ಇಷಾ ಕೊಪ್ಪೀಕರ್ 
ಸಿನಿಮಾ ಸುದ್ದಿ

ಕುಣಿ ಕುಣಿ ಬಾಣಂತಿ

ಹಳೇ ನಟಿಯರಿಗೂ ಐಟಂ ಸಾಂಗುಗಳಿಗೂ ಆಗಿ ಬರಲ್ಲ. ಯಾಕೆಂದರೆ ಅವರು ಮಾಡ್ತೀನಿ ಅಂದ್ರೂ ಚಾನ್ಸ್ ಕೊಡುವವರು...

ಹಳೇ ನಟಿಯರಿಗೂ ಐಟಂ ಸಾಂಗುಗಳಿಗೂ ಆಗಿ ಬರಲ್ಲ. ಯಾಕೆಂದರೆ ಅವರು ಮಾಡ್ತೀನಿ ಅಂದ್ರೂ ಚಾನ್ಸ್ ಕೊಡುವವರು ಬೇಕಲ್ಲ. ಹಾಗಂತ ಹೊಸ ನಟಿಯರು ಐಟಂ ಸಾಂಗು ಮಾಡಲು ಮುಂದೆ ಬರಬೇಕೆಂದೇನೂ ಇಲ್ಲ. ಆದರೆ ರಮ್ಯಾರಂಥ ಕೆಲವರು ಬಹುಬೇಡಿಕೆಯ ಹಂತದಲ್ಲಿರುವಾಗಲೇ ಒಂದು ಐಟಂಸಾಂಗಿಗೆ ಹೆಜ್ಜೆ ಹಾಕಿ ಡಿಫರೆಂಟ್ ಅನಿಸಿ ಬಿಡುತ್ತಾರೆ.

ಕೆಲವರು ಮಾತ್ರ ಅದ್ಹೇಗೋ  ಚಾರ್ಮ್ ಉಳಿಸಿಕೊಳ್ತಾರೆ. ರಮ್ಯ ಕೃಷ್ಣ, ಸುಮನ್ ರಂಗನಾಥ್ ಥರದವರು. ಅವರ ಸಾಲಿಗೆ ಹೊಸತಾಗಿ ಸೇರುವವಳು ಇಷಾ ಕೊಪ್ಪೀಕರ್.ಈಕೆ ಗೊತ್ತಲ್ಲ? ವಿಷ್ಣು ವರ್ಧನ್ ಜತೆ 'ಸೂರ್ಯವಂಶ' ದಲ್ಲಿ ನಾಯಕಿಯಾಗಿ ನಟಿಸಿದವಳು. ಸುಮಾರು ಹದಿನಾಲ್ಕು ವರ್ಷಗಳ ಗ್ಯಾಪ್‌ನ ಬಳಿಕ ಇಷಾ ಕನ್ನಡಕ್ಕೆ ಮರಳಿದ್ದಾಳೆ.

ಕನ್ನಡ ಚಿತ್ರ ರಸಿಕರಿಗೆ ಇಷಾ ಬಹಳ ಚೆನ್ನಾಗಿ ಪರಿಚಯ ಇರುವ ಹೀರೋಯಿನ್. ಇದೀಗ 'ಲೂಟಿ' ಸಿನಿಮಾದಲ್ಲಿ ಮತ್ತೆ ಬಣ್ಣಹಚ್ಚಿದ್ದಾರೆ. ಕ್ರೇಜಿಸ್ಟಾರ್‌ನ 'ಓ ನನ್ನ ನಲ್ಲೆ'ಯಲ್ಲೂ ನಾಯಕಿಯಾಗಿ ಮಿಂಚಿದ್ದಳು. ಜೊತೆಗೆ 'ಹೂಂ ಅಂತೀಯಾ ಊಹೂಂ ಅಂತೀಯಾ' ಸಿನಿಮಾವನ್ನು ಮಾಡಿಹೋಗಿದ್ದಳು. ಇದೆಲ್ಲ 14 ವರ್ಷ ಹಿಂದಿನ ಮಾತು. ಈಗ ಲೂಟಿಯಲ್ಲಿ ಐಟಂ ಸಾಂಗಿಗೆ ಹೆಜ್ಜೆ ಹಾಕುವಾಗ ಆಕೆ ಮೂರು ತಿಂಗಳ ಬಾಣಂತಿ!

ಹೌದು, ಇಷಾ ಮೂರು ತಿಂಗಳ ಹಿಂದಷ್ಟೇ  ತಾಯಿಯಾಗಿದ್ದಾಳೆ. ಚಿತ್ರದ ಹಾಡನ್ನು ಮುಗಿಸುವ ಸಲುವಾಗಿ ಬಾಣಂತನವನ್ನೂ ಲೆಕ್ಕಿಸದೆ ಇಷಾ ಹೆಜ್ಜೆ ಹಾಕಿರುವುದು ವಿಶೇಷ. ಹಾಡು  ಕಲರ್‌ಫುಲ್ ಆಗಿ ಮೂಡಿ ಬಂದಿದ್ದು  ಶೀಘ್ರದಲ್ಲೇ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ. ಬಾಣಂತಿಯಾದರೂ ತಮ್ಮ ಸೊಂಟವನ್ನು ಹದಿನಾರರ ಬಾಲೆಯರು ನಾಚುವಂತ ಬಳುಕಿಸಿದ್ದಾರೆ ಅನ್ನೋದು ಆಗಿರುವ, ಆಗಲಿರುವ ಬಾಣಂತಿಯರ ಗಮನಕ್ಕೆ.  ಚಿತ್ರದಲ್ಲಿ  ಅವರದು ಪೊಲೀಸ್ ಆಫೀಸರ್ ಪಾತ್ರ. ಖಳನಟರ ಅಡ್ಡಕ್ಕೆ ಎಂಟ್ರಿಕೊಡುವ ಕಾಲ್ಪನಿಕ ಸಾಂಗ್ ಇದು. ಅಂಡರ್  ಕವರ್ ಕಾಪ್ ಆಗಿ ಬಂದು ಹಾಡಿನಲ್ಲಿ ಹೆಜ್ಜೆ ಹಾಕುವ ಸನ್ನಿವೇಶ ಎನ್ನುತ್ತಾರೆ  ನೃತ್ಯ ಸಂಯೋಜನೆ ಮಾಡಿರುವ ಇಮ್ರಾನ್ ಸರ್ದಾರಿಯಾ. ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ. ಗಿರೀಶ್ ಕಂಪ್ಲಾಪುರ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT