ಬಾನಾಡಿ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

`ಬಾನಾಡಿ’ ಮತ್ತು `ಗೋಲ್ ಗೊಂಬಜ್’ಈ ವಾರ ತೆರೆಗೆ

ಧೃತಿ ಸಿನೆಮಾ ಲಾಂಛನದಲ್ಲಿ ಎಂ.ನಾಗರಾಜು ಅವರು ನಿರ್ಮಿಸಿರುವ `ಬಾನಾಡಿ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.    ನಾಗರಾಜ ಕೋಟೆ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ರಾಮನಗರ, ಶ್ರೀಂಗಪಟ್ಟಣ, ಚನ್ನಪಟ್ಟಣ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

 ಕಾರ್ತಿಕ್‍ಶರ್ಮ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಾಸನ ಮಂಜು ಸಹ ನಿರ್ದೇಶನವಿರುವ `ಬಾನಾಡಿ’ಗೆ ಸಭಾಕುಮಾರ್ ಅವರ ಛಾಯಾಗ್ರಹಣವಿದೆ. ನಾಗರಾಜ ಕೋಟೆ ಅವರ `ಉಸಿರು’ ಕೃತಿ ಆಧಾರಿತವಾಗಿರುವ ಈ ಚಿತ್ರಕ್ಕೆ ಗೂಡಿನಿಂದ ಗಗನದೆಡೆಗೆ ಎಂಬ ಅಡಿಬರಹವಿದೆ.  ದತ್ತಣ್ಣ, ರಾಜೇಶ್, ಅಭಿನಯ, ಮಾಸ್ಟರ್ ಪ್ರಪುಲ್ ವಿಶ್ವಕರ್ಮ, ಕುಮಾರಿ ಧೃತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

`ಗೋಲ್ ಗೊಂಬಜ್’
ವಿ.ವಿ.ಎಂ ಸಿನಿಮಾಸ್ ಸಂಸ್ಥೆ ಲಾಂಛನದಲ್ಲಿ ಮುತ್ತುರಾಜ್ ಅವರು ನಿರ್ಮಿಸಿರುವ `ಗೋಲ್ ಗುಂಬಜ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡಿರುವ ಧನುಷ್ ಈ ಚಿತ್ರದ ನಯಕನಾಗೂ ಅಭಿನಯಿಸಿದ್ದಾರೆ. ಚಿತ್ರದ ಛಾಯಾಗ್ರಾಹಕರಾಗಿರುವ ಧನುಷ್ ಸಂಗೀತವನ್ನು ನೀಡಿದ್ದಾರೆ. ಕೆ.ಡಿ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಧನುಷ್, ಪೂರ್ಣಿಮಾ, ನಕುಲ್, ಶಿವು, ರಾಜು, ವೆಂಕಟೇಶಪ್ಪ, ಲಚ್ಚಿ, ಅನಿಲ್ ಮುಂತಾದವರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT