ಸ್ಯಾಂಡಲ್ ವುಡ್ ನಟ ಕಾರ್ತಿಕ್ ಜಯರಾಂ 
ಸಿನಿಮಾ ಸುದ್ದಿ

ಖಳ ನಾಯಕನ ಪಾತ್ರದ ಮೂಲಕ ಕಾರ್ತಿಕ್ ಜಯರಾಂ ಕಾಲಿವುಡ್ ಗೆ ಎಂಟ್ರಿ

ಕನ್ನಡದ ಧಾರಾವಾಹಿ ಅಶ್ವಿನಿ ನಕ್ಷತ್ರದ ಮೂಲಕ ಜನಪ್ರಿಯತೆ ಪಡೆದಿರುವ ನಟ ಕಾರ್ತಿಕ್ ಜಯರಾಂ, ತಮಿಳು ಚಿತ್ರರಂದಲ್ಲೂ ನಟನೆ ಮಾಡಲಿದ್ದಾರೆ.

ಕನ್ನಡದ ಧಾರಾವಾಹಿ ಅಶ್ವಿನಿ ನಕ್ಷತ್ರದ ಮೂಲಕ ಜನಪ್ರಿಯತೆ ಪಡೆದಿರುವ ನಟ ಕಾರ್ತಿಕ್ ಜಯರಾಂ, ತಮಿಳು ಚಿತ್ರರಂದಲ್ಲೂ ನಟನೆ ಮಾಡಲಿದ್ದಾರೆ.

ವಿಲನ್ ಪಾತ್ರಗಳ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದ್ದ ಕಾರ್ತಿಕ್ ಜಯರಾಂ, ಖಳನಾಯಕನ ಪಾತ್ರದ ಮೂಲಕವೇ ತಮಿಳು ಚಿತ್ರರಂಗಕ್ಕೂ ಎಂಟ್ರಿ ನೀಡುತ್ತಿದ್ದಾರೆ. ಕಾಲಿವುಡ್ ನಟ ಕಾರ್ತಿಯೊಂದಿಗೆ ಶಕುನಿ ಚಿತ್ರ ಮಾಡಿದ್ದ ಶಂಕರ್ ದಯಾಳ್ ಕಾರ್ತಿಕ್ ಜಯರಾಂ ನಟಿಸುತ್ತಿರುವ ಚಿತ್ರವನ್ನೂ ನಿರ್ದೇಶಿಸುತ್ತಿದ್ದು ವಿಷ್ಣು ವಿಶಾಲ್ ನಾಯಕರಾಗಿ ನಟಿಸುತ್ತಿದ್ದಾರೆ.

ಚಿತ್ರೀಕರಣಕ್ಕಾಗಿ ಚೆನ್ನೈ ನಲ್ಲಿರುವ ಕಾರ್ತಿಕ್, ಸಿಟಿ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು "ನಿರ್ದೇಶಕ ಶಂಕರ್ ದಯಾಳ್, ತಮ್ಮ ಮುಂದಿನ ಚಿತ್ರದ ಖಳ ನಾಯಕನ ಪಾತ್ರಕ್ಕಾಗಿ ಅನುಭವಿ ನಟನನ್ನು ಹುಡುಕುತ್ತಿದ್ದರಂತೆ, ಆದರೆ ಪಾತ್ರಕ್ಕೆ ಸರಿಹೊಂದುವ ವ್ಯಕ್ತಿ ಸಿಕ್ಕಿರಲಿಲ್ಲ. ತಮಗೆ ಸಿಸಿಎಲ್ ಮೂಲಕ ಪರಿಚಯವಿದ್ದ ಚಿತ್ರದ ನಾಯಕ ವಿಷ್ಣು ವಿಶಾಲ್, ನನ್ನ ಬಗ್ಗೆ ನಿರ್ದೇಶಕರಿಗೆ ತಿಳಿಸಿದ್ದರು. ಖಳನಾಯಕನ ಪಾತ್ರವಾಗಿದ್ದರಿಂದ, ನನ್ನನ್ನು ಸಂಪರ್ಕಿಸಲು ವಿಷ್ಣು ವಿಶಾಲ್ ಹಿಂದೇಟು ಹಾಕಿದ್ದರು. ಖಳನಾಯಕನ ಪಾತ್ರ ನನಗೆ ಹೇಳಿಮಾಡಿಸಿದಂತಿದ್ದ ಕಾರಣ ನಟನೆಗೆ ಒಪ್ಪಿದೆ ಎಂದು ಹೇಳಿದ್ದಾರೆ.    
ತಮಿಳಿನ ಚಿತ್ರದಲ್ಲಿ ಕಾರ್ತಿಕ್ ಜಯರಾಂ ಯುವ ರಾಜಕಾರಣಿಯ ಪಾತ್ರ ನಿರ್ವಹಿಸುತ್ತಿದ್ದು ಚಿತ್ರಕಥೆಯನ್ನು ಖಳನಾಯಕನ ಪಾತ್ರದ ಸುತ್ತಲೇ ಹೆಣೆಯಲಾಗಿದೆಯಂತೆ. ಸ್ಯಾಂಡಲ್ ವುಡ್ ನಲ್ಲಿ ಹಲವು ಚಿತ್ರಗಳಲ್ಲಿ ನಟಿಸುತ್ತಿರುವ ಕಾರ್ತಿಕ್, ಚಿತ್ರ ಬಿಡುಗಡೆ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರ ಬಿಡುಗಡೆ ಸಂದರ್ಭದಲ್ಲಿ ಕನ್ನಡ ಚಿತ್ರಗಳ ನಡುವೆ ಅಥವಾ ಅನ್ಯ ಭಾಷ್ಯಾ ಚಿತ್ರಗಳ ನಡುವೆ ಘರ್ಷಣೆ ಉಂಟಾಗಬಾರದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT