ನರ್ತಕಿ ಚಿತ್ರಮಂದಿರದ ಮುಂದೆ ಉಪ್ಪಿ೨ ಉಲ್ಟಾ ಕಟೌಟ್ 
ಸಿನಿಮಾ ಸುದ್ದಿ

ಉಪ್ಪಿ೨: ಎಲ್ಲಾನು ಉಲ್ಟಂಪಲ್ಟ ಕಾಣ್ತದೆ

ನಟ ನಿರ್ದೇಶಕ ಉಪೇಂದ್ರ ನಿರ್ದೇಶನದ ಉಪ್ಪಿ೨ ಸಿನೆಮಾ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚಲನಚಿತ್ರ ಆಗಸ್ಟ್ ೧೪ ರಂದು ಕರ್ನಾಟಕದಾದ್ಯಂತ

ಬೆಂಗಳೂರು: ನಟ ನಿರ್ದೇಶಕ ಉಪೇಂದ್ರ ನಿರ್ದೇಶನದ ಉಪ್ಪಿ೨ ಸಿನೆಮಾ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚಲನಚಿತ್ರ ಆಗಸ್ಟ್ ೧೪ ರಂದು ಕರ್ನಾಟಕದಾದ್ಯಂತ ೬೦೦ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದ್ದು, ಎರಡು ದಿನಗಳ ಹಿಂದೆಯಷ್ಟೇ ಗಾಂಧಿನಗರದ ನರ್ತಕಿ ಚಿತ್ರಮಂದಿರದ ಎದುರು ಕಟೌಟ್ ನಿಲ್ಲಿಸಲಾಗಿದೆ. ಆದರೆ ಇಲ್ಲಿ ವಿಶೇಷವಿರುವುದು ಕಟೌಟ್ ನಿಲ್ಲಿಸಿರುವ ರೀತಿಯಲ್ಲಿ. ಗಾಂಧಿನಗರ ಹಿಂದೆಂದು ಕಂಡರಿಯದ ರೀತಿಯಲ್ಲಿ. ಹೌದು ಕಟೌಟ್ ತಲೆಕೆಳಕಾಗಿ ನಿಲ್ಲಿಸಿದ್ದು, ಇದು ಭಾರಿ ಜನಪ್ರಿಯತೆ ಪಡೆದು, ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಉಪ್ಪಿ ಗಿಮಿಕ್ ಇಷ್ಟಕ್ಕೆ ನಿಂತಿಲ್ಲ. ನೆನ್ನೆಯಷ್ಟೇ ಬಿಡುಗಡೆಯಾಗಿರುವ ಮತ್ತೊಂದು ಟೀಸರ್ ನಲ್ಲಿ ಉಪೇಂದ್ರ ದೇವಸ್ಥಾನದಲ್ಲಿ ಉಪ್ಪಿ ವಿಗ್ರಹ ತಲೆಕೆಳಕಾಗಿ ನಿಂತಿದೆ. ಹೀಗೆ ತಮ್ಮ ಅಭಿಮಾನಿಗಳಲ್ಲಿ ಕುತೂಹಲವನ್ನು ಸಿಕ್ಕಾಪಟ್ಟೆ ಏರಿಸಿರುವ ಉಪೇಂದ್ರರ ಪ್ಲ್ಯಾನ್ ಸಿನೆಮಾ ಬಿಡುಗಡೆಯ ನಂತರ ಉಲ್ಟಂಪಲ್ಟ ಆಗಬಾರದಷ್ಟೇ!

ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಹಾಗೂ ನಟನೆ ಎಲ್ಲವೂ ಉಪೇಂದ್ರರದ್ದೇ. ರಷ್ಯಾ ಮೂಲಕ ಮಾಡೆಲ್ ಕ್ರಿಸ್ಟಿನಾ ಚಿತ್ರದ ನಾಯಕಿ. ಪಾರೂಲ್ ಯಾದವ್ ಚಿತ್ರದ ಮತ್ತೊಬ್ಬ ನಾಯಕಿ. ಅಶೋಕ್ ಕಶ್ಯಪ್ ಕ್ಯಾಮೆರಾಮ್ಯಾನ್. ಗುರುಕಿರಣ್ ಸಂಗೀತದ ಈ ಸಿನೆಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಕಾಣಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT