ಹೇಮಂತ್ ಹೆಗಡೆ 
ಸಿನಿಮಾ ಸುದ್ದಿ

ಮತ್ತೊಮ್ಮೆ ಶ್...!!

ನಿರ್ದೇಶಕ ಹೇಮಂತ್ ಹೆಗಡೆ ಮತ್ತೆ ಬರುತ್ತಿದ್ದಾರೆ.

ನಿರ್ದೇಶಕ ಹೇಮಂತ್ ಹೆಗಡೆ ಮತ್ತೆ ಬರುತ್ತಿದ್ದಾರೆ. ಈಗಾಗಲೇ 'ಹೌಸ್‌ಫುಲ್‌' ಹಾಗೂ 'ನಿಂಬೆಹುಳಿ' ಸಿನಿಮಾಗಳನ್ನು ಮಾಡಿದ್ದ ಹೇಮಂತ್‌ಗೆ 'ಶ್...!!' ಟೈಟಲ್ ಮೇಲೆ ಕಣ್ಣು ಬಿದ್ದಿದ್ದು ಯಾವಾಗ ಅಂತ ಗೊತ್ತಿಲ್ಲ.

ಆದರೆ, ಈ ಶ್ 2 ಎಂಬ ಹೆಸರಿಲ್ಲಿ ಸಿನಿಮಾ ಮಾಡಲು ಹೋದರೆ, ಕುಮಾರ್ ಗೋವಿಂದ್ ಟೈಟಲ್ ಕೊಡಲಿಲ್ಲವಂತೆ. ಹೇಮಂತ್ ಹೆಗಡೆ ಐಡಿಯಾ ಕೊಟ್ಟ ಮೇಲೆ ಕುಮಾರು ಗೋವಿಂದ್ ತಮ್ಮ ಬ್ಯಾನರ್‌ನಲ್ಲೇ ಶ್2 ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಹೀಗಾಗಿ ಹೇಮಂತ್ ಹೆಗಡೆ ಅನಿವಾರ್ಯವಾಗಿ ಮತ್ತೊಮ್ಮೆ ಶ್...!! ಎನ್ನುವ ಶೀರ್ಷಿಕೆ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ.

ಈ ಶೀರ್ಷಿಕೆಗೆ ಸದ್ಯ ಯಾರಿಂದಲೂ ತಕರಾರು ಬಂದಿಲ್ಲ. ಆದರೆ, ಈ ಚಿತ್ರದ ವಿಶೇಷತೆ ಅಂದರೆ ಸಿಸಿಎಲ್‌ನಲ್ಲೇ ಮಿಂಚುತ್ತಿದ್ದ ಜೈ ಕೃಷ್ಣ ಅಲಿಯಾಸ್ ಜೆಕೆ ಇಲ್ಲಿ ವಿನಲ್ ರೋಲ್ ಮಾಡುತ್ತಿದ್ದಾರೆಂಬ ಗುಮಾನಿ ಇದೆ. ಆದರೆ, ಅದು ವಿಲನ್ ಅಲ್ಲ, ನೆಗೆಟಿವ್ ಪಾತ್ರ ಎನ್ನುವ ಮತ್ತೊಂದು ವರ್ತಮಾನವೂ ಓಡಾಡುತ್ತಿದೆ. ಹಾಗಾದರೆ ನಟ ಜೆಕೆ ಇಲ್ಲಿ ಖಳನಾಯಕನಾ? ನೆಗೆಟಿವ್ ಪಾತ್ರವಾ? ಗೊತ್ತಿಲ್ಲ. ಒಟ್ಟಿನಲ್ಲಿ ನೆಗೆಟಿವ್ ಶೇಡ್ ಇದೆ ಎನ್ನುವುದನ್ನೂ ಮಾತ್ರ ನೆಗ್ಲೆಕ್ಟ್ ಮಾಡುವಂತಿಲ್ಲ. ಆದರೆ, ಒಮ್ಮೆ ಹೀರೋ ಆದ ಮೇಲೆ ಜೆಕೆ ವಿಲನ್ ರೋಲ್ ಮಾಡ್ತಾ ಇರೋದು ಯಾಕೆ ಅಂತ ಕೇಳಿದರೆ ಅದು ವಿಲನ್ ರೋಲ್ ಅಲ್ಲ ಕೇವಲ ನೆಗೆಟಿವ್ ಶೇಡ್ ಇರೋ ಪಾತ್ರ ಎಂಬ ಸ್ಪಷ್ಟನೆ ಬರುತ್ತದೆ.

ಚಿತ್ರದಲ್ಲಿ ಜೆಕೆ ಸೇರಿದಂತೆ ಒಟ್ಟು ಮೂವರು ಮುಖ್ಯ ಪಾತ್ರಗಳಲ್ಲಿ ಕಾಣಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಹೇಮಂತ್ ಹೆಗ್ಡೆ ಹಾಗೂ ಅಗ್ನಿಸಾಕ್ಷಿ ಧಾರವಾಹಿ ಮತ್ತು ಕ್ರೇಜಿಲೋಕ ಚಿತ್ರಗಳ ಖ್ಯಾತಿಯ ವಿಜಯ್ ಸೂರ್ಯ ಉಳಿದ ಎರಡು ಪಾತ್ರಗಳಲ್ಲಿದ್ದಾರೆ.. ಹಾಗೆ ನೋಡಿದರೆ ಈ ಚಿತ್ರಕ್ಕೆ ಶ್...!! 2 ಅಂತಲೇ ಇಡಬೇಕೆಂದುಕೊಂಡಿದ್ದರಂತೆ. ಆದರೆ, ಈಗ ಇದೇ ಶೀರ್ಷಿಕೆಯ ರೈಟ್ಸ್ ನಟ ಕಂ ನಿರ್ದೇಶಕ ಕುಮಾರ್ ಗೋವಿಂದ್ ಬಳಿ ಇದೆ. ಅಲ್ಲದೆ ಶ್...!! ಪಾರ್ಟ್ 2 ಹೆಸರಿನಲ್ಲಿ ಗೋವಿಂದ್ ಅವರೇ ಸಿನಿಮಾ ಮಾಡಲಿದ್ದಾರೆ. ಹೀಗಾಗಿ ಹೇಮಂತ್ ಹೆಗಡೆ ಅವರಿಗೆ ಬೇರೆ ದಾರಿ ಇಲ್ಲದೆ ಮತ್ತೊಮ್ಮೆ ಶ್...!! ಎಂದಿದ್ದಾರೆ.

ಇವರ ಈ ಶ್...ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಅಸ್ತು ಅಂದಿದೆ. ಇನ್ನು ಸಿನಿಮಾ ಸೆಟ್ಟೇರುವುದೊಂದೇ ಬಾಕಿ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT