಿಯಲ್ಲಿ ಕೂಗುತ್ತಾ, ಅಸಭ್ಯವಾಗಿ ನಡೆದುಕೊಂಡಿರುವುದು ವಿಡಿಯೋದಲ್ಲಿ ಕೇಳಿಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಗಿ ವೈರಲ್ ಆದ ಈ ವಿಡಿಯೋ, ಪಾಪರಾಜಿಗಳ ವರ್ತನೆ ಮತ್ತು ಸೆಲೆಬ್ರಿಟಿಗಳ ವೈಯಕ್ತಿಕ ಸ್ವಾತಂತ್ರ್ಯದ (personal space) ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕ ನೆಟ್ಟಿಗರು ತಾರಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬರು "ಈ ಪಾಪರಾಜಿಗಳ ಮುಖಕ್ಕೆ ಗುದ್ದಬೇಕು ಎಂದಿದ್ದಾರೆ. ಇನ್ನೊಬ್ಬರು ತಾರಾ ಸುತಾರಿಯಾ ಸರಿಯಾದ ಕೆಲಸ ಮಾಡಿದ್ದಾರೆಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನೊಬ್ಬರು, ಸೆಲೆಬ್ರಿಟಿಗಳಿಗೂ ಖಾಸಗಿ ಜೀವನವಿರುತ್ತದೆ ಎಂಬುದನ್ನು ಪಾಪರಾಜಿಗಳು ಅರ್ಥಮಾಡಿಕೊಳ್ಳಬೇಕು. ಕ್ಯಾಮೆರಾಗಳೊಂದಿಗೆ ಎಲ್ಲೆಂದರಲ್ಲಿ ನುಗ್ಗಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

37 ವರ್ಷ ನಿಷೇಧದ ಬಳಿಕ ಮತ್ತೆ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ; ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

KGF ಕಾಲೇಜಿನಲ್ಲಿ ಕುರ್ಚಿ ವಿಚಾರಕ್ಕೆ ವಾಗ್ವಾದ: ತರಗತಿಯಲ್ಲಿ ಯುವಕನ ಥಳಿತಕ್ಕೆ ಪ್ರಜ್ಞೆತಪ್ಪಿ ಬಿದ್ದ ವಿದ್ಯಾರ್ಥಿನಿ, Video

ಮಾಯಾವತಿ 3ನೇ ಬಾರಿ ಯೂ-ಟರ್ನ್: ಸೋದರಳಿಯ ಆಕಾಶ್ ಆನಂದ್ ಗೆ ಮತ್ತೆ ಅವಕಾಶ; ಆದ್ರೆ ಮಾವನಿಗೆ ಷರತ್ತು ಅನ್ವಯ!

ಡಿಕೆಶಿ ಸರ್ಕಾರಕ್ಕೆ ನಾಳೆ 100 ದಿನದ ಸಂಭ್ರಮ: ಬಡವರಿಗೆ ಬಂಪರ್ ಗಿಫ್ಟ್! 15 ಲಕ್ಷ ಉಚಿತ ಸೈಟ್ ಹಂಚಿಕೆಗೆ ಸಂಪುಟ ಅಸ್ತು!

3,260 ನಕಲಿ ಪಕ್ಷಗಳ ಮೂಲಕ 10,000 ಕೋಟಿ ಕಪ್ಪುಹಣ ಅಕ್ರಮ ವರ್ಗಾವಣೆ; ಬಿಜೆಪಿಯ 'ಸಿ' ಟೀಮ್: ಕಾಂಗ್ರೆಸ್ ಆರೋಪ!