ರಥಾವರ ಸಿನೆಮಾ 
ಸಿನಿಮಾ ಸುದ್ದಿ

ಹಿನ್ನಲೆಯ ಗಾಯನಕ್ಕೆ ಮತ್ತೊಬ್ಬ ನಟನ ಸೇರ್ಪಡೆ

ಕನ್ನಡ ಚಿತ್ರನಟರು ಹಿನ್ನಲೆ ಗಾಯಕರಾಗುತ್ತಿರುವುದು ಹೊಸದೇನಲ್ಲ. ಈಗ ಈ ಪಂಗಡಕ್ಕೆ ಹೊಸ ಸೇರ್ಪಡೆ ಉಗ್ರಂ ಚಲನಚಿತ್ರದ ನಟ ಶ್ರೀಮುರಳಿ

ಬೆಂಗಳೂರು: ಕನ್ನಡ ಚಿತ್ರನಟರು ಹಿನ್ನಲೆ ಗಾಯಕರಾಗುತ್ತಿರುವುದು ಹೊಸದೇನಲ್ಲ. ಈಗ ಈ ಪಂಗಡಕ್ಕೆ ಹೊಸ ಸೇರ್ಪಡೆ ಉಗ್ರಂ ಚಲನಚಿತ್ರದ ನಟ ಶ್ರೀಮುರಳಿ

ತಮ್ಮದೇ ಮುಂದಿನ ಸಿನೆಮಾ 'ರಥಾವರ'ಕ್ಕೆ ಮುರಳಿ ಗಾಯಕರಾಗಿ ಹೊರಹೊಮ್ಮಿದ್ದಾರೆ. ಯೋಗರಾಜ್ ಭಟ್ಟರ ಗೀತರಚನೆಗೆ ದನಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. "ಭಟ್ಟರ ಸಾಹಿತ್ಯ ಇರುವುದರಿಂದ ಹಾಗು ಹಾಡು ಕ್ಯಾಚಿ ಆಗಿರುವುದರಿಂದ ಹಾಡಲು ಉತ್ಸುಕನಾಗಿದ್ದೇನೆ" ಎನ್ನುತ್ತಾರೆ ಮುರಳಿ.

ಈ ಹಿಂದೆ ಹಲವು ಕನ್ನಡದ ಚಿತ್ರನಟರು ಹಾಡಿರುವ ಹಾಡುಗಳು ಜನಪ್ರಿಯವಾಗಿರುವ ಹಿನ್ನಲೆಯಲ್ಲಿ ಈ ಹಾಡು ಕೂಡ ಜನರ ಮಧ್ಯೆ ಸೂಪರ್ ಹಿಟ್ ಆಗುತ್ತದೆ ಎಂಬ ಅಭಿಪ್ರಾಯವಿದೆ ಗಾಂಧಿನಗರದಲ್ಲಿ. "ನಾನು ನನ್ನ ಕೆಲಸವನ್ನು ಮಾಡಿ ಜನರ ನಿರಧಾರಕ್ಕೆ ನಿಡುತ್ತೇನೆ. ಹಲವಾರು ಕಾರ್ಯಕ್ರಮಗಳನ್ನು ನಾನು ಹಾಡಿದ್ದೇನೆ ಹಾಗು ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಅದಕ್ಕೆ ನನ್ನ ಸಿನೆಮಾದಲ್ಲೇ ಏಕೆ ಹಾಡಬಾರದು ಎಂದೆನಿಸಿತು" ಎನ್ನುತ್ತಾರೆ ಮುರಳಿ.

ಹೆಚ್ಚೇನು ಗುಟ್ಟು ಬಿಚ್ಚಿಡದ ಮುರಳಿ ಇನ್ನು ೧೫-೨೦ ದಿನಗಳಲ್ಲಿ ನಾನು ಈ ಹಾಡನ್ನು ಹಾಡಿದ್ದೇಕೆ ಎಂದು ಜನರಿಗೆ ತಿಳಿಯಲಿದೆ ಎನ್ನುತ್ತಾರೆ ಮುರಳಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT