'ಆರ್‌ಎಕ್ಸ್ ಸೂರಿ' ಚಿತ್ರದಲ್ಲಿ ನಟ ವಿಜಯ್ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ದುನಿಯಾ ವಿಜಯ್ "ಪೆರಿಟಾಲ ರವಿನಾ"?

ನಟ ವಿಜಯ್ ಅಭಿನಯದ 'ಆರ್‌ಎಕ್ಸ್ ಸೂರಿ' ಚಿತ್ರದ ಕಥೆ ರಿಯಲ್ ಡಾನ್ ಒಬ್ಬನ ಜೀವನ ಆಧರಿಸಿದೆ ಎಂಬುದು.

ನಟ ವಿಜಯ್ ಅಭಿನಯದ 'ಆರ್‌ಎಕ್ಸ್ ಸೂರಿ' ಚಿತ್ರದ ಕಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಗುಸುಗುಸುಗೆ ಕಾರಣ ಚಿತ್ರದ ಕಥೆ ರಿಯಲ್ ಡಾನ್ ಒಬ್ಬನ ಜೀವನ ಆಧರಿಸಿದೆ ಎಂಬುದು.

ಹೌದು, ಶ್ರೀ ಜೈ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಕಥೆ ಪೆರಿಟಾಲ ರವಿ ಅವರ ಕಥೆ ಎನ್ನಲಾಗುತ್ತಿದೆ. ಅಲ್ಲದೆ ಚಿತ್ರದಲ್ಲಿ ವಿಜಯ್ ನಿರ್ವಹಿಸುವ ಪಾತ್ರ ಪೆರಿಟಾಲ ರವಿ ಅವರ ನಿಜ ಜೀವನದ ಪಾತ್ರ ಎಂಬುದು ಗಾಂಧಿನಗರದ ಗುಸುಗುಸು. ಸುರೇಶ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಕಥೆ ಪೆರಿಟಾಲ ರವಿ ಅವರದ್ದೇ ಎಂಬುದು ಅನುಮಾನ ಮೂಡುತ್ತಿರುವುದು ಯಾಕೆ? ಈಗಾಗಲೇ ಚಿತ್ರದ ಟ್ರೈಲರ್ ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ. ಇದನ್ನು ನೋಡಿದವರು ಮತ್ತು ವಿಜಯ್ ಪಾತ್ರ ನೋಡಿದಾಗ ಪೆರಿಟಾಲ ರವಿ ಅವರನ್ನು ಹೋಲುತ್ತಗೆ ಎಂಬುದು ಚರ್ಚೆಯ ವಸ್ತು.

ರವಿಶಂಕರ್, ಮಂಜು ಮುಂತಾದವರು ಅಭಿನಯಿಸಿರುವ ಈ ಚಿತ್ರದಲ್ಲಿ ವಿಜಯ್ ಮಚ್ಚು ಹಿಡಿದು ಗಲ್ಲಿ ಗಲ್ಲಿ ಓಡುವ, ತನ್ನ ವಿರೋಧಿಗಳನ್ನು ಅಟ್ಟಾಡಿಸಿಕೊಂಡು ನಡು ಬೀದಿಯಲ್ಲೇ ಕೊಲ್ಲುವ ದೃಶ್ಯಗಳನ್ನು ಒಳಗೊಂಡ ದೃಶ್ಯಗಳ ಒಂದು ಹಂತದಲ್ಲಿ ಪೆರಿಟಾಲ ರವಿ 'ರಕ್ತ ಚರಿತ್ರೆ'ಯನ್ನು ನೆನಪಿಸುತ್ತದೆ.

ಈ ಬಗ್ಗೆ ನಿರ್ಮಾಪಕ ಸುರೇಶ್ ಹೇಳುವುದೇನು?
ಇದೊಂದು ನೈಜ ಪ್ರೇಮ ಕಥೆ ಎನ್ನುವುದು ಸತ್ಯ. ಇಲ್ಲಿ ಪ್ರೀತಿಸುವ ನಾಯಕ ಒಬ್ಬ ಭೂಗತ ರೌಡಿ ಎನ್ನುವುದೂ ಕೂಡ ನಿಜ. ಆದರೆ ಅದು ಪೆರಿಟಾಲ ರವೀನಾ, ಮತ್ತೊಬ್ಬರನಾ ಎಂಬುದು ಸಿನಿಮಾ ಪೂರ್ತಿ ನೋಡಿ ತಿಳಿದುಕೊಳ್ಳುವುದು ಒಳ್ಳೆಯದು' ಎಂಬುದು ನಿರ್ಮಾಪಕ ಸುರೇಶ್ ಅವರ ಉತ್ತರ.

ಆದರೆ ಮುಖಕ್ಕೆ ಬಣ್ಣ ಮೆತ್ತಿಕೊಂಡು ಲಾಂಗು ಹಿಡಿದು ನಿಂತಿರುವ ಸ್ಟಿಲ್‌ಗಳನ್ನು ನೋಡಿದಾಗ ಆಂಧ್ರದ ರಕ್ತಸಿಕ್ತ ಇತಿಹಾಸಕ್ಕೆ ಸನಿಹವಾಗಿದೆ ಎನಿಸುತ್ತದೆ. ಈ ಕಾರಣಕ್ಕೆ ರಾಮ್‌ಗೋಪಾಲ್ ವರ್ಮಾ ಚಿತ್ರಗಳ ಆಚೆಗೆ ಪೆರಿಟಾಲ ರವಿ ಮತ್ತೆ ತೆರೆ ಮೇಲೆ ಬರುತ್ತಿದ್ದಾನೆ ಎನ್ನುವುದು ಸದ್ಯದ ಸುದ್ದಿ. ಹೊಸ ಹುಡುಗಿ ಆಕಾಂಕ್ಷಾ ಚಿತ್ರದ ನಾಯಕಿಯಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಎಚ್.ಸಿ.ವೇಣು ಛಾಯಾಗ್ರಾಹಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಆರ್‌ಎಕ್ಸ್ ಸೂರಿ ಚಿತ್ರಕ್ಕೆ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ತೆರೆಗೆ ಬರುವ ಸಾಧ್ಯತೆಗಳಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT